ಮಂಗಳವಾರ, ಅಕ್ಟೋಬರ್ 14, 2008



























ಗುಳೇ ಹೊರಟ ರೈತನ ಗೋಳಿನ ಕತೆ!

Inhuman environment

ಬೆಂಗ­ಳೂರು ರೈಲು­ನಿ­ಲ್ದಾಣ ಪ್ಲಾಟ್‌­ಫಾರಂ ಸಂಖ್ಯೆ ಎಂಟು.
ಪಕೀ­ರಪ್ಪ, ರಾಜಣ್ಣ, ಲಿಂಗಪ್ಪ ಮತ್ತು ದುರ್ಗವ್ವ ಮುಂತಾ­ದ­ವರು `ರಾಣಿ ಚೆನ್ನಮ್ಮ ಎಕ್ಸ್‌­ಪ್ರೆಸ್‌' ರೈಲು­ಗಾ­ಡಿಗೆ ಕಾಯುತ್ತಾ ನಿಂತಿ­ದ್ದರು. ಯಾರ ಕಣ್ಣಲ್ಲೂ ಕಳೆ ಇರ­ಲಿಲ್ಲ. ಈ ಮಾಯಾ ನಗರಿ ಬೆಂಗ­ಳೂ­ರಿ­ನಲ್ಲಿ ನಮ್ಮ ಬದು­ಕಿಗೆ ಆಸ­ರೆ­ಯಾ­ಗ­ಬಲ್ಲ ಒಂದು ಚಾಕರಿ ದೊರೆ­ತೀತು ಎಂಬ ಉತ್ಸಾ­ಹ­ದಿಂದ ಮಕ್ಕಳು ಮರಿ­ಯನ್ನು ಕಟ್ಟಿ­ಕೊಂಡು ಬಂದ ನಿರೀಕ್ಷೆ ಬೊಗೆ­ಯಷ್ಟೂ ಈಡೇ­ರಿ­ರ­ಲಿಲ್ಲ. ಕೆಲ­ಸ­ಕ್ಕಾಗಿ ಕಾದು ಬೆಂಡಾಗಿ ಹೈರಾ­ಣಾಗಿ ಬಂದ ಹಾದಿಗೆ ಸುಂಖ­ವಿಲ್ಲ ಎಂಬಂತೆ ತಮ್ಮೂ­ರಿಗೆ ಹೊರಟು ನಿಂತಿ­ದ್ದರು.
ರಸ­ಗೊ­ಬ್ಬ­ರದ ಫ್ಲಾಸ್ಟಿಕ್‌ ಚೀಲ­ದಲ್ಲಿ ತುಂಬಿದ್ದ ಪಾತ್ರೆ­ಪ­ಗ­ಡೆ­ಗಳ ಗಂಟು­ಮೂ­ಟೆ­ಗ­ಳನ್ನು ಪಕ್ಕ­ದ­ಲ್ಲಿ­ಟ್ಟು­ಕೊಂಡು ಕುಳಿ­ತಿದ್ದ ಹೆಂಗ­ಸರು ತನ್ನೂ­ರಿನ ಹಾದಿ­ಯ­ನ್ನೆ­ಣಿ­ಸು­ತ್ತಿ­ದ್ದರು. ಯಾವು­ದರ ಪರಿವೇ ಇಲ್ಲದೆ ಬಂದು ಹೋಗು­ತ್ತಿದ್ದ ರೈಲಿನ ಜುಕ್‌­ಜುಕ್‌ ಶಬ್ದಕ್ಕೆ ಸ್ಪಂಧಿ­ಸು­ತ್ತಿದ್ದ ಮಕ್ಕಳು, ನಿಲ್ದಾ­ಣದ ಕಪ್ಪು­ಕೋಟು ಮಾಸ್ಟ­ರನ ಘರ್ಜ­ನೆಗೆ ಬೆದ­ರಿ­ದ್ದವು. ಅಕ್ಕ­ಪ­ಕ್ಕ­ದಲ್ಲಿ ಸಾಗು­ತ್ತಿದ್ದ ಸೂಟು­ಬೂ­ಟು­ಧಾ­ರಿ­ಗಳ ತಾತ್ಸಾ­ರದ ನೋಟ, ಪಾಪ! ಇವರ ಅರಿ­ವಿಗೆ ಬಂದಿ­ರ­ಲಿಲ್ಲ.
ಪ್ಲಾಟ್‌­ಫಾರಂ ತುಂಬಿ ತುಳು­ಕು­ತ್ತಿತ್ತು. ರೈಲು ಬಂದೊ­ಡನೆ ಪ್ಯಾಸೆಂ­ಜರ್‌ ಬೋಗಿಯ ಕಡೆಗೆ ಆಕ್ರ­ಮ­ಣ­ಕಾ­ರ­ರಂತೆ ನುಗ್ಗಿ­ದರು. ಕ್ಷಣ­ಮಾ­ತ್ರ­ದಲ್ಲಿ ರೈಲು ತನ್ನ ಸಾಮ­ರ್ಥ್ಯ­ವನ್ನು ಮೀರಿ ತುಂಬಿ­ಸಿ­ಕೊಂಡು ಹೊರ­ಟಿತು.
`ಈ ನಗ­ರಕ್ಕೆ ನಾವು ಯೋಗ್ಯ­ರಲ್ಲ' ಎಂಬಂತೆ ಹಿಂದೆ ಸಾಗು­ತ್ತಿದ್ದ ಬೆಂಗ­ಳೂರು ಮಹಾ­ನ­ಗ­ರಕ್ಕೆ ಕಡೆಯ ನಮ­ಸ್ಕಾರ ತಿಳಿ­ಸಿ­ದರು.

ಇವ­ರೆಲ್ಲಾ ಯಾರು?:

`ಬ್ಯಾರೆ­ಯ­ವರ ಹೊಲ­ದಾಗೆ ದಿನ­ಗೂಲಿ ಮಾಡ್ಕೊಂಡ್‌ ಚಲೋ­ಗಿ­ದ್ದಿನ್ರೀ. ಒಪ್ಪತ್ತು ಊಟಕ್ಕೆ ಕಷ್ಟ ಆಗ್ತಿ­ದ್ದಿಲ್ಲ. ಯಾರದೋ ಮಾತ್‌ ಕೇಳ್ಕಂಡು, ಚಿಲ್ಲರೆ ಕಾಸಿನ ಹುಚ್ಚು ಹತ್ತಿ­ಸ್ಕಂಡ್‌ ಇಲ್ಲಿಗೆ ಬಂದೆನ್ರಿ. ಈ ಮಂದಿ ಕೆಲಸ ಕೊಡ್ತಾ­ರೇನು? ನಮ್ಮ ರಕ್ತ ಹೀರ್ತಾರೆ. ಆದಕ್ಕಾ ನಾ ನಮ್ಮೂ­ರಿಗೆ ಹೊರಟು ನಿಂತನ್ರಿ' ಎಂದು ನಿರಾ­ಶೆ­ಯಿಂದ ನುಡಿ­ಯು­ತ್ತಾರೆ ದಾರ­ವಾಢ ಜಿಲ್ಲೆಯ ಭೂ ರಹಿತ ಕೃಷಿ ಕಾರ್ಮಿಕ ಪಕೀ­ರಪ್ಟ.
ರಾಯ­ಚೂ­ರಿನ ಯಲ್ಲ­ಪ್ಪ­ರಿಗೆ ಎರಡು ಎಕರೆ ಭೂಮಿ ಇದೆ, ತನ್ನ ಅವಿ­ಭಕ್ತ ಕುಟುಂ­ಬಕ್ಕೆ ಸಾಕಾ­ಗು­ವಷ್ಟು ಬೆಳೆ ಬರದು. ಮಳೆ ಬಿದ್ದರೆ ಮಾತ್ರ ಬೆಳೆ. ಕೆಲ­ಸ­ಕ್ಕಾಗಿ ಸಾಲ ಮಾಡಿ­ಕೊಂಡು ಬೆಂಗ­ಳೂ­ರಿಗೆ ಬಂದು ತಿಂಗ­ಳು­ಗ­ಟ್ಟಲೇ ತಡ­ಕಿ­ದರೂ ಕೆಲಸ ಸಿಕ್ಕಿಲ್ಲ. ಕಡೆಗೆ ಸಾಲದ ದುಡ್ಡು ಖಾಲಿ­ಯಾ­ದಾಗ ವಿದಿ­ಯಿ­ಲ್ಲದೆ ತಮ್ಮೂ­ರಿಗೆ ಹೊರಟು ನಿಂತಿ­ದ್ದಾರೆ.
ಇವ­ರೆಲ್ಲಾ ಉತ್ತರ ಕರ್ನಾ­ಟ­ಕದ ಹಳ್ಳಿ­ಗ­ಳಿಂದ ಬೆಂಗ­ಳೂ­ರಿಗೆ ಗುಳೇ­ಬಂದ ಜನ. ಕೆಲ­ಸ­ಕ್ಕಾಗಿ ಮಕ್ಕಳು ಮರಿ ಕಟ್ಟಿ­ಕೊಂಡು ದಿನ­ನಿತ್ಯ ನಗ­ರ­ಗ­ಳಿಗೆ ಬಂದಿ­ಳಿ­ಯು­ತ್ತಾರೆ. ಅದೆಷ್ಟು ಜನ­ರನ್ನು ತುಂಬಿ­ಕೊ­ಳ್ಳಲು ಸಾಧ್ಯ?

ಅಳಿ­ಯದ ಸಣ್ಣ ರೈತನ ಗೋಳು: ಇದು ಬರೀ ಪಕೀ­ರಪ್ಪ, ಯಲ್ಲ­ಪ್ಪರ ಕತೆ­ಯಲ್ಲ. ಕೆಲ­ಸ­ಕ್ಕಾಗಿ ಪಟ್ಟ­ಣ­ಗ­ಳಿಗೆ ಗುಳೇ ಹೊರಟ ಗ್ರಾಮೀಣ ಭಾರ­ತೀ­ಯರ ಗೋಳಿನ ಕತೆ. ಉತ್ತರ ಕರ್ನಾ­ಟ­ಕದ ಹಳ್ಳಿ­ಗ­ಳಿಂದ ಬೆಂಗ­ಳೂ­ರಿಗೆ ಗುಳೇ ಹೊರಟು ತಂಡೋಪ ತಂಡ­ವಾಗಿ ಬರು­ತ್ತಿದ್ದು, ಕೆಲಸ ಸಿಗದೇ ಹಾಗೆಯೇ ಹಿಂತಿ­ರು­ಗು­ತ್ತಿ­ದ್ದಾರೆ.
ಶೇ. 70ರಷ್ಟು ಭಾರ­ತೀ­ಯರು ತಮ್ಮ ಜೀವ­ನೋ­ಪಾ­ಯಕ್ಕೆ ವ್ಯವ­ಸಾ­ಯ­ವನ್ನೇ ಅವ­ಲಂ­ಭಿ­ಸಿ­ದ್ದರೂ, ಅವರ ಜೀವನ ನಡೆ­ಯು­ತ್ತಿಲ್ಲ. ಇವ­ರಲ್ಲಿ ಶೇ. 90ರಷ್ಟು ಮಂದಿ ಸಣ್ಣ ಮತ್ತು ಅತೀ ಸಣ್ಣ ರೈತ­ರಾ­ಗಿ­ದ್ದಾರೆ. ಎಲ್ಲ­ದಕ್ಕೂ ಸಾಲ, ಸಾಲ­ವಿ­ಲ್ಲದೆ ಮಣ್ಣಿನ ಮಗನ ಬದು­ಕಿಲ್ಲ. ಸಾಲ­ದ­ಲ್ಲಿಯೇ ಹುಟ್ಟಿ, ಸಾಲ­ದ­ಲ್ಲಿಯೇ ಬದುಕಿ, ಸಾಲ­ದ­ಲ್ಲಿಯೇ ಕಡೆ­ಯಾ­ಗು­ತ್ತಿ­ದ್ದಾನೆ.
ಇಂತಹ ವಿಷಮ ಪರಿ­ಸ್ಥಿ­ತಿ­ಯಲ್ಲಿ ಮಣ್ಣಿನ ಮಕ್ಕಳು ಮಣ್ಣಿನ ಮೇಲೆ ನಂಬಿಕೆ ಕಳ­ಕೊಂ­ಡ­ವ­ರಂತೆ ಹಳ್ಳಿ­ಬಿಟ್ಟು ನಗ­ರ­ಗ­ಳಿಗೆ ಕೆಲಸ ಅರ­ಸಿ­ಕೊಂಡು ಬರು­ತ್ತಿ­ದ್ದಾರೆ.

ಮಕ್ಕ­ಳನ್ನು ಬಿಕ್ಷೆಗೆ ಬಿಟ್ಟರು: ಅಪ್ಪ­ನಿಗೆ ಕೆಲ­ಸ­ವಿಲ್ಲ, ಅವ್ವ­ನಿಗೆ ಗಂಜಿ ಕಾಸಲು ಕಾಳಿಲ್ಲ, ಉಪ್ಪಿಲ್ಲ. ಇರು­ವುದು ಒಂದೇ ಒಂದು ದಾರಿ. ತಮ್ಮ ಮಗು­ವನ್ನು ಬಿಕ್ಷೆಗೆ ಬಿಡು­ವುದು. ಬೆಳ­ಗ್ಗೆ­ಯಿಂದ ಸಂಜೆ­ಯ­ವ­ರೆಗೆ ಬಿಕ್ಷೆ ಬೇಡಿ ತರುವ ಪುಡಿ­ಗಾ­ಸಿ­ನಿಂದ ಒಪ್ಪೊ­ತ್ತಿನ ಊಟ.
ಟ್ರಾಫಿಕ್‌ ಸಿಗ್ನ­ಲ್‌­ಗ­ಳಲ್ಲಿ ದೇವ­ಸ್ಥಾ­ನದ ಬಾಗಿ­ಲು­ಗ­ಳಲ್ಲಿ, ಮಾರು­ಕ­ಟ್ಟೆ­ಗ­ಳಲ್ಲಿ ಬಿಕ್ಷೆ ಬೇಡುವ ಮಕ್ಕ­ಳನ್ನು ಯಾವ ಊರು ಎಂದು ಕೇಳಿ­ದರೆ ಉತ್ತರ ಕರ್ನಾ­ಟ­ಕದ ಊರು­ಗಳ ಹೆಸ­ರು­ಗ­ಳ­ನ್ನೇ­ಳು­ತ್ತಾರೆ. ದಿಕ್ಕು­ದೆ­ಸೆ­ಯಿ­ಲ್ಲದೆ ನಗ­ರ­ಗ­ಳಿಗೆ ಬರು­ತ್ತಾರೆ. ಸಿಕ್ಕ­ಸಿ­ಕ್ಕ­ವ­ರಲ್ಲಿ ಕೆಲಸ ಕೊಡಿ ಎಂದು ಗೋಗ­ರಿ­ಯು­ತ್ತಾರೆ. ಸಿಗ­ದಿ­ದ್ದಾಗ ಕೆಲ­ವರು ಹಿಂತಿ­ರುಗಿ ಹೋದರೆ, ಮತ್ತೆ ಕೆಲ­ವರು ಕಳ್ಳ­ತ­ನ­ಗ­ಳಂ­ತಹ ಕೆಲ­ಸಕ್ಕೂ ಕೈ ಹಾಕು­ತ್ತಾರೆ. ಇತ್ತೀ­ಚೆಗೆ ಬೆಂಗ­ಳೂ­ರಿ­ನಲ್ಲಿ ಬಂಧಿ­ತ­ರಾ­ಗು­ತ್ತಿ­ರುವ ವಿಚಾ­ರ­ಣಾ­ಧೀನ ಕೈದಿ­ಗ­ಳಲ್ಲಿ ಗುಳೇ ಬಂದ ವಲ­ಸಿ­ಗರೇ ಹೆಚ್ಚು ಎನ್ನ­ಲಾ­ಗಿದೆ.

ವಲ­ಸಿ­ಗರ `ಯೋಗ್ಯತೆ'ಯ ಸಮಸ್ಯೆ: ಇನ್ನೊಂದು ಮುಖ್ಯ­ವಾದ ಸಮ­ಸ್ಯೆ­ಯೆಂ­ದರೆ `ಗುಳೇ ಬಂದ­ವರ ಯೋಗ್ಯತೆ'ಯ ಸಮಸ್ಯೆ. ಗುಳೇ ಬಂದ ಗ್ರಾಮೀಣ ಭಾರ­ತೀ­ಯ­ರಿಗೆ ಇನ್ಫೋ­ಸಿ­ಸ್‌­ನಲ್ಲಿ ಕೆಲಸ ಸಿಗು­ವು­ದಿಲ್ಲ. ಅವರು ಕಟ್ಟ­ಡದ ಕೆಲ­ಸಕ್ಕೆ ಸೇರ­ಬೇಕು ಇಲ್ಲವೇ ಹೋಟೆಲ್‌ ಮಾಣಿ­ಗ­ಳಾ­ಗ­ಬೇಕು. ಇಷ್ಟು ಬಿಟ್ಟರೆ ಮತ್ತ್ಯಾವ ಕೆಲ­ಸವೂ ಸಿಕ್ಕು­ವು­ದಿಲ್ಲ.
ವಲ­ಸಿ­ಗ­ರಲ್ಲಿ ಹೆಚ್ಚಿ­ನ­ವರು ಅವಿ­ದ್ಯಾ­ವಂ­ತರೇ ಆಗಿ­ರು­ರು­ವು­ದ­ರಿಂದ ಬೇರೆ ಆಯ್ಕೆ­ಗಳೇ ಇರು­ವು­ದಿಲ್ಲ. ಕಟ್ಟಡ ಮತ್ತು ರಸ್ತೆ ಕಾಮ­ಗಾ­ರಿ­ಗ­ಳಲ್ಲೂ ಕೆಲಸ ಸಿಗು­ವುದು ಕಷ್ಟ. ಸಿಕ್ಕರೂ ಶ್ರಮಕ್ಕೆ ತಕ್ಕ ಪ್ರತಿ­ಫ­ಲ­ವಿಲ್ಲ. ಕೂಲಿ ವಸೂಲಿ ಮಾಡು­ವ­ಷ್ಟ­ರಲ್ಲಿ ಪ್ರಾಣ ಹೋಗಿ­ರು­ತ್ತದೆ.

ಮಹಿ­ಳೆಯ ಕತೆ ಶೋಚ­ನೀಯ: ಗುಳೇ ಬಂದ ಮಹಿ­ಳೆಯ ಸ್ಥಿತಿ ಹೇಳ­ತೀ­ರದು. ಆಕೆ ಎಲ್ಲಾ ಹಂತ­ದಲ್ಲೂ ಶೋಷ­ಣೆಯ ಬಲಿ­ಪಶು. ಕೆಲಸ ಅರಸಿ ಬಂದ ಅದೆಷ್ಟೋ ಮಹಿ­ಳೆ­ಯರು ಲೈಂಗಿಕ ಕಾರ್ಯ­ಕ­ರ್ತ­ರಾಗಿ ಬದ­ಲಾದ ಹಲವು ಉದಾ­ಹ­ರ­ಣೆ­ಗ­ಳಿವೆ. ಒಂದು ಅಂದಾ­ಜಿನ ಪ್ರಕಾರ ವಲ­ಸಿ­ಗ­ರಲ್ಲಿ ಹೆಚ್ಚಿನ ಜನಕ್ಕೆ ಏಡ್ಸ್‌ ರೋಗ­ವಿದೆ.
ವಲ­ಸಿ­ಗ­ರಿಗೆ ಭದ್ರ­ತೆ­ಯಿ­ದೆಯೇ? ವಸತಿ, ಆರೋಗ್ಯ, ಶಿಕ್ಷಣ ಎಲ್ಲವೂ ಶೂನ್ಯ. ಕೊಳಚೆ ಪ್ರದೇ­ಶ­ಗಳೇ ಅವರ ವಾಸ­ಸ್ಥಾನ. ಬೆಂಗ­ಳೂ­ರಿನ ಹೊರ­ವ­ಲ­ಯದ ಕೆ.ಆರ್‌. ಪುರಂ, ಕೆಂಗೇರಿ, ನಾಯಂ­ಡ­ಹಳ್ಳಿ, ಕಮಲಾ ನಗರ, ಕುರು­ಬ­ರ­ಹಳ್ಳಿ ಮುಂತಾದ ಬಡಾ­ವ­ಣೆ­ಗಳ ಕೊಳಚೆ ಪ್ರದೇ­ಶ­ಗ­ಳಲ್ಲಿ ಹೆಚ್ಚಾಗಿ ವಲ­ಸಿ­ಗರು ಕಾಣ­ಸಿ­ಗು­ತ್ತಾರೆ. ಇವ­ರಿಗೆ ಬೇರೆ ಆಯ್ಕೆ­ಗಳೇ ಇಲ್ಲ­ದಿ­ರು­ವು­ದ­ರಿಂದ ಸಮ­ಸ್ಯೆ­ಗ­ಳೆಗೆ ಅಂಟಿ­ಕೊಂಡು ಬದು­ಕು­ವಂ­ತಾ­ಗಿದೆ.

ವಲಯ ಬದ­ಲಾ­ವಣೆ ಪ್ರಯೋಗ: ಭಾರ­ತಕ್ಕೆ ಅಂಟಿದ ಬಲು­ದೊಡ್ಡ ತಲೆ­ನೋವು ವಲಸೆ. ಇದಕ್ಕೆ ದೊಡ್ಡ ಇತಿ­ಹಾ­ಸವೇ ಇದೆ. ಆದರೂ, ವಲಸೆ ಬಗೆ­ಹ­ರಿ­ಯದ ಸಮ­ಸ್ಯೆ­ಯೇನೂ ಅಲ್ಲ. ಭಾರ­ತೀಯ ಕಾರ್ಪೊ­ರೇಟ್‌ ವಲಯ ಇತ್ತೀ­ಚೆಗೆ ಒಂದು ನಿಲು­ವನ್ನು ಪ್ರತಿ­ಪಾ­ದಿ­ಸಿದೆ. `ಕೃಷಿ­ಕ­ರನ್ನು ಕೃಷಿ ವಲ­ಯ­ದಿಂದ ಉತ್ಪನ್ನ ಮತ್ತು ತಂತ್ರ­ಜ್ಞಾನ ವಲ­ಯಕ್ಕೆ ಕೊಂಡೊ­ಯ್ಯು­ವು­ದ­ರಿಂದ ಕೆಲಸ ಅರೆ­ಸುತ್ತಾ ಪಟ್ಟಣ ಸೇರು­ವು­ದನ್ನು ತಪ್ಪಿ­ಸ­ಬ­ಹುದು' ಎನ್ನ­ಲಾ­ಗಿದೆ. ಇದು ಚೀನಾದ ಯಶಸ್ವಿ ಪ್ರಯೋಗ. ಚೀನಾ­ದಲ್ಲಿ ಕಳೆದ ಒಂದು ದಶ­ಕ­ದಲ್ಲಿ 150 ಮಿಲಿ­ಯನ್‌ ಜನರು ಕೃಷಿ ವಲ­ಯ­ದಿಂದ ಉತ್ಪನ್ನ ವಲ­ಯಕ್ಕೆ ಜಿಗಿ­ದಿ­ದ್ದಾರೆ.
ಈ ಪ್ರಯೋಗ ಭಾರ­ತ­ದಲ್ಲೂ ಸಾಧ್ಯ­ವಿದೆ. ಆದರೆ ಇದು ಫಲ­ಪ್ರ­ದ­ವಾ­ಗ­ಬೇ­ಕಾ­ದರೆ ಶತ­ಕ­ಗಳೇ ಬೇಕು. ಅದಕ್ಕೂ ಮುಂಚೆ ಕೆಲ ಪೂರ್ವ­ಸಿ­ದ್ದ­ತೆ­ಗಳು ಜರೂ­ರಾಗಿ ನಡೆ­ಯ­ಬೇ­ಕಿದೆ. ಅವಿ­ದ್ಯಾ­ವಂತ ಗ್ರಾಮೀಣ ಭಾರ­ತೀ­ಯರು ಕೃಷಿ­ಯ­ಲ್ಲದ ವೃತ್ತಿ­ಪರ ಚಟಿ­ವ­ಟಿ­ಕೆ­ಗ­ಳಲ್ಲಿ ತೊಡ­ಗ­ಬೇಕು. ಎಲ್ಲ­ಕ್ಕಿಂತ ಮಿಗಿ­ಲಾಗಿ ಭಾರ­ತದ `ಅಪ್ರ­ಸ್ತುತ ಶೈಕ್ಷ­ಣಿಕ ವ್ಯವಸ್ಥೆ' ಬದ­ಲಾ­ಗ­ಬೇಕು. ತಮ್ಮ ಮಕ್ಕ­ಳಿಗೆ ವೃತ್ತಿ­ಪರ ಶಿಕ್ಷಣ ಪಡೆ­ಯು­ವಂತೆ ಪ್ರೇರೇ­ಪಿ­ಸ­ಬೇಕು. ಆನಂ­ತರ ಈ ಪ್ರಯೋ­ಗ­ದಂತೆ ವ್ಯಕ್ತಿ ಉತ್ಪನ್ನ ವಲ­ಯದ ಅಂಗ­ವಾ­ಗ­ಬೇಕು. ಯಾವ ಪೂರ್ವ ತಯಾ­ರಿಯೂ ಇಲ್ಲದೆ ಇದನ್ನು ಪ್ರಯೋ­ಗಿ­ಸಿ­ದರೆ ಮತ್ತೊಂದು ಸಮಸ್ಯೆ ಉದ್ಬ­ವಿ­ಸುವ ಅಪಾ­ಯ­ವಿದೆ.

ಹಳ್ಳಿ­ಗ­ಳಲ್ಲಿ ಉದ್ಯೋಗ ಸೃಷ್ಟಿ: ಸಂಘ ಜೀವಿ ಮನು­ಷ್ಯ­ನಿಗೆ ತನ್ನ ಬದು­ಕಿಗೆ ಆಧಾ­ರ­ವಾ­ಗಿ­ರುವ ಮೂಲ ಅವ­ಶ್ಯ­ಕ­ತೆ­ಗಳು ಅತೀ­ಮುಖ್ಯ. ಗೌರ­ವಾ­ನ್ವಿತ ಬದುಕು ಅವನ ಪ್ರಧಾನ ಗುರಿ. ಅದ­ಕ್ಕಾಗಿ ಆಹಾರ ಭದ್ರತೆ, ವಸತಿ, ಶಿಕ್ಷಣ ಆರೋಗ್ಯ ಎಲ್ಲವೂ ಬೇಕು. ಹಾಗಾ­ದರೆ, ಹಳ್ಳಿ­ಗ­ಳಲ್ಲಿ ಇವೆ­ಲ್ಲವೂ ಸಿಗು­ವು­ದಿ­ಲ್ಲವೆ? ಕೃಷಿ­ಯಲ್ಲಿ ಬದುಕೇ ಇಲ್ಲವೆ?.....ಹಳ್ಳಿ­ಗ­ಳಲ್ಲಿ ಇವೆ­ಲ್ಲ­ವನ್ನು ಸೃಷ್ಟಿ­ಸ­ಬೇ­ಕಾದ ಅವ­ಶ್ಯ­ವಿದೆ.
ಕೃಷಿ­ಯಲ್ಲಿ ಬದು­ಕಿದೆ. ರಾಷ್ಟ್ರದ ರಾಷ್ಟ್ರೀಯ ಆದಾ­ಯ­ದಲ್ಲಿ ಕೃಷಿಯ ಪಾಲು ಗಣ­ನೀಯ. ಆದರೆ ಕೃಷಿ ಅವ­ಬಂ­ಬಿತ ಜನ­ಸಂ­ಖ್ಯೆಗೆ ಆದಾ­ಯ­ವನ್ನು ಹೋಲಿಕೆ ಮಾಡಿ­ದರೆ ಅತೀ ಕಡಿಮೆ. ಆದ್ದ­ರಿಂದ ಇಡೀ ಕೃಷಿ ವ್ಯವಸ್ಥೆ ಬದ­ಲಾ­ಗ­ಬೇ­ಕಿದೆ. ಹಳ್ಳಿ­ಗ­ಳಲ್ಲಿ ಉದ್ಯೋಗ ಸೃಷ್ಟಿ­ಯ­ಗುವ ಅವ­ಶ್ಯ­ಕ­ತೆ­ಯಿದೆ. ಪ್ರಾಚೀನ ಕಾಲದ ಕೃಷಿ ಅಭ್ಯಾ­ಸ­ಗ­ಳನ್ನು ಮೊದಲು ಕೈಬಿ­ಡ­ಬೇಕು. ಮಾರು­ಕಟ್ಟೆ ಅರಿತು ಮಾರು­ಕಟ್ಟೆ ಆಧಾ­ರಿತ ಬೇಸಾ­ಯದ ಅಗ­ತ್ಯ­ವಿದ್ದು, ಸಣ್ಣ ರೈತ­ನಿಗೆ ಬಹು­ಕಾಲ ನಿಲ್ಲುವ ರಚ­ನಾ­ತ್ಮಕ ಕೃಷಿ­ಯನ್ನು ಕಟ್ಟುವ `ಕೈ'ಗಳು ಬೇಕಾ­ಗಿವೆ.
ಗ್ರೀನ್‌ ಪೌಂಡೇ­ಶನ್‌(ಬೆಂಗ­ಳೂರು ಮೂಲದ ಎನ್‌­ಜಿಒ) ನಿರ್ದೇ­ಶಕಿ ಹೇಳು­ವಂತೆ `ಸಣ್ಣ ರೈತರು ತಮ್ಮ ಸಣ್ಣ ಹಿಡು­ವ­ಳಿ­ಯಲ್ಲಿ ಬಹು­ಬೆ­ಳೆಯ(ಅಂತರ ಬೆಳೆ) ಬೇಸಾಯ ಪದ್ಧತಿ ಅನು­ಸ­ರಿ­ಸ­ಬೇಕು. ತಮ್ಮ ಆಹಾರ ಭದ್ರ­ತೆ­ಯನ್ನು ಕಾಯ್ದು­ಕೊ­ಳ್ಳ­ಬೇ­ಕಾ­ದರೆ ಏಕ­ಬೆಳೆ ಬೇಸಾ­ಯ­ದಿಂದ ಬಹು­ಬೆಳೆ ಬೇಸಾಯ ಪದ್ಧ­ತಿ­ಯನ್ನು ಅನು­ಸ­ರಿ­ಸ­ಬೇಕು, ಇದ­ರಿಂದ ಮಾತ್ರ ವಲ­ಸೆ­ಯನ್ನು ತಪ್ಪಿ­ಸ­ಬ­ಹುದು' ಎನ್ನು­ತ್ತಾರೆ.
ಕೃಷಿ ಮತ್ತು ಗ್ರಾಮೀ­ಣಾ­ಭಿ­ವೃದ್ಧಿ ಸಂಸ್ಥೆಯ ಮುಖ್ಯಸ್ಥ ದೇಶ­ಪಾಂ­ಡೆ­ಯ­ವರು ಹೇಳು­ವಂತೆ `ರಾಷ್ಟ್ರದ ಒಟ್ಟು ಕೃಷಿ ಆದಾಯ ಕ್ಷೀಣಿ­ಸು­ತ್ತಿದ್ದು, ಬಳೆ­ಕೆ­ದಾ­ರರ ಸೂಚ್ಯಾಂಕ ದರ(ಕನ್ಸೂ­ಮರ್ಸ್‌ ಪ್ರೈಸ್‌ ಇಂಡೆಕ್ಸ್‌) ಏರು­ಗ­ತಿ­ಯ­ಲ್ಲಿದೆ. ಆದರೆ ರೈತ ಇವೆ­ರ­ಡಕ್ಕೂ ಸ್ಪಂದಿ­ಸ­ಲಾ­ರದ ಸ್ಥಿತಿ­ಯ­ಲ್ಲಿ­ದ್ದಾನೆ. ಅಂದರೆ ಆಹಾ­ರದ ಬೇಡಿ­ಕೆಗೆ ತಕ್ಕ ಪೂರೈಕೆ ರೈತ­ನಿಗೆ ಸಾಧ್ಯ­ವಾ­ಗಿಲ್ಲ' ಎನ್ನು­ತ್ತಾರೆ.

PURA ಪರಿ­ಕ­ಲ್ಪನೆ: ಗ್ರಾಮೀಣ ಭಾರ­ತೀ­ಯರು ಗುಳೇ ಹೋಗು­ವು­ದುನ್ನು ತಡೆ­ಯಲು `ಪುರ'(Providing urban fecilities in rural aria) ಎಂಬ ನೂತನ ಪರಿ­ಕ­ಲ್ಪನೆ ಇತ್ತೀ­ಚೆಗೆ ಕಾಣಿ­ಸಿ­ಕೊಂ­ಡಿದೆ. ಇದು ರಾಷ್ಟ್ರ­ಪತಿ ಡಾ. ಅಬ್ದುಲ್‌ ಕಲಾಂ ಅವರ ಕನ­ಸಿನ ಕೂಸು. ಗ್ರಾಮ­ಗ­ಳಲ್ಲೆ ನಗರ ಸೌಲ­ಭ್ಯ­ವನ್ನು ಸೃಷ್ಟಿ­ಸು­ವುದು ಈ ಪರಿ­ಕ­ಲ್ಪ­ನೆಯ ಉದ್ದೇಶ. ಕಲಾಂ ಅವರು ಹೇಳು­ವಂತೆ `ಗ್ರಾಮ ಮತ್ತು ನಗರ ಎಂಬ ಎರಡು ನದಿ­ಗ­ಳಿಗೆ ತಾಂತ್ರಿಕ ಜ್ಞಾನ ಮಾತ್ರ ಸೂಕ್ತ ಸೇತು­ವೆ­ಯಾ­ಗ­ಬ­ಲ್ಲದು. ತಾಂತ್ರಿಕ ಜ್ಞಾನ­ದಿಂದ ಮಾತ್ರ ಗ್ರಾಮ-ನಗ­ರ­ಗಳ ಭಾವೈ­ಕ್ಯ­ತೆ­ಯನ್ನು ಸೃಷ್ಟಿಸಿ ರಚ­ನಾ­ತ್ಮಕ ಅಭಿ­ವೃ­ದ್ಧಿ­ಯತ್ತ ಸಾಗ­ಬ­ಹುದು' ಎನ್ನು­ತ್ತಾರೆ.
ಈಗಾ­ಗಲೇ ಭಾರತ ಎಚ್ಚೆ­ತ್ತು­ಕೊಂ­ಡಿದ್ದು, ಹಳ್ಳಿ­ಗ­ಳಿಗೆ ಮೂಲ ಅವ­ಶ್ಯ­ಕ­ತೆ­ಗ­ಳನ್ನು ಒದ­ಗಿ­ಸುವ ನಿಟ್ಟಿ­ನಲ್ಲಿ ಗಂಭೀರ ಚಿಂತನೆ ನಡೆ­ಸಿದೆ. ಪಂಚ­ವಾ­ರ್ಷಿಕ ಯೋಜ­ನೆ­ಗ­ಳಲ್ಲಿ ಇದನ್ನು ಪ್ರಮು­ಖ­ವೆಂದು ಪರಿ­ಗ­ಣಿ­ಸ­ಲಾ­ಗಿದೆ.
1951ರಲ್ಲಿ ರಾಷ್ಟ್ರಾ­ದ್ಯಂತ 725 ಪ್ರಾಥ­ಮಿಕ ಆರೋಗ್ಯ ಘಟ­ಕ­ಗ­ಳಿ­ದ್ದವು. ಅವು­ಗಳ ಸಂಖ್ಯೆ 2004ರ ವೇಳೆಗೆ 1,68,986ಕ್ಕೆ ಏರಿವೆ. ಅದೇ­ರೀತಿ 2000ನೇ ಇಸ್ವಿ­ಯಲ್ಲಿ ಪ್ರತಿ ಕಿ.ಮಿ.ಗೆ ಶೇ. 94ರಷ್ಟು ಗ್ರಾಮೀಣ ಭಾರ­ತೀ­ಯರು ಕಿರಿಯ ಪ್ರಾಥ­ಮಿಕ ಶಾಲೆ­ಗ­ಳನ್ನು ಹೊಂದಿದ್ದು, ಪ್ರತಿ 3 ಕಿ.ಮಿ.ಗೆ ಶೇ. 85ರಷ್ಟು ಗ್ರಾಮೀ­ಣರು ಹಿರಿಯ ಪ್ರಾಥ­ಮಿಕ ಶಾಲೆ­ಗ­ಳನ್ನು ಹೊಂದಿ­ದ್ದಾರೆ. ಇವು­ಗಳ ಸಂಖ್ಯೆ ಇತ್ತೀ­ಚೆಗೆ ಹೆಚ್ಚು­ತ್ತಿದ್ದು, ಗ್ರಾಮೀ­ಣರು ತಮ್ಮ ಹಳ್ಳಿ­ಗ­ಳಲ್ಲೆ ಉಳಿ­ಯು­ವಂತೆ ಪ್ರೋತ್ಸಾ­ಹಿ­ಸು­ತ್ತಿವೆ.
`ಧಾರ­ವಾಡ ನಗ­ರ­ದಲ್ಲಿ ನಿಂತು ಕಲ್ಲೊಂ­ದನ್ನು ಮೇಲಕ್ಕೆ ಬೀಸಿ­ದಾಗ ಅದು ಸಾಹಿ­ತಿ­ಯೊ­ಬ್ಬರ ಮನೆಯ ಮೇಲೆ ಬೀಳು­ವು­ದಂತೆ. ಆದರೆ ಬೆಂಗ­ಳೂರು ನಗ­ರ­ದಲ್ಲಿ ನಿಂತು ಕಲ್ಲೊಂ­ದನ್ನು ಮೇಲಕ್ಕೆ ಬೀಸಿ­ದರೆ ಅದು ಸಾಫ್ಟ್‌­ವೇರ್‌ ಇಂಜಿ­ನಿ­ಯರ್‌ ತಲೆ ಮೇಲೆ ಬೀಳು­ತ್ತದೆ.' ಇದು ಇತ್ತೀ­ಚಿಗೆ ಹುಟ್ಟಿ­ಕೊಂಡ ಗಾದೆ ಮಾತು. ನಮ್ಮ ನಗ­ರ­ಗಳ ಸ್ಥಿತಿ ಬದ­ಲಾ­ಗಿದ್ದು, ಅವು ಗುಳೇ ಬಂದ ಗ್ರಾಮೀಣ ವಲ­ಸಿ­ಗ­ನಿಗೆ ಮುಳ್ಳಿನ ಹಾಸಿ­ಗೆ­ಯಾ­ಗಿವೆ. ಮುಳ್ಳಿನ ಮೇಲೆ ದೇಹ­ವೊ­ಡ್ಡಿದ ಆತ ಪ್ರತಿ­ನಿತ್ಯ ಗೋಳಿ­ಡು­ತ್ತಿ­ದ್ದಾನೆ.
(ಭಾರತಿ ಘನಶ್ಯಾಂ ಅವರ ಲೇಖನದಿಂದ ಪ್ರೇರಣೆ)