ಮಂಗಳವಾರ, ಸೆಪ್ಟೆಂಬರ್ 30, 2008



ತ್ಯಾಜ್ಯ ನಿರ್ವಹಣೆ: ಯಾರು ಹೊಣೆ?


1976ರಲ್ಲಿ ನಡೆದ ಘಟನೆ. ಅಮೆರಿಕಾದ ನಯಾಗರ ನಗರದ ಶಾಲೆಯೊಂದರ ಮಕ್ಕಳು ಇದ್ದಕ್ಕಿದ್ದಂತೆ ಅಸ್ವಸ್ಥರಾಗತೊಡಗಿದರು. ವಿಚಿತ್ರ ಲಕ್ಷಣಗಳುಳ್ಳ ರೋಗಕ್ಕೆ ಅಸಂಖ್ಯಾತ ಮಕ್ಕಳು ತುತ್ತಾದರು. ಕೆಲವರು ಮೃತಪಟ್ಟರು. ಶಾಲೆಯ ಅಕ್ಕಪಕ್ಕದಲ್ಲಿ ವಾಸಿಸುತ್ತಿದ್ದ 200ಕ್ಕೂ ಹೆಚ್ಚು ಕುಟುಂಬಗಳು ಕ್ಯಾನ್ಸರ್‌ಗೆ ತುತ್ತಾದರು. ಹುಟ್ಟುವ ಮಕ್ಕಳು ಗರ್ಭದಲ್ಲೇ ಸತ್ತವು, ಅಂಗವಿಕಲರಾಗಿ ಹುಟ್ಟಿದವು. ಕಾರಣ ಹುಡುಕುತ್ತಾ ಹೊರಟಾಗ ಬಹಿರಂಗಗೊಂಡ ವಿಷಯಕ್ಕೆ ಅಮೆರಿಕಾ ಮಾತ್ರವಲ್ಲ, ಇಡೀ ಜಗತ್ತು ನಡುಗಿತು.
ಕಾರಣವಿಷ್ಟೆ. ಆ ಜಾಗ ಹೂಕರ್‌ ಪ್ಲಾಸ್ಟಿಕ್‌ ಮತ್ತು ಕೆಮಿಕಲ್‌ ಕಂಪನಿಯ `ತಿಪ್ಪೆಗುಂಡಿ’ಯಾಗಿತ್ತು.
ಹೂಕರ್‌ ಪ್ಲಾಸ್ಟಿಕ್‌ ಮತ್ತು ಕೆಮಿಕಲ್‌ ಕಂಪನಿ ಆ ಜಾಗವನ್ನು ಹಿಂದೆ ತನ್ನ ತ್ಯಾಜ್ಯ ವಿಲೇವಾರಿಗಾಗಿ ಪಡೆದಿತ್ತು. ಹತ್ತು ವರ್ಷಗಳ ನಂತರ ಜಾಗವನ್ನು ಮಾರಾಟ ಮಾಡಿತ್ತು. ಅದೇ ಜಾಗದಲ್ಲಿ ಶಾಲೆಯನ್ನು ನಿರ್ಮಾಣ ಮಾಡಲಾಗಿತ್ತು.
ಆಗಬಾರದ್ದು ಆಗಿ ಹೋದ ನಂತರ ಆ ಜಾಗ `ಶುದ್ಧ’ಗೊಳಿಸಲು ಅಮೆರಿಕಾ 100 ಮಿಲಿಯನ್‌ ಡಾಲರ್‌ ಹಣ ವೆಚ್ಚ ಮಾಡಿತು. ಸೌಂದರ್ಯ ನಗರ ಎಂದೇ ಹೆಸರಾಗಿದ್ದ ನಯಾಗರದಲ್ಲಿ ನಡೆದ ಈ ಘಟನೆಯಿಂದ ವೈಟ್‌ಹೌಸ್‌ ನಾಯಕರು ಇರುಸು ಮರುಸಿಗೆ ಒಳಗಾಗಬೇಕಾಯಿತು.
ಈ ಘಟನೆಯ ನಂತರ ವಿಷಯುಕ್ತ ತ್ಯಾಜ್ಯದ ಅಪಾಯದ ಅರಿವು ಜಗತ್ತಿಗೆ ಆಯಿತು. `ವಿಶ್ವ ಪರಿಸರ ವಿಷಯ’ದಲ್ಲಿ ಇದು ಮರೆಯಲಾಗದ ಪ್ರಕರಣವಾಗಿದೆ.
ತ್ಯಾಜ್ಯ ವಿಲೇವಾರಿ ಒಂದು ಜಾಗತಿಕ ಸಮಸ್ಯೆ. ಪಾಶ್ಚಿಮಾತ್ಯ ರಾಷ್ಟ್ರಗಳು ತ್ಯಾಜ್ಯ ನಿರ್ವಹಣೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿವೆ. ಆದರೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಬಡ ರಾಷ್ಟ್ರಗಳನ್ನು ತಮ್ಮ ಡಸ್ಟ್‌ಬಿನ್‌ಗಳೆಂದು ಭಾವಿಸಿರುವುದು ದುರದೃಷ್ಟಕರ. ತಮ್ಮ ರಾಷ್ಟ್ರದ ಅಪಾಯಕಾರಿ ತ್ಯಾಜ್ಯವನ್ನು ಹಡಗುಗಳ ಮೂಲಕ ಸಾಗಿಸಿ ಬಡರಾಷ್ಟ್ರಗಲ್ಲಿ ಚೆಲ್ಲುತ್ತಿವೆ.
1986ರಿಂದ 1988ರ ನಡುವೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ತೃತೀಯ ಜಗತ್ತಿನ ಬಡ ರಾಷ್ಟ್ರಗಳಿಗೆ 3.656 ಮಿಲಿಯನ್‌ ಟನ್‌ ಅಪಾಯಕಾರಿ ತ್ಯಾಜ್ಯವನ್ನು ಸಾಗಿಸಿವೆ. ಈ ವಿಷಯವನ್ನು ಕೋಲ್ಕತ್ತಾದ ಅಮೃತ ಬಜಾರ್‌ ಪತ್ರಿಕಾ 1989 ನವೆಂಬರ್‌ 25ರಂದು ಪ್ರಕಟಿಸಿದಾಗ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಧೋರಣೆ ಬಗ್ಗೆ ಭಾರತದಲ್ಲಿ ಪ್ರಬಲ ವಿರೋಧ ವ್ಯಕ್ತವಾಯಿತು. ಈ ಕುರಿತು ರಾಷ್ಟ್ರಗಳ ನಡುವೆ ಒಡಂಬಡಿಕೆಯಾಗಿತ್ತು ಎಂಬ ವಿಷಯ ಅನಂತರ ಹೊರಬಿತ್ತು.
ಒಸಾಮಾ ಬಿನ್‌ ಲಾಡೆನ್‌ ನೇತೃತ್ವದ ಅಲ್‌ಕೈದಾ ಸಂಘಟನೆಯ ಉಗ್ರಗಾಮಿಗಳು ಕೆಡವಿದ ವಿಶ್ವ ವಾಣಿಜ್ಯ ಕಟ್ಟಡದ ತ್ಯಾಜ್ಯವನ್ನು ಅಮೆರಿಕಾ ಭಾರತಕ್ಕೆ ತಂದು ಸುರಿಯಿತು. ಅಮೆರಿಕಾದ ದೊಡ್ಡಣ್ಣನ ನೀತಿಯ ವಿರುದ್ಧ ಭಾರತೀಯರು ತಿರುಗಿ ಬೀಳಲಿಲ್ಲ.
ಕೆಲರಾಷ್ಟ್ರಗಳು ತಮ್ಮ ತ್ಯಾಜ್ಯವನ್ನು ಸಮುದ್ರಕ್ಕೆ ಸುರಿಯುತ್ತಾ ಬಂದಿವೆ. ಇದು ಸಾಗರ ಜೀವಿಗಳ ಜೀವಕ್ಕೆ ಕುತ್ತಾಗುತ್ತಿದೆ. ಆಗಾಗ ಸಮುದ್ರದಲ್ಲಿ ಲಕ್ಷಾಂತರ ಮೀನುಗಳು ಸಾಯುವುದಕ್ಕೆ ಅಪಾಯಕಾರಿ ತ್ಯಾಜ್ಯವೇ ಕಾರಣ.
ಆಫ್ರಿಕಾ ರಾಷ್ಟ್ರಗಳು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ತ್ಯಾಜ್ಯ ವಿಲೇವಾರಿ ಕ್ರಮವನ್ನು ಬಲವಾಗಿ ವಿರೋಧಿಸಿವೆ. ಕೀನ್ಯಾದ ಮಾಜಿ ಅಧ್ಯಕ್ಷ ಡ್ಯಾನಿಯಲ್‌ ಅರಪ್‌ ಮೊಯಿ ಇದನ್ನು `ವಿಷಬೀಜ ಭಯೋತ್ಪಾದನೆ’ ಎಂದು ಬಣ್ಣಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಾಯಕಾರಿ ತ್ಯಾಜ್ಯ ವಿಲೇವಾರಿಗೆ ಹಲವು ನೀತಿ ನಿಯಮಗಳನ್ನು ರೂಪಿಸಲಾಗಿದೆ. ಅವುಗಳಲ್ಲಿ `ಬೆಸಲ್‌ ಮಾತುಕತೆ’ ಪ್ರಮುಖವಾದುದು. ಇದನ್ನು ಅಮೆರಿಕಾ ಸಂಯುಕ್ತ ಸಂಸ್ಥಾನದ ಪರಿಸರ ಕಾರ್ಯಕ್ರಮದಿಂದ (UNEP) 1989ರಲ್ಲಿ ರೂಪಿಸಲಾಯಿತು. ಈ ಮಾತುಕತೆಯಲ್ಲಿ 150ಕ್ಕೂ ಹೆಚ್ಚುರಾಷ್ಟ್ರಗಳು ಭಾಗವಹಿಸಿದ್ದವು. ತ್ಯಾಜ್ಯ ವಿಲೇವಾರಿ ಕ್ರಮವನ್ನೊಳಗೊಂಡ ಒಂದು ಕರಡನ್ನು ಈ ಸಭೆಯಲ್ಲಿ ಅಂಗೀಕರಿಸಲಾಯಿತು.
ತ್ಯಾಜ್ಯದ ವಿಷಯದಲ್ಲಿ ಭಾರತದ ಸ್ಥಿತಿ ಭಯಂಕರವಾಗಿದೆ. ಭಾರತ ಎದುರಿಸುತ್ತಿರುವ ಸಮಸ್ಯೆಗಳಲ್ಲಿ ತಿಪ್ಪೆಗುಂಡಿ ಸಮಸ್ಯೆಯೂ ಒಂದು! ಹಲವು ಕಾನೂನುಗಳಿದ್ದರೂ ತ್ಯಾಜ್ಯ ನಿರ್ವಹಣೆ ಅಸಮರ್ಪಕವಾಗಿದೆ. ಪರಿಸರ (ಸಂರಕ್ಷಣೆ) ಕಾನೂನು- 1986ರ ಹಲವು ಸೆಕ್ಷನ್‌ಗಳಲ್ಲಿ ತ್ಯಾಜ್ಯ ನಿರ್ವಹಣೆಯ ವಿಧಾನಗಳನ್ನು ಉಲ್ಲೇಖಿಸಲಾಗಿದೆ. ತ್ಯಾಜ್ಯ ನಿರ್ವಹಣಾ ನಿಯಮಗಳು- 1989 ಇದರಲ್ಲಿ ಹಲವು ಕ್ರಮವಿಧಾನಗಳನ್ನು ನೀಡಲಾಗಿದೆ. ಈ ಕಾನೂನುಗಳಿರುವುದು ಬಹು ಸಂಖ್ಯಾತ ಭಾರತೀಯರಿಗೆ ಗೊತ್ತಿಲ್ಲ. ಡಸ್ಟ್‌ಬಿನ್‌ ಲಾ ಯಾರಿಗೆ ಬೇಕು?!
ರಾಷ್ಟ್ರದ ಮಲಿನ ನಗರಗಳಲ್ಲಿ ಬೆಂಗಳೂರು ಕೂಡ ಒಂದು. ಇಲ್ಲಿ ಪ್ರತಿನಿತ್ಯ 2500 ಟನ್‌ ವಿಷಯುಕ್ತ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಈ ೃಹತ್‌ ತ್ಯಾಜ್ಯದ ಅವೈಜ್ಞಾನಿಕ ವಿಲೇವಾರಿ ಕ್ರಮದಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮಗಳು ಉಂಟಾಗುತ್ತಿವೆ. ಈ ತ್ಯಾಜ್ಯ ಬಹಳ ಅಪಾಯಕಾರಿಯಾಗಿದ್ದು, ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ವಿಲೇವಾರಿಗೆ ಸೂಕ್ತ ನಿರ್ವಹಣಾ ಕ್ರಮಗಳನ್ನು ಅನುಸರಿಸದೆ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುತ್ತಿರುವ ಕಾರಣ ಗಾಳಿ, ಜಲ, ಅಂತರ್ಜಲ ಮಲಿನಗೊಳ್ಳುತ್ತಿವೆ.
ಬರೀ ಬೆಂಗಳೂರು ಮಾತ್ರವಲ್ಲ. ಎಲ್ಲಾ ಮೆಟ್ರೋಪಾಲಿಟನ್‌ ನಗರಗಳ ಹಣೆಬರಹವೂ ಇದೇ. ನವದೆಹಲಿಯಲ್ಲಿ ದಿನಕ್ಕೆ 4000 ಟನ್‌ ತ್ಯಾಜ್ಯ ಉತ್ಪತ್ತಿಯಾದರೆ ಮುಂಬೈ ನಗರದಲ್ಲಿ 4500 ಟನ್‌ ಉತ್ಪತ್ತಿಯಾಗುತ್ತಿದೆ. ರಾಷ್ಟ್ರಮಟ್ಟದಲ್ಲಿ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ಇದೆ. ಎಲ್ಲಾ ರಾಜ್ಯಗಳಲ್ಲಿಯೂ ಮಾಲಿನ್ಯ ನಿಯಂತ್ರಣ ಮಂಡಳಿಗಳಿವೆ. ಇವು ಮಾಲಿನ್ಯದ ಮಟ್ಟವನ್ನು ಅಳೆದು ಸುರಿದು ಅಂಕಿ ಅಂಶ ನೀಡುತ್ತವೆ. ತ್ಯಾಜ್ಯ ವಿಲೇವಾರಿಗೆ ಹಲವು ನೀತಿ ನಿಯಮಾವಳಿಗಳನ್ನು ಜಾರಿ ಮಾಡಿವೆ. ಆದರೆ ಎಲ್ಲಾ ನಿಯಮಗಳು ಕಡತದಲ್ಲಿ ಭದ್ರವಾಗಿವೆ. ಭಾರತ ತ್ಯಾಜ್ಯ ವಿಲೇವಾರಿಯಲ್ಲಿ ಸಂಪೂರ್ಣವಾಗಿ ಸೋತಿದೆ.
ವ್ಯರ್ಥ ತ್ಯಾಜ್ಯಗಳು ಮೂರು ರೀತಿಯಲ್ಲಿರುತ್ತವೆ. ದ್ರವ, ಘನ ಮತ್ತು ರೇಡಿಯೋ ವಿಕಿರಣ ತ್ಯಾಜ್ಯ. ಕೈಗಾರಿಕೆ ಹೊರಸೂಸುವ ವ್ಯರ್ಥ ವಸ್ತು, ಕ್ಲೋರೋಫ್ಲೋರೋ ಕಾರ್ಬನ್‌ (ಸಿಎಫ್‌ಸಿ) ಮುಂತಾದವು ದ್ರವತ್ಯಾಜ್ಯದಲ್ಲಿ ಸೇರುತ್ತವೆ. ಇದು ಬಹಳ ಬೇಗ ಗಾಳಿ, ನೀರಿನೊಡನೆ ಸೇರಿ ವಾತಾವರಣವನ್ನು ಹಾಳುಗೆಡವಬಲ್ಲದು. ದ್ರವತ್ಯಾಜ್ಯದ ಶುದ್ಧೀಕರಣ ಬಹಳ ಕಷ್ಟ. ಇದು ಸದಾ ವಾತಾವರಣದಲ್ಲಿ ಅಸ್ತಿತ್ವದಲ್ಲಿರುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.
ಮಾನವ ಬಳಸಿ ಬಿಸಾಡಿದ ವಸ್ತುಗಳನ್ನು ಘನತ್ಯಾಜ್ಯ ಎನ್ನಬಹುದು. ಆಸ್ಪತ್ರೆ ತ್ಯಾಜ್ಯ, ಸತ್ತ ಪ್ರಾಣಿ ಪಕ್ಷಿ ಗಿಡಮರಗಳು ಮುಂತಾದವು ಘನ ತ್ಯಾಜ್ಯದಲ್ಲಿ ಸೇರುತ್ತವೆ. ವಿಲೇವಾರಿ ಕ್ರಮಗಳನ್ನು ಅನುಸರಿಸಿದರೆ ಇದನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದು.
ನಾಗರಿಕ ಪರಮಾಣು ಶಕ್ತಿ ಉತ್ಪಾದನೆಯಲ್ಲಿ `ರೇಡಿಯೋ ವಿಕಿರಣ ತ್ಯಾಜ್ಯ’ ಹೊರಹೊಮ್ಮುತ್ತದೆ. ಈಗ ಎಲ್ಲಾ ರಾಷ್ಟ್ರಗಳು ನಾಗರಿಕ ಪರಮಾಣು ರಾಷ್ಟ್ರಗಳಾಗಿ ಮಾರ್ಪಡುತ್ತಿದ್ದು, ಪರಮಾಣು ಇಂಧನ ಶಕ್ತಿ ಘಟಕಗಳ ನಿರ್ಮಾಣದಲ್ಲಿ ತೊಡಗಿವೆ. ಪರಮಾಣು ಉತ್ಪಾದನೆಗೆ ಮುಖ್ಯವಾಗಿ ಬೇಕಾಗಿರುವುದು ಥೋರಿಯಂ. ಇದು ಬಹಳ ದುಬಾರಿ ಇಂಧನ ಮೂಲ. ಒಂದು ಕೆ.ಜಿ. ಥೋರಿಯಂ ಮೂರು ಸಾವಿರ ಟನ್‌ ಕಲ್ಲಿದ್ದಲಿಗೆ ಸಮ. ರೇಡಿಯೋ ವಿಕಿರಣ ತಾಜ್ಯ ಜೀವಮಂಡಲದ ಮೇಲೆ ಭೀಕರ ಪರಿಣಾಮ ಬೀರುತ್ತದೆ.
ವಾಯುಮಾಲಿನ್ಯದಲ್ಲಿ ಬೆಂಗಳೂರು ಹಲವು ವರ್ಷಗಳಿಂದ ಪ್ರಥಮ ಸ್ಥಾನ ಕಾಯ್ದುಕೊಂಡಿದೆ. ಇಲ್ಲಿ ಪ್ರತಿ ತಿಂಗಳು 15000 ವಾಹನಗಳು ನೋಂದಾವಣೆಗೊಳ್ಳುತ್ತಿವೆ. ಬೆಂಗಳೂರಿನ ಗಾಳಿ ಮಲಿನವಾಗುವುದಕ್ಕೆ ವಾಹನಗಳೇ ಕಾರಣ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ದೃಢಪಡಿಸಿದೆ.
ಇತ್ತೀಚೆಗೆ ತ್ಯಾಜ್ಯ ವಿಲೇವಾರಿ ಅಕ್ರಮವಾಗುತ್ತಿದೆ. ತ್ಯಾಜ್ಯ ಸಾಗಣೆದಾರರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಅಲ್ಲದೆ ನೆರೆಯ ತಮಿಳುನಾಡು ಮತ್ತು ಕೇರಳ ರಾಜ್ಯಗಳು ತಮ್ಮ ತಾಜ್ಯವನ್ನು ಬೆಂಗಳೂರಿನ ಹೊರವಲಯದ ಖಾಲಿ ಪ್ರದೇಶಗಳಲ್ಲಿ ಸುರಿಯುತ್ತಿರುವುದು ಪತ್ತೆಯಾಗಿದೆ. ಈ ವಿಷಯವನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ದೇಶಕ ಶರತ್‌ಚಂದ್ರ ತಿಳಿಸಿದ್ದಾರೆ.
ತ್ಯಾಜ್ಯ ನಿರ್ವಹಣೆಗೆ ಸರ್ಕಾರ ಮಾತ್ರ ಹೊಣೆಯಲ್ಲ. ಸಾರ್ವಜನಿಕರೂ ಹೊಣೆಗಾರರೇ. ತಮ್ಮ ಮನೆಯ ತ್ಯಾಜ್ಯ ನಿರ್ವಹಣೆಗಾಗಿ ಕನಿಷ್ಠ ಕ್ರಮಗಳನ್ನು ಅನುಸರಿಸಿದರೆ ಅರ್ಧದಷ್ಟು ಸಮಸ್ಯೆಗೆ ಪರಿಹಾರ ದೊರೆಯುತ್ತದೆ.




ಅಪ್ಪಿಕೋ 25


1983, ಸೆಪ್ಟಂಬರ್‌ 8…..
ಕೊಡಲಿ ಪೆಟ್ಟಿಗೆ ಸಿಕ್ಕಿ ಬಲಿಯಾಗುತ್ತಿದ್ದ ಮರಗಳ ಉಳಿವಿಗಾಗಿ ಅಂದು ತೆಗೆದುಕೊಂಡ ಮಹತ್ವದ ನಿರ್ಧಾರ ಇಂದು ಐತಿಹಾಸಿಕ ದಿನ. ಮರವನ್ನು ಅಪ್ಪಿ `ಜೀವ ಬೇಕಾದರೂ ಬಿಟ್ಟೇವು ಮರವನ್ನು ಬಿಡೆವು’ ಎಂಬ ಘೋಷಣೆಯೊಂದಿಗೆ ನಡೆಸಿದ ಶಾಂತಿಯುತ ಚಳವಳಿಯೇ ಅಪ್ಪಿಕೋ ಚಳವಳಿ. ಈ ಚಳವಳಿಗೆ ಇಂದು 25 ವಸಂತಗಳು ತುಂಬಿವೆ. ಅದರ ನೆನೆಪು ಮಾತ್ರ ನಳನಳಿಸುವ ಹಸಿರು ಮರದಂತೆ ಇನ್ನೂ ಹಸಿರಾಗಿದೆ.
ಪರಿಸರ ಪ್ರೇಮಿ ಸುಂದರ ಲಾಲ್‌ ಬಹುಗುಣ ಅವರ ಮಾರ್ಗದರ್ಶನದೊಂದಿಗೆ ಮಲೆನಾಡು ಪ್ರದೇಶದಲ್ಲಿ ನಡೆದ ಈ ಆಂದೋಲನ ಜಾಗತಿಕ ಮಟ್ಟದಲ್ಲಿ ಹೆಸರು ಪಡೆಯಿತು. ಅಷ್ಟೊತ್ತಿಗಾಗಲೇ ಹಿಮಾಲಯದಲ್ಲಿ ಚಿಪ್ಕೊ ಚಳವಳಿ ಯಶಸ್ವಿಯಾಗಿತ್ತು. ಶಿರಸಿ ಸಮೀಪದ ಕಳಾಸೆ, ಕುದ್ರಗೋಡು ದುರ್ಗಮ ಅರಣ್ಯ ಪ್ರದೇಶದಲ್ಲಿ ಗುತ್ತಿಗೆದಾರರು ಮರಗಳನ್ನು ಕಡಿಯಲು ಯತ್ನಿಸಿದಾಗ ನಡೆದ ಸಂಘಟಿತ ಹೋರಾಟವಿದು.
ಬಹುಗುಣ(ವಂತ) ಮುಟ್ಟಿದ್ದೆಲ್ಲಾ ಚಿನ್ನ. ಅವರ ಮಾರ್ಗದರ್ಶನದಲ್ಲಿ ಈಶಣ್ಣ, ಮಹಬಲೇಶ್ವರ ಹೆಗಡೆ, ಕೆ.ವಿ. ಸುಬ್ಬಣ್ಣ, ಆರ್‌.ವಿ. ಹೆಗಡೆ, ಎಸ್‌.ಎನ್‌. ಭಟ್ಟ, ಪಾಂಡುರಂಗ ಹೆಗಡೆ ಮುಂತಾದವರು ಅಪ್ಪಿಕೋ ಚಳವಳಿಯಲ್ಲಿ ಪಾಲ್ಗೊಂಡು ಇತಿಹಾಸ ನಿರ್ಮಿಸಿದರು.
ಆತ್ಮ ವಿಮರ್ಶಾ ವೇದಿಕೆ: ಈ ಚಳವಳಿಯ 25ನೇ ವರ್ಷಾಚರಣೆ ಬರೀ ಆಚರಣೆಯಲ್ಲ. ಆತ್ಮ ವಿಮರ್ಷೆಗೆ ಒಂದು ಅವಕಾಶ. ಇವತ್ತಿನ ಪರಿಸರ ಹೋರಾಟಗಳು ಯಾವ ಮಟ್ಟ ತಲುಪಿವೆ ಎಂಬುದನ್ನು ನಾವೆಲ್ಲರೂ ಯೋಚಿಸಬೇಕಿದೆ. ಅದೆಲ್ಲೋ ನಾಲ್ಕು ಗಿಡ ನೆಟ್ಟು ಪ್ರಚಾರ ಪಡೆದು, ಪರಿಸರ ಹೋರಾಟದ ಹೆಸರಿನಲ್ಲಿ ವಿದೇಶಿ ಹಣ ಸುಲಿಯುವ ನಮ್ಮ ಎನ್‌ಜಿಒಗಳ ಚಳವಳಿಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ.
ರೈತ ಹೋರಾಟಗಳು ದಿಕ್ಕುತಪ್ಪಿವೆ. ರೈತ ನಾಯಕರು ರಾಜಕಾರಣಿಗಳ ಚಮಚಾಗಳಾಗಿದ್ದಾರೆ. ಅಧಿಕಾರಕ್ಕೆ ಹಾತೊರೆಯುತ್ತಿದ್ದಾರೆ. ಸಂಘಟಿತ ಹೋರಾಟ ಮಾಯವಾಗಿದೆ. ರೈತರ ಬದುಕು ವಿಷಮಯವಾಗಿದೆ. ರೈತರಿಗೆ ವಿಶ್ವಾಸ ತುಂಬುವ ಒಬ್ಬನೇ ಒಬ್ಬ ನಾಯಕ ಇಲ್ಲ.
ಅಂದು ಮರವನ್ನು ಅಪ್ಪಿಕೊಂಡು ತಮ್ಮ ಪ್ರಾಣ ಒತ್ತೆ ಇಟ್ಟರು. ಇಂದು ತಮ್ಮ ಜೇಬು ತುಂಬಿಸಿಕೊಳ್ಳಲು ಪಂಚಭೂತಗಳಲ್ಲಿ ಒಂದಾದ ಭೂಮಿಯನ್ನೇ ಒತ್ತೆ ಇಟ್ಟಿದ್ದಾರೆ. ಇದು ನ್ಯಾಯವೆ..?




ಈ ಗಾಳಿ ವಿಷವಾಗಿದೆ!



ಬೆಂಗಳೂರಿನ ಅಸ್ತಮಾ, ಡಯಾಬಿಟಿಸ್‌ ರೋಗಿಗಳು ಆದಷ್ಟು ಬೇಗ ಊರು ಬಿಡುವುದು ಒಳಿತು! ಹೌದು, ಬೇರೆ ದಾರಿಯಿಲ್ಲ. ಬೆಂಗಳೂರಿನಲ್ಲಿ ಬೀಸುತ್ತಿರುವ ಗಾಳಿಯಲ್ಲಿ ಆಮ್ಲಜನಕ ಮಾಯವಾಗಿದೆ. ಅಸಂಖ್ಯಾತ ವಿಷಾನಿಲಗಳು ಬೆಂಗಳೂರನ್ನು ಆಳುತ್ತಿವೆ. ಇವು ಸಾವನ್ನು ಹೊತ್ತು ತರುವ ಅಲೆಗಳಾಗಿವೆ. ಈ ಅನಿಲಗಳನ್ನು ಸೇವಿಸುತ್ತಾ ಇಲ್ಲಿ ಬದುಕಿ ಆಯುಷ್ಯ ಕಳೆದುಕೊಳ್ಳುವುದಕ್ಕಿಂತ ಊರು ಬಿಡುವುದೇ ಸರಿಯಾದ ದಾರಿ.
ವಾಯುಮಾಲಿನ್ಯದಲ್ಲಿ ಬಹಳ ವರ್ಷಗಳಿಂದ ಬೆಂಗಳೂರು ಪ್ರಥಮ ಸ್ಥಾನ ಕಾಯ್ದುಕೊಂಡಿದೆ. ಪ್ರತಿದಿನ 15, 000 ವಾಹನಗಳು ನೋಂದಣಿಯಾಗುತ್ತಿವೆ. ಈ ವಾಹನಗಳು 3 ಲಕ್ಷ ಮೆಟ್ರಿಕ್‌ ಟನ್‌ ಡೀಸೆಲ್‌, 6 ಲಕ್ಷ ಮೆಟ್ರಿಕ್‌ ಟನ್‌ ಪೆಟ್ರೋಲ್‌ಲನ್ನು ಪ್ರತಿವರ್ಷ ದಹಿಸುತ್ತಿವೆ. ಇಷ್ಟೊಂದು ಇಂಧನ ಕುಡಿದ ವಾಹನಗಳು ಹೊರಸೂಸುವ ವಿಷಯುಕ್ತ ಅನಿಲದಿಂದ ಬೆಂಗಳೂರು ಮಂದಿಯ ಆರೋಗ್ಯ ಇಕ್ಕಟ್ಟಿಗೆ ಸಿಲುಕಿದೆ. `ಗಾರ್ಡನ್‌ ಸಿಟಿ’ಯಲ್ಲಿ ಪ್ರತಿವರ್ಷ 800 ಮಂದಿ ಗಂಟಲು ಕ್ಯಾನ್ಸರ್‌, ಅಸ್ತಮಾ ಇತ್ಯಾದಿ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಗಂಟಲು ಬೇನೆ, ಚರ್ಮ ರೋಗಗಳು ಬೆಂಗಳೂರಿಗರನ್ನು ಕಾಡುತ್ತಿವೆ. ಹಿರಿಯ ನಾಗರಿಕರ ಕಷ್ಟವನ್ನು ಹೇಳತೀರದು.
`ಚರ್ಮಕ್ಕೆ ಸಂಬಂಧಿಸಿದಂತಹ ಕೆಲ ಖಾಯಿಲೆ ಕೇಸುಗಳು ಇತ್ತೀಚೆಗೆ ಜಾಸ್ತಿಯಾಗುತ್ತಿವೆ. ಇವು ಎಷ್ಟು ವಿಚಿತ್ರವಾಗಿವೆ ಅಂದರೆ ಆ ರೋಗ ಲಕ್ಷಣಗಳನ್ನು ಪತ್ತೆ ಹಚ್ಚಲು(ಡಯಾಗ್ನೈಸ್‌) ಸಾಧ್ಯವಿಲ್ಲ. ಡಯಾಗ್ನೈಸ್‌ ಮಾಡಲು ಆಗಲಿಲ್ಲ ಅಂದರೆ ಚಿಕಿತ್ಸೆ ನೀಡುವುದು ಹೇಗೆ? ಇದು ಬಹಳ ವಿಚಿತ್ರ.’ ಎನ್ನುತ್ತಾರೆ ಡಾ. ಶೈಲೇಂದ್ರ.
ಇಂಧನಗಳನ್ನು ದಹಿಸಿದಾಗ (ಫಾಸಿಲ್‌ ಪ್ಯೂಯಲ್‌) ಉತ್ಪತ್ತಿಯಾಗುವ ಅನಿಲ(ಕಾರ್ಬನ್‌ ಡೈ ಆಕ್ಸೈಡ್‌, ಕ್ಲೊರೋ ಪ್ಲೋರೋ ಕಾರ್ಬನ್‌) ಬಹಳ ವಿಷಯುಕ್ತವಾಗಿರುತ್ತವೆ. ನಮ್ಮ ಕಾರುಗಳಿಂದ ನೈಟ್ರೋಜನ್‌ ಉತ್ಪತ್ತಿಯಾಗುತ್ತದೆ. ನೈಟ್ರೋಜನ್‌ ಬಹಳ ಕೆಟ್ಟ ಅನಿಲ. ಬೆಂಗಳೂರಿನಲ್ಲಿ ಅದೆಷ್ಟು ಇಂಧನ ಉತ್ಪತ್ತಿಯಾಗುತ್ತಿವೆ ಅಂದರೆ, ಲೆಕ್ಕಕ್ಕೆ ಸಿಗದಷ್ಟು!
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರಿನಲ್ಲೇ ಇದೆ! ಬೆಂಗಳೂರಿನ ವಾಯುಮಾಲಿನ್ಯ ಈ ಮಂಡಳಿಗೆ ಬಿಸಿತುಪ್ಪವಾಗಿದೆ. ಏನೇ ಸರ್ಕಸ್‌ ಮಾಡಿದರೂ ವಾಯುಮಾಲಿನ್ಯದ ಪ್ರಥಮ ಸ್ಥಾನದಿಂದ ಬೆಂಗಳೂರನ್ನು ಕೆಳಗಿಳಿಸಲು ಸಾಧ್ಯವಾಗಿಲ್ಲ. ಮಾಯುಮಾಲಿನ್ಯ ತಪಾಸಣೆಗಾಗಿ ನಗರದ ಮೂರು ಕಡೆಗಳಲ್ಲಿ ಘಟಕಗಳನ್ನು ಹೊಂದಿದೆ. ಆದರೂ ನಗರದ ಗಾಳಿ ಪ್ರತಿನಿತ್ಯ ಹದಗೆಡುತ್ತಿದೆ. ಪ್ರತಿವರ್ಷ ವಾಯುಮಾಲಿನ್ಯದ ಅಂಕಿ ಅಂಶಗಳ ವರದಿಯನ್ನು ತಪ್ಪದೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(ದೆಹಲಿ)ಗೆ ಸಲ್ಲಿಸುತ್ತಿದೆ.
ಮಾಲಿನ್ಯ ನಿಯಂತ್ರಣಕ್ಕಾಗಿ `ಟಾಸ್ಕ್‌ ಪೋರ್ಸ್‌’ವೊಂದನ್ನು 2001ರಲ್ಲಿ ರಚಿಸಲಾಗಿದೆ. ಇದರಲ್ಲಿ ಆರು ಮಂದಿ ಉನ್ನತ ಅಧಿಕಾರಿಗಳಿದ್ದಾರೆ. ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಇದರ ಅಧ್ಯಕ್ಷರು. ಪೊಲೀಸ್‌, ಅರಣ್ಯ, ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಇದರಲ್ಲಿದ್ದಾರೆ. ಬೆಂಗಳೂರಿನ ವಾಯುಸ್ಥಿತಿ ಬಗ್ಗೆ ಮಾತನಾಡಲು ಇವರಿಗ ಬಾಯಿಲ್ಲ!
ಬೆಂಗಳೂರು ಬೆಳೆಯುತ್ತಿದೆ! ಇದೊಂದೇ ಎಲ್ಲಾ ಸಮಸ್ಯೆಗಳ ಮೂಲ. ಕಳೆದ ಐದು ವರ್ಷಗಳಿಂದ ಬೆಂಗಳೂರು 20 ವರ್ಷಗಳಲ್ಲಿ ಬೆಳೆದಷ್ಟು ಬೆಳದಿದೆ. ಭಾರತದ ಭವಿಷ್ಯದ ನಗರ ಎಂದೇ ಈ ನಗರವನ್ನು ಬಣ್ಣಸಲಾಗುತ್ತಿದೆ. ಬೆಂಗಳೂರಿನ ಕೆರೆಗಳು ಒತ್ತುವರಿಯಾಗುತ್ತಿವೆ. ಬೆಂಗಳೂರು ಬೆಂಗಾಡಾಗುತ್ತಿದೆ.
ಗ್ರೀನ್‌ಟಾಕ್ಸ್‌: ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ(ವಿಧಾನ ಸೌಧ ವಲಯ) ಗ್ರೀನ್‌ ಟ್ಯಾಕ್ಸ್‌ ವಾಹನ ಬಳಕೆದಾರರ ಮೇಲೆ ಗ್ರೀನ್‌ ಟ್ಯಾಕ್ಸ್‌ ವಿಧಿಸಲು ಒಂದು ಕರಡನ್ನು ಸಿದ್ಧಪಡಿಸಿದೆ. ಅದನ್ನು ಮಂಡಳಿಯ ಅಧ್ಯಕ್ಷ ಡಾ. ಶರತ್‌ಚಂದ್ರ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಪರಿಸರದ ಮೇಲೆ ಕೆಲಸ ಮಾಡುವ ನೂರಾರು ಎನ್‌ಜಿಒಗಳಿವೆ. ಅಸಂಖ್ಯಾತ ಪರಿಸರ ತಜ್ಞರಿದ್ದಾರೆ. ಪರಿಸರದ ಮೇಲೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರತಿನಿಧಿಗಳನ್ನು ಕರೆದುಕೊಂಡು ಬಂದು ಉಪನ್ಯಾಸ ಕೊಡಿಸುತ್ತಾರೆ. ತಿಂಗಳಿಗೊಂದು ಫಾರಿನ್‌ ಟೂರ್‌ ಮಾಡುತ್ತಾರೆ. ವಿದೇಶಿ ಹಣ ಹರಿದು ಬರುತ್ತದೆ. ಮಾತೆತ್ತಿದರೆ ಯುಎನ್‌ಇಪಿ(ಅಮೆರಿಕಾದ ಪರಿಸರ ಕಾರ್ಯಕ್ರಮ), ಡಬ್ಲ್ಯುಟಿಒ, ಡಬ್ಲ್ಯುಎಚ್‌ಒಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಸ್ಥಳೀಯ ಸಮಸ್ಯೆ ಬಗ್ಗೆ ಕಿಂಚಿತ್ತೂ ಅರಿವಿಲ್ಲ.
ನ್ಯಾನೋ ಕಾರು ಬರುತ್ತಿದೆ. ಬೆಂಗಳೂರಿನ ಮಂದಿ ಮುಗಿಬಿದ್ದು ಬುಕ್‌ ಮಾಡುತ್ತಿದ್ದಾರೆ. ದ್ವಿಚಕ್ರ ವಾಹಗಳ ಸಂಖ್ಯೆ ಕುಸಿಯುವ ನಿರೀಕ್ಷೆ ಇದೆ. ಬೆದರಿದ ದ್ವಿಚಕ್ರ ವಾಹನ ಕಂಪನಿಗಳು 10 ಸಾವಿರ ಬೆಲೆಯ ಬೈಕ್‌ ಸಿದ್ಧಪಡಿಸಲು ಚಿಂತಿಸಿವೆ. ಒಟ್ಟಿನಲ್ಲಿ ಈ ನಗರ ನರಕವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

ವಾಸ್ತು ಹೆಸ­ರಿ­ನಲ್ಲಿ ವೃಕ್ಷ­ಗ­ಳಿಗೆ ವಿಷ!


ವಾಸ್ತು ಹೆಸ­ರಿ­ನಲ್ಲಿ ವೃಕ್ಷ­ಗ­ಳಿಗೆ ವಿಷ!


ಮುಂದಿನ ಮರ ಮನೆ ಮಾಲಿ­ಕ­ನಿಗೆ ಕಿರಿ­ಕಿರಿ. ಏನಾ­ದರೂ ಮಾಡಿ ಆ ಜಾಗ­ದಲ್ಲಿ ಮರವೇ ಇರ­ಲಿಲ್ಲ ಎನ್ನುವ ರೀತಿ ಮಾಡ­ಬೇಕು. ಕಡಿದು ಬೀಳಿ­ಸುವ ಹಾಗಿಲ್ಲ, ಅದು ಅಕ್ರಮ! ಮರದ ಕಾಟ­ದಿಂದ ತಪ್ಪಿ­ಸಿ­ಕೊ­ಳ್ಳಲು ಒಂದು ಕೆಲಸ ಮಾಡ­ಬ­ಹುದು. ಯಾರಿಗೂ ತಿಳಿ­ಯದ ಹಾಗೆ ಮರಕ್ಕೆ ವಿಷ ಉಣಿಸಿ ಕೊಲ್ಲು­ವುದು! ಅಲ್ಲಿಗೆ ಮರದ ಕಿರಿ­ಕಿ­ರಿ­ಯಿಂದ ಬಚಾವ್‌. ಕಾಂಪೌಂ­ಡ್‌ಗೆ ಸ್ವಲ್ಪ ಜಾಸ್ತಿ ಜಾಗ ಸಿಕ್ಕಿದ ಹಾಗಾ­ಯಿತು.
ಇದು ತಮಾ­ಷೆ­ಯಲ್ಲ. ಇದು ಬೆಂಗ­ಳೂ­ರಿ­ನಲ್ಲಿ ನಡೆ­ಯು­ತ್ತಿ­ರುವ ಸತ್ಯ ಸಂಗತಿ. ಒಂದು­ಕಡೆ ರಸ್ತೆ ಅಗ­ಲೀ­ಕ­ರ­ಣದ ಹೆಸ­ರಲ್ಲಿ ಬಿಬಿ­ಎಂಪಿ ಮರ­ಗ­ಳನ್ನು ನೆಲ­ಕ್ಕು­ರು­ಳಿ­ಸು­ತ್ತಿದೆ. ಇನ್ನೊಂದು ಕಡೆ ಮೆಟ್ರೋ ರೈಲಿಗೆ ಮರ­ಗ­ಳನ್ನು ಬಲಿ­ಕೊ­ಡ­ಲಾ­ಗು­ತ್ತಿದೆ. ಇದು ಎಲ್ಲ­ರಿಗೂ ಗೊತ್ತಿ­ರುವ ಸುದ್ದಿ. ಆದರೆ ಯಾರಿಗೂ ಗೊತ್ತಿ­ರದ ಇನ್ನೊಂದು ಸುದ್ದಿಯೇ `ಮ­ರ­ಗ­ಳಿಗೆ ವಿಷ ಉಣಿಸಿ ಕೊಲೆ.’
ಇತ್ತಿ­ಚೆಗೆ ಮಲ್ಲೇ­ಶ್ವರಂ ಬಡಾ­ವ­ಣೆಯ 15ನೇ ಕ್ರಾಸ್‌­ನಲ್ಲಿ ಮರ­ಬಿದ್ದು ಮಹಿ­ಳೆ­ಯೊ­ಬ್ಬರು ಮೃತ­ಪ­ಟ್ಟರು. ಮಳೆ ಗಾಳಿ ಏನೂ ಇರ­ಲಿಲ್ಲ. ಇದ್ದ­ಕ್ಕಿ­ದ್ದಂತೆ ಬಿದ್ದ ಮರದ ಬುಡ­ವನ್ನು ಪರಿ­ಶೀ­ಲಿ­ಸಿ­ದಾಗ ಬಹಿ­ರಂ­ಗ­ಗೊಂಡ ಸುದ್ದಿಯೇ ಮರ­ಗ­ಳಿಗೆ ವಿಷ­ಪ್ರಾ­ಷನ! ಯಾರೋ ಕಿಡಿ­ಗೇ­ಡಿ­ಗಳು ಮರದ ಬುಡಕ್ಕೆ ಮರ್ಕ್ಯುರಿ ಮಿಶ್ರ­ಣ­ವನ್ನು ಸುರಿದು, ಅದರ ಬೇರು­ಗಳು ಸುಟ್ಟು­ಹೋ­ಗು­ವಂತೆ ಮಾಡಿ­ದ್ದರು. ಅವರು ಬುದ್ದಿ­ವಂತ ಕಿಡಿ­ಗೇ­ಡಿ­ಗಳು. ಬುಡದ ಸುತ್ತಲೂ ಸಗಣಿ ಹಾಕಿದ್ದ ಕಾರಣ ವಿಷ ಬುಡ­ದಲ್ಲಿ ಇರು­ವುದು ಯಾರಿಗೂ ತಿಳಿ­ಯ­ಲಿಲ್ಲ.
ಕಾರ­ಣ­ಗಳು ಏನು ಗೊತ್ತೆ?: ಬಹಳ ಕ್ಷುಲ್ಲ­ಕ­ವಾ­ಗಿವೆ. ವಾಸ್ತು ಹೆಸ­ರಿ­ನಲ್ಲಿ ಮರ­ವನ್ನು ಕೊಲ್ಲ­ಲಾ­ಗು­ತ್ತಿದೆ. ಈ ಜೋತಿ­ಷಿ­ಗ­ಳಿಗೂ ಬುದ್ಧಿ ಇಲ್ಲ. ವಾಸ್ತು ದೋಷ­ವಿ­ದ್ದರೆ `ಮನೆ ಬಿಡಿ’ ಎಂದು ಸಲಹೆ ಮಾಡಲಿ. ಅದು ಬಿಟ್ಟು ಮರ ಕಡಿ­ಯಿರಿ ಅಂತ ಯಾಕೆ ಮಾಡ­ಬೇಕು? ಮರದ ಬೇರು­ಗಳು ಮನೆಯ ಕಾಂಪೌಂ­ಡಿನ ಗೋಡೆ­ಯನ್ನು ಹಾಳು­ಗೆ­ಡ­ವು­ತ್ತವೆ ಎಂದೂ ಕೂಡ ಮರಕ್ಕೆ ವಿಷ ಉಣಿ­ಸ­ಲಾ­ಗು­ತ್ತಿದೆ.
ಸೌದೆ­ಗಾಗಿ ಮರದ ಕೊಲೆ: ಇಟ್ಟಿಗೆ ಸುಡು­ವ­ವರು ಬದು­ಕಿ­ರುವ ಮರ­ಗ­ಳನ್ನು ಕೆಡವಿ ಒಣ­ಗಿಸಿ ಸೌದೆ ಮಾಡಿ­ಕೊ­ಳ್ಳು­ತ್ತಾರೆ. ಬರೀ ಇಟ್ಟಿಗೆ ಸುಡು­ವ­ವರು ಮಾತ್ರ­ವಲ್ಲ ದಿನ­ಬ­ಳ­ಕೆಗೆ ಸೌದೆ­ಯನ್ನು ಬೆಳೆ­ಸು­ವ­ವರು ಕೂಡ ಸಣ್ಣ ಪುಟ್ಟ ಮರ­ಗ­ಳನ್ನು ಕಡಿದು ಸೌದೆಗೆ ಬಳ­ಸು­ತ್ತಾರೆ. ಗ್ರಾಮೀಣ ಭಾಗ­ದಲ್ಲಿ ಸೌದೆ­ಯಿಂದ ಅಡುಗೆ ಮಾಡು­ವ­ವರು ಈ ಕೃತ್ಯ­ವನ್ನು ಹೆಚ್ಚು ಮಾಡು­ತ್ತಾರೆ.
ಭಾರ­ತೀಯ ಅರಣ್ಯ ಕಾನೂ­ನಿನ ಪ್ರಕಾರ ಈ ಎಲ್ಲಾ ಕೃತ್ಯ­ಗಳು ಅಕ್ರಮ. ಅರಣ್ಯ ಉತ್ಪ­ನ್ನ­ಗ­ಳಿಗೆ ಧಕ್ಕೆ ಮಾಡು­ವ­ವ­ರಿಗೆ ಶಿಕ್ಷಿ ವಿಧಿ­ಸುವ ಉಪ­ಬಂ­ಧ­ಗಳು ಈ ಕಾನೂ­ನಿ­ನಲ್ಲಿ ಇದೆ. ಆದರೆ ಬೆಂಗೂ­ಳೂ­ರಿನ ಯಾವೊಂದು ಪೊಲೀಸ್‌ ಠಾಣೆ­ಯಲ್ಲೂ ಮರಕ್ಕೆ ವಿಷ­ಪ್ರಾ­ಷ­ನಕ್ಕೆ ಸಂಬಂ­ಧಿ­ಸಿದ ಯಾವೊಂದು ಪ್ರಕ­ರ­ಣವೂ ದಾಖ­ಲಾ­ಗಿಲ್ಲ.
ಇಲಾ­ಖೆ­ಗ­ಳಿಗೆ ಬಾಯಿ ಇಲ್ಲ: ಅರಣ್ಯ ಇಲಾ­ಖೆಯ ಅಧಿ­ಕಾ­ರಿ­ಗ­ಳನ್ನು ಕೇಳಿ­ದರೆ ಈ ವಿಷಯ ಗೊತ್ತೇ ಇಲ್ಲಾ ಎಂಬಂತೆ ನಾಟಕ ಆಡು­ತ್ತಾರೆ. ಬೀಳುವ ಅಪಾ­ಯ­ವಿ­ರುವ ಕೆಲವು ಹಳೆಯ ಮರ­ಗ­ಳನ್ನು ಕಡಿ­ಯ­ಬೇಕು ನಿಜ. ಆದರೆ ಯಾರಿಗೂ ತಿಳಿ­ಯದ ಹಾಗೆ ಯಾವುದೋ ಅನಿ­ಲ­ವನ್ನು ಇಂಜೆಕ್ಟ್‌ ಮಾಡಿ ಕೆಡ­ವ­ಬೇ­ಕಿಲ್ಲ. ಮರ ಉರುಳಿ ಬಿದ್ದಾಗ ಮಾತ್ರ ಮರಕ್ಕೆ ವಿಷಾ­ನಿಲ ಇಂಜೆಕ್ಟ್‌ ಮಾಡ­ಲಾ­ಗಿದೆ ಎಂದು ತಿಳಿ­ಯು­ತ್ತದೆ. ಆದರೆ ಅದಕ್ಕೂ ಮುಂಚೆ ಮರ­ವನ್ನು ಟೆಸ್ಟ್‌ ಮಾಡಿ ಆ ರೀತಿ ಏನಾ­ದರೂ ಮಾಡ­ಲಾ­ಗಿ­ದೆಯೇ ಎಂಬು­ದನ್ನು ಪತ್ತೆ ಮಾಡುವ ಮಾನ­ದಂಡ ಅಧಿ­ಕಾ­ರಿ­ಗಳ ಬಳಿ ಇಲ್ಲ.
ತಪ್ಪಿ­ಸಿ­ಕೊ­ಳ್ಳು­ವುದು ಸುಲಭ: ಮರ ಹಸಿ­ರಾಗಿ ಆರೋ­ಗ್ಯ­ವಾ­ಗಿಯೇ ಇರು­ತ್ತದೆ. ಇದ್ದ­ಕ್ಕಿಂ­ದಂತೇ ಉರುಳಿ ಬಿದ್ದಾಗ ಯಾರ ಮೇಲೂ ಅನು­ಮಾನ ಪಡ­ಲಿ­ಕ್ಕಾ­ಗು­ವು­ದಿಲ್ಲ.ಗೆ­ದ್ದಲು ತಿಂದು ಸತ್ತಿ­ದ್ದಕ್ಕೆ ಯಾರೇನು ಮಾಡ­ಕ್ಕಾ­ಗುತ್ತೆ ಅಂತ ಸುಲ­ಭ­ವಾಗಿ ಅಪ­ರಾ­ಧಿ­ಗಳು ತಪ್ಪಿ­ಸಿ­ಕೊ­ಳ್ಳ­ಬ­ಹುದು.
ಯಾವ ಕಾರ­ಣ­ಕ್ಕಾಗಿ ಮರ ಉರುಳಿ ಬಿದ್ದಿತು, ನಿಜ­ವಾಗಿ ವಿಷ ಉಣಿಸಿ ಮರ­ವನ್ನು ಕೊಲ್ಲ­ಲಾ­ಯಿತೆ ಎಂದು ಪತ್ತೆ ಮಾಡುವ ಮಾನ­ದಂ­ಡದ ಅವ­ಶ್ಯ­ಕತೆ ಬೇಕಾ­ಗಿದೆ. ಇದ­ರಿಂದ ಅಪ­ರಾ­ಧಿ­ಗ­ಳನ್ನು ಪತ್ತೆ­ಮಾ­ಡ­ಬ­ಹುದು.
ಬೆಂಗ­ಳೂ­ರಿ­ನಲ್ಲಿ ಇಂಚು ಜಾಗಕ್ಕೂ ಚಿನ್ನ­ಕ್ಕಿಂತ ಜಾಸ್ತಿ ಬೆಲೆ. ಗೇಣುದ್ದ ಭೂಮಿ ಪುಕ್ಕಟ್ಟೆ ಸಿಗುತ್ತೆ ಅಂದ್ರೆ, ಮರ ಬೀಳಿ­ಸೋದು ಮಾತ್ರ­ವಲ್ಲ, ಮನು­ಷ್ಯರ ಪ್ರಾಣ ತೆಗೆ­ಯೋಕು ಸಿದ್ಧ­ವಿ­ರುವ ಮಂದಿ ಇದ್ದಾರೆ. ಇದೇ ರಿಯಲ್‌ ಎಸ್ಟೇಟ್‌ ಭೂಮ್‌! ಇವರು ಹೇಗಾ­ದರೂ ಕಿತ್ತಾ­ಡಿ­ಕೊಂಡು ಸಾಯಲಿ. ಆದರೆ ಅಮಾ­ಯಕ ಮರ­ಗಳ ಪ್ರಾಣ ತೆಗೆ­ಯೋದು ಯಾವ ನ್ಯಾಯ?


ಸ್ಕ್ಯಾಂಡಲ್‌ವುಡ್‌ಕತೆ


ಈಗ ನೀವೂ ಕೂಡ ಗಂಧ ಬೆಳೆಯಬಹುದು!
ಆಶ್ಚರ್ಯ ಪಡಬೇಕಾಗಿಲ್ಲ. ಇದು ಹೊಸ ಕಾನೂನಲ್ಲ. ಹಳೇ ಕಾನೂನು! ಕರ್ನಾಟಕ ಅರಣ್ಯ ಕಾಯ್ದೆಗೆ 2001ರಲ್ಲಿ ತಿದ್ದುಪಡಿ ತಂದು ಗಂಧ ಬೆಳೆಯುವ ಹಕ್ಕನ್ನು ಎಲ್ಲರಿಗೂ ನೀಡಲಾಗಿದೆ. ಆದರೆ ಸಾರ್ವಜನಿಕವಾಗಿ ಗಂಧ ಬೆಳೆಯುವ ಧೈರ್ಯ ಯಾರಿಗೂ ಇಲ್ಲ. ದುರಾದೃಷ್ಟವೆಂದರೆ ಈ ವಿಷಯ ಕೆಲವರಿಗೆ ಗೊತ್ತಿಲ್ಲ.
ಬೆಂಗಳೂರು ನಗರ ವಿಭಾಗದ ಅರಣ್ಯ ವಲಯವನ್ನು ತೆಗೆದುಕೊಂಡರೆ ಐಐಟಿ, ಐಐಎಂ, ಐಐಎಸ್‌ಸಿ, ಬೆಂಗಳೂರು ವಿವಿ ಹಾಗೂ ಇನ್ನಿತರ ಸರ್ಕಾರಿ ಕಚೇರಿ ಆವರಣಗಳಲ್ಲಿ ಮಾತ್ರ ಗಂಧದ ಮರಗಳು ಕಂಡುಬರುತ್ತವೆ. ಅರಣ್ಯ ಇಲಾಖೆಗಳ ಬಳಿ ಗಂಧದ ಮರಗಳ ಸಂಖ್ಯೆಯ ಬಗ್ಗೆ ನಿಖರವಾದ ಅಂಕಿ- ಅಂಶಗಳಿಲ್ಲ. ಇಲಾಖೆಯಾಗಲಿ ಅಥವಾ ಸರ್ಕಾರವಾಗಲಿ ಇತಿಹಾಸ ಪ್ರಸಿದ್ಧ ಚಂದನವನ್ನು ಗಂಭೀರವಾಗಿ ಪರಿಗಣಿಸದೇ ಇರುವುದು ದುರಂತ.
ಹಳ್ಳಿಗರಲ್ಲಿ ಗಂಧದ ಬಗ್ಗೆ ಬೇರೆಯದೇ ನಂಬಿಕೆ ಇದೆ. ಗಂಧ ಬೆಳೆದರೆ ಅದು ನಮ್ಮದಾಗುವುದಿಲ್ಲ. ಗಂಧ ಸರ್ಕಾರದ ಸ್ವತ್ತು. ಅದನ್ನು ಸರ್ಕಾರ ಮಾತ್ರವೇ ಬೆಳೆಯಬೇಕು, ವೈಯಕ್ತಿಕವಾಗಿ ಬೆಳೆಯುವ ಹಕ್ಕು ಯಾರಿಗೂ ಇಲ್ಲ. ಗಂಧವನ್ನು ಮಾರಾಟ ಮಾಡುವ ಹಾಗಿಲ್ಲ. ಗಂಧ ಬೆಳೆದರೆ ಅರಣ್ಯ ಅಧಿಕಾರಿಗಳು ಕಡಿದುಕೊಂಡು ಹೋಗುತ್ತಾರೆ……
ಇಂತಹ ತಪ್ಪು ತಿಳುವಳಿಕೆಗಳು ಜನರಲ್ಲಿವೆ. ಕರ್ನಾಟಕ ಅರಣ್ಯ ಕಾಯ್ದೆಗೆ ತಿದ್ದುಪಡಿ ತಂದು ಅರ್ಧ ದಶಕ ಕಳೆದರೂ ಈ ಕಾನೂನು ನಾಗರಿಕರಿಗೆ ನೀಡಿರುವ ಅಧಿಕಾರದ ಅರಿವನ್ನು ಮೂಡಿಸುವ ಕೆಲಸವನ್ನು ಅರಣ್ಯ ಇಲಾಖೆ ಮಾಡಿಲ್ಲ.
ಗಂಧ ಮಾರಟಕ್ಕೆ ಕೆಲ ನಿಮಮಾವಳಿಗಳಿವೆ. ಸಾರ್ವಜನಿಕರು ಗಂಧ ಬೆಳೆದರೆ ಸರ್ಕಾರ ಮಾರುಕಟ್ಟೆ ನೀಡುತ್ತದೆ. ಗಂಧ ಬೆಳೆದವರಿಗೆ ಬೋನಸ್‌ ಕೂಡ ನೀಡುತ್ತದೆ.
ಗಂಧ ಚೋರರು: ಅರಣ್ಯ ಇಲಾಖೆ ಅಧಿಕಾರಿಗಳು ಗಂಧ ಸಂತತಿ ಕಡಿಮೆಯಾಗಲು ಗಂಧದ ಕಳ್ಳತನವೇ ಕಾರಣ ಎನ್ನುತ್ತಾರೆ. ಅಂತರ ರಾಜ್ಯ ಗಂಧ ಚೋರರು ಗಂಧಕಳ್ಳತನದಲ್ಲಿ ತೊಡಗಿದ್ದಾರೆ. ಈ ಕಾರಣದಿಂದ ಗಂಧವನ್ನು ವೈಯಕ್ತಿಕವಾಗಿ ಬೆಳೆಯಲು ಜನರು ಹೆದರುತ್ತಾರೆ ಎಂಬ ಅಭಿಪ್ರಾಯ ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಇದು ನಿಜ ಕೂಡ. ಇತ್ತೀಚೆಗೆ ಬೆಂಗಳೂರಿನ ಐಐಎಂ ಆವರಣದಲ್ಲಿ ಗಂಧ ಕಡಿದು ಇಬ್ಬರು ಅಂತರ ರಾಜ್ಯ ಕಳ್ಳರು ಸಿಕ್ಕಿ ಬಿದ್ದರು. ಬೆಂಗಳೂರು ವಿವಿ(ಜ್ಞಾನಭಾರತಿ) ಆವರಣದಲ್ಲಿ ಪ್ರತಿನಿತ್ಯ ಗಂಧದ ಕಳ್ಳತನ ನಡೆಯುವ ಬಗ್ಗೆ ವರದಿಯಿದೆ. ಸರಿಯಾದ ರಕ್ಷಣೆ ವ್ಯವಸ್ಥೆ ಇಲ್ಲದೆ ಗಂಧದ ಮರಗಳು ಕಳ್ಳರ ಕೊಡಲಿಗೆ ಬಲಿಯಾಗುತ್ತಿವೆ.

ಇತಿಹಾಸ: ಗಂಧದ ಮರಕ್ಕೆ ಧಾರ್ಮಿಕ ಹಿನ್ನೆಲೆಯಿದೆ. ಗಂಧದ ಪರಿಮಳದ ಬಗ್ಗೆ ಪುರಾಣ ಸಾಹಿತ್ಯದಲ್ಲಿ ಉಲ್ಲೇಖವಿದೆ. ಗಂಧಕ್ಕೆ ಔಷಧೀಯ ಗುಣವಿದ್ದು, ಆಯುರ್ವೇದ ವೈದ್ಯ ಪದ್ಧತಿಯಲ್ಲಿ ವಿಶೇಷ ಸ್ಥಾನವಿದೆ. ಕಾಳಿದಾಸನಿಂದ ಹಿಡಿದು ಟಿಪ್ಪು ಸುಲ್ತಾನನವರೆಗೂ ಗಂಧದ ಪರಿಮಳ ಹರಡಿತ್ತು. ಶ್ರೀರಂಗ ಪಟ್ಟಣ ಗಂಧಕ್ಕೆ ಪ್ರಸಿದ್ಧಿಯಾಗಿತ್ತು. ಈಗ ಅಲ್ಲಿ ಗಂಧ ಕಾಣ ಸಿಗುವುದಿಲ್ಲ. ಒಂದು ಕಾಲದಲ್ಲಿ ಕರ್ನಾಟಕ ಗಂಧಕ್ಕೆ ಪ್ರಸಿದ್ಧಿಯಾಗಿತ್ತು. ಮೈಸೂರು ಸ್ಯಾಂಡಲ್‌ಗೆ ಅಂತಾರಾಷ್ಟ್ರೀಯ ಖ್ಯಾತಿಯಿದೆ. ಇಂದು ಕರ್ನಾಟಕದ ಕಾಡುಗಳಲ್ಲಿ ಗಂಧದ ಮರ ತಡಕಿದರೂ ಸಿಗುವುದಿಲ್ಲ.
ಇಂದಿಗೂ ಗಂಧಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಿದೆ. ಗಂಧದ ಕರಕುಶಲ ವಸ್ತುಗಳು, ಗಂಧದ ವಿಗ್ರಹಗಳಿಗೆ ಬಲು ಬೇಡಿಕೆಯಿದೆ. ಗಂಧದ ಎಣ್ಣೆಗೂ ಕೂಡ ಅಪಾರ ಬೇಡಿಕೆಯಿದೆ. ರಾಜ್ಯದ ಮಲೆನಾಡು ಪ್ರದೇಶದಲ್ಲಿ ಗಂಧ ಹೇರಳವಾಗಿ ದೊರೆಯುತ್ತಿತ್ತು. ಬಿಳಿಗಿರಿ ರಂಗನ ಬೆಟ್ಟ ಅರಣ್ಯ ಪ್ರದೇಶ ಗಂಧಕ್ಕೆ ಹೆಸರುವಾಸಿಯಾಗಿತ್ತು. 1880ರ ವರದಿಯ ಪ್ರಕಾರ ರಾಜ್ಯದ ಒಟ್ಟು ಆದಾಯದಲ್ಲಿ ಶೇ. 30ರಷ್ಟು ಗಂಧದ ಪಾಲಿತ್ತು.

ಗಂಧ ಸಹಾಯವಾಣಿ: ಕರ್ನಾಟಕ ಅರಣ್ಯ ಇಲಾಖೆ ಗಂಧದಮರ ರಕ್ಷಣೆಗೆ ಹೊಸ ಮಾಡಿದೆ. ಗಂಧದ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಸಹಾಯವಾಣಿಯೊಂದನ್ನು ರಚಿಸಿದ್ದು, ಆ ಮೂಲಕ ಗಂಧದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಆ ಸಹಾಯವಾಣಿ ನೀಡಲಿದೆ.
ಬೆಂಗಳೂರು ನಗರ ಅರಣ್ಯ ವಲಯದ ಡಿಸಿಎಫ್‌ ಶ್ರೀವಾಸ್ತವ್‌ ಸಹಾಯವಾಣಿ ಕುರಿತು ಮಾಹಿಸಿ ನೀಡಿದ್ದಾರೆ. ಈ ಸಹಾಯವಾಣಿಯ ಅನುಕೂಲವನ್ನು ಸಾರ್ವಜನಿಕರೂ ಕೂಡ ಪಡೆಯಬಹುದಾಗಿದೆ. ಸಾರ್ವಜನಿಕರು ಗಂಧಬೆಳೆಯುವ ಎಲ್ಲಾ ಮಾಹಿತಿಯನ್ನು ಈ ಸಹಾಯವಾಣಿಯ ಮೂಲಕ ಪಡೆಯಬಹುದಾಗಿದೆ. ಅಲ್ಲದೆ ಸರ್ಕಾರ ಗಂಧ ಗಣತಿಯನ್ನು ಕೈಕೊಂಡಾಗ ಗಂಧ ಬೆಳೆದ ಮಾಲೀಕರು ಈ ಸಹಾಯವಾಣಿಗೆ ತಮ್ಮ ಮಾಹಿತಿಯನ್ನು ನೀಡಬಹುದಾಗಿದೆ.
ಈ ಸಹಾಯವಾಣಿಯ ಮುಖ್ಯವಾದ ಉದ್ದೇಶವೆಂದರೆ ಗಂಧ ಕಳ್ಳತನ ತಡೆಯುವುದು. ಗಂಧ ಕಳ್ಳತನದ ಬಗ್ಗೆ ಈ ಸಹಾಯವಾಣಿಯ ಮೂಲಕ ದೂರನ್ನೂ ಕೂಡ ಸಲ್ಲಿಸಬಹುದು.
ಅರಣ್ಯ ಇಲಾಖೆಯ ಈ ಪ್ರಯತ್ನ ಎಷ್ಟರಮಟ್ಟಿಗೆ ರಾಜ್ಯಕ್ಕೆ ಗಂಧದ ಪರಿಮಳ ತರಬಲ್ಲದು ಎಂಬುದನ್ನು ಕಾದು ನೋಡಬೇಕು. ಗಂಧರಾಜ್ಯ ನಿರ್ಮಾಣ ಆಗದಿದ್ದರೆ ಬೇಡ, ಸ್ಯಾಂಡಲ್‌ವುಡ್‌ ಸ್ಕ್ಯಾಂಡಲ್‌ವುಡ್‌ ಆಗದಿದ್ದರೆ ಸಾಕು