
ಇಂಜಿನಿಯರ್ಸ್ ಕೈಗೆ ಕಸ!
ಇನ್ನುಮುಂದೆ ಎಂಜಿನಿಯರುಗಳು ಕಸಬರಗೆ ಹಿಡಿಯಲಿದ್ದಾರೆ! ಬೆಂಗಳೂರಿನಲ್ಲಿ ಈಗ ನಿತ್ಯ ಉತ್ಪತ್ತಿಯಾಗುವ ಅಷ್ಟೂ ಕಸ ವಿಲೇವಾರಿಗೆ ಇಂಜಿನಿಯರುಗಳು ಹೊಣೆ. ಬೆಳಗಾಯಿತೆಂದರೆ ನಿಮ್ಮ ಏರಿಯಾಗಳಲ್ಲಿ ಬೀಳುವ ತ್ಯಾಜ್ಯ ನಿರ್ವಹಣಗೆ ನೀವು ಇನ್ನು ಮುಂದೆ ಇಂಜಿನಿಯರ್ಗೆ ಕರೆ ಮಾಡಬೇಕು. ನಿಮ್ಮ ಮನೆ ಬಾಗಿಲಿಗೆ ಕಸ ಸಂಗ್ರಹಕ ಬರುತ್ತಿಲ್ಲ ಎಂದಾಗಲೂ ನೀವು ಇಂಜಿನಿಯರ್ಗೆ ದೂರು ಸಲ್ಲಿಸಬೇಕು. ಆದರೆ ಒಂದು ಎಚ್ಚರಿಕೆ: ನೀವು ಕರೆ ಮಾಡಬೇಕಿರುವುದು ಇನ್ಫೋಸಿಸ್, ವಿಪ್ರೋ.....ಐಟಿ ಕಂಪನಿಗಳ ಟೆಕ್ಕಿಗಳಿಗಲ್ಲ. ಕಡ್ಡಾಯವಾಗಿ ಬಿಬಿಎಂಪಿ ಎಂಜಿನಿಯರುಗಳಿಗೆ!
ಬಹಳಷ್ಟು ಮಂದಿಗೆ ಗೊತ್ತಿಲ್ಲದೆ ಇರಬಹುದು. ಇಷ್ಟು ದಿವಸ ಬೆಂಗಳೂರಿನಲ್ಲಿ ಪ್ರತಿನಿತ್ಯ ಬೀಳುವ 3000 ಟನ್ ತ್ಯಾಜ್ಯವನ್ನು ನಿರ್ವಹಿಸುತ್ತಿದ್ದವರು ವೈದ್ಯಾಧಿಕಾರಿಗಳು(ಆರೋಗ್ಯ ಇಲಾಖೆ). ಸ್ಟೆಥಸ್ಕೋಪ್ ಹಿಡಿದು ಆರೋಗ್ಯದ ಅರಿವು ಮೂಡಿಸಬೇಕಾದ ವೈದ್ಯರಿಗೆ ಕಸಬರಿಗೆ ಕೊಟ್ಟಿತ್ತು ನಮ್ಮ ೃಹತ್ ಪಾಲಿಕೆ!
ಆರೋಗ್ಯ ಎಂಜಿನಿಯರಿಂಗ್ ವಿಭಾಗ: ಬಿಬಿಎಂಪಿ ಈಗ `ಸಾರ್ವಜನಿಕ ಆರೋಗ್ಯ ಇಂಜಿನಿಯರಿಂಗ್ ವಿಭಾಗ' ಎಂಬ ಹೊಸ ವಿಭಾಗವೊಂದನ್ನು ರಚಿಸಲು ನಿರ್ಧರಿಸಿದ್ದು, ತಾಜ್ಯ ವಿಲೇವಾರಿ ಕರ್ತವ್ಯವನ್ನು ಆರೋಗ್ಯ ಇಲಾಖೆಯ ಬದಲಾಗಿ ಈ ಹೊಸ ಇಂಜಿನಿಯರಿಂಗ್ ಇಲಾಖೆಗೆ ವಹಿಸಲಿದೆ.
ಇಷ್ಟರಲ್ಲೇ ವಿಭಾಗ ರಚನೆಯಾಗಲಿದ್ದು, ರಚನೆಯಾಗುವ ತನಕ ಆಯಾ ಬಿಬಿಎಂಪಿ ವಾರ್ಡಿನ ಎಂಜಿನಿಯರುಗಳು ತ್ಯಾಜ್ಯ ವಿಲೇವಾರಿ ಕಾರ್ಯ ನೋಡಿಕೊಳ್ಳಲಿದ್ದಾರೆ. ಜ. 1ರಿಂದ ಜಾರಿಯಾಗುವಂತೆ ಈಗಾಗಲೆ ವೈದ್ಯಾಧಿಕಾರಿಗಳ ಕಸ ವಿಲೇವಾರಿ ಜವಬ್ದಾರಿಯನ್ನು ನಗರಸಭೆ ವಾರ್ಡಿನ ಎಂಜಿನಿಯರುಗಳಿಗೆ ವಹಿಸಲಾಗಿದೆ.
ಪರಿಸರ ಎಂಜಿನಿಯರುಗಳ ಸಹಕಾರ: ಬಿಬಿಎಂಪಿಯಲ್ಲಿ ಒಟ್ಟು ಆರು ಮಂದಿ ಪರಿಸರ ಎಂಜಿನಿಯರುಗಳಿದ್ದಾರೆ. ಇವರ ಕೆಲಸ: ತಾಜ್ಯ ನಿರ್ವಹಣಗೆ ಸೂಕ್ತ ಜಾಗವನ್ನು ಗುರ್ತಿಸುವುದು, ವಿಲೇವಾರಿ ಸ್ಥಳದಲ್ಲಿ ಉಂಟಾಗುತ್ತಿರುವ ಪರಿಸರ ಹಾನಿ ಪರಿಣಾಮಗಳ ಬಗ್ಗೆ ಅಧ್ಯಯನ ಮಾಡಿ ವರದಿ ಸಲ್ಲಿಸುವುದು ಹಾಗೂ ತ್ಯಾಜದ ಸಾಗಾಣಿಗೆ ಕಾರ್ಯವನ್ನು ನಿರ್ವಹಿಸುವುದು. ಇಷ್ಟೊಂದು ಕಾರ್ಯವನ್ನು ಕೇವಲ ಆರು ಮಂದಿ ಪರಿಸರ ಎಂಜಿನಿಯರುಗಳು ನಿರ್ವಹಿಸುತ್ತಿರುವುದು ದೊಡ್ಡ ತಮಾಷೆ!
ಆದರೆ ಈಗ ನೂತನವಾಗಿ ರಚನೆಯಾಗುತ್ತಿರುವ ವಿಭಾಗದಿಂದ ಇನ್ನಷ್ಟು ಎಂಜಿನಿಯರುಗಳು ಕಸ ನಿರ್ವಹಣೆಗೆ ನೆರವಾಗಲಿದ್ದಾರೆ. ಅಲ್ಲದೆ ನೂತನ ವಿಭಾಗಕ್ಕೆ ಪರಿಸರ ಎಂಜಿನಿಯರುಗಳು ತಾಂತ್ರಿಕ ನೆರವು ನೀಡಲಿದ್ದಾರೆ. ಇವರು ಎರಡು ವರ್ಷಗಳಿಂದ ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಅವರ ಅನುಭವನ್ನು ನೂತನ ಎಂಜಿನಿಯರುಗಳೊಂದಿಗೆ ಹಂಚಿಕೊಳ್ಳಲಿದ್ದಾರೆ.
ಕಡೆಗೂ ಬಿಬಿಎಂಪಿಗೆ ಜ್ಞಾನೋದಯ: ಭಾರತದಲ್ಲಿರುವ ಮೆಟ್ರೋಪಾಲಿಟನ್ ನಗರಗಳಲ್ಲಿ ತಾಂತ್ರಿಕ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಬೆಂಗಳೂರು ಪ್ರಥಮ ಸ್ಥಾನದಲ್ಲಿದ್ದರೆ, ಆಡಳಿತಾತ್ಮಕ ವಿಷಯಗಳಿಗೆ ಸಂಬಂಧಿಸಿದಂತೆ ಕಡೆಯ ಸ್ಥಾನದಲ್ಲಿದೆ. ಇದಕ್ಕೆ ಸಾಕ್ಷಿ ಎಂದರೆ ಕಸ ವಿಲೇವಾರಿ ಜವಬ್ದಾರಿಯನ್ನು ಆರೋಗ್ಯ ಇಲಾಖೆಯ ವೈದ್ಯಾದಿಕಾರಿಗಳ ಸುಪರ್ದಿಗೆ ನೀಡಿರುವುದು. ಬೇರೆ ನಗರಗಳಲ್ಲಿ ಹಾಗಿಲ್ಲ. ಅಲ್ಲಿ ಈಗಾಗಲೆ ಇಂಜಿನಿಯರ್ ವಿಭಾಗ ಕಾರ್ಯ ನಿರ್ವಹಿಸುತ್ತಿದೆ. ಈಗ ಬಿಬಿಎಂಪಿಯೂ ಕೂಡ ಈ ವಿಭಾಗ ರಚಿಸುತ್ತಿರುವುದನ್ನು ನೋಡಿದರೆ ಜ್ಞಾನೋದಯವಾದಂತೆ ಕಾಣುತ್ತದೆ.
ನಿಟ್ಟುಸಿರು ಬಿಟ್ಟ ವೈದ್ಯರು: ಬೆಂಗಳೂರು ಕಸ ನಿರ್ವಹಣೆಯಿಂದ ಬಿಬಿಎಂಪಿ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು ನಿವೃತ್ತಿ ಪಡೆದಿದ್ದಾರೆ. ಈಗ ತಮ್ಮ ಆರೋಗ್ಯ ಸೇವೆಯತ್ತ ತಮ್ಮ ಗಮನ ಹರಿಸಲಿದ್ದಾರೆ. ಬೀರೂವಿನಲ್ಲಿ ಧೂಳು ಹಿಡಿದಿರುವ ಸ್ಟೆಥಸ್ಕೊಪ್ಗೆ ಕೆಲಸ ನೀಡಲಿದ್ದಾರೆ. ಜಾರಿ ಆಗದೇ ಬಿದ್ದುಕೊಂಡಿರುವ ಅಸಂಖ್ಯಾತ ಯೋಜನೆಗಳತ್ತ ಗಮನ ಹರಿಸಲಿದ್ದಾರೆ.
ಕಸ ನಿರ್ವಹಣೆ ವೈದ್ಯಾಧಿಕಾರಿಗಳಿಗೆ ಬಹುದೊಡ್ಡ ತಲೆ ನೋವಾಗಿತ್ತು. ಬಹುಕಾಲದಿಂದ ಬಿಬಿಎಂಪಿಯ ಕ್ರಮವನ್ನು ವಿರೋಧಿಸುತ್ತಾ ಬಂದಿದ್ದರು. ಹಲವು ಭಾರಿ ಪ್ರತಿಭಟನೆಗಳನ್ನೂ ನಡೆಸಿದ್ದರು. ಆದರೆ ಪಾಲಿಕೆ ವೈದ್ಯರ ಆಗ್ರಹವನ್ನು ತೊಟ್ಟಿಯಲ್ಲಿ ಬಿಸಾಡಿತ್ತು. ವೈದ್ಯಾಧಿಕಾರಿಗಳು ಈಗ ನಿರಾಳ. ದೀರ್ಘ ಕಾಲದ ಹೋರಾಟಕ್ಕೆ ಸಿಕ್ಕ ಜಯ ಎಂದು ವೈದ್ಯಾಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ತಾಜ್ಯ ನಿರ್ವಹಣೆ ೃಹತ್ ನಗರಗಳ ಮುಂದಿರುವ ಒಂದು ೃಹತ್ ಸವಾಲು. ಇದು ಅಂತಾರಾಷ್ಟ್ರೀಯ ವಿಷಯ ಕೂಡ. ತಾಜ್ಯ ನಿರ್ವಹಣೆ ಕುರಿತಂತೆ ದೇಶ ದೇಶಗಳ ನಡುವೆ ಒಪ್ಪಂದ ಒಡಂಬಡಿಕೆಗಳಿವೆ. ಭಾರತದಲ್ಲಿ ತಾಜ್ಯ ನಿರ್ವಹಣೆ ಕುರಿತಂತೆ ಹಲವು ಕಾನೂನುಗಳಿವೆ. ನೀತಿ ನಿಯಮಗಳಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತಾಜ್ಯ ಸಾಗಣೆ ಕುರಿತಂತೆ 1989ರ ಬೆಸೆಲ್ ಮಾತುಕತೆ ಪ್ರಮುಖವಾದುದು.
ಇವುಗಳ ನಡುವೆ ಪ್ರಾದೇಶಿಕ ಮಟ್ಟದಲ್ಲಿ ತೆಗೆದುಕೊಳ್ಳುವ ಕ್ರಮಗಳು ತಾಜ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಲ್ಲವು. ಈ ನಿಟ್ಟಿನಲ್ಲಿ ತಾಜ್ಯ ನಿರ್ವಹಣೆಗೆ ಬಿಬಿಎಂಪಿ ತೆಗೆದುಕೊಂಡಿರುವ ಕ್ರಮ ಯಾವ ರೀತಿಯ ಫಲಿತಾಂಶ ತರಲಿದೆ ಎಂದು ಕಾದು ನೋಡಬೇಕಿದೆ.
ಇನ್ನುಮುಂದೆ ಎಂಜಿನಿಯರುಗಳು ಕಸಬರಗೆ ಹಿಡಿಯಲಿದ್ದಾರೆ! ಬೆಂಗಳೂರಿನಲ್ಲಿ ಈಗ ನಿತ್ಯ ಉತ್ಪತ್ತಿಯಾಗುವ ಅಷ್ಟೂ ಕಸ ವಿಲೇವಾರಿಗೆ ಇಂಜಿನಿಯರುಗಳು ಹೊಣೆ. ಬೆಳಗಾಯಿತೆಂದರೆ ನಿಮ್ಮ ಏರಿಯಾಗಳಲ್ಲಿ ಬೀಳುವ ತ್ಯಾಜ್ಯ ನಿರ್ವಹಣಗೆ ನೀವು ಇನ್ನು ಮುಂದೆ ಇಂಜಿನಿಯರ್ಗೆ ಕರೆ ಮಾಡಬೇಕು. ನಿಮ್ಮ ಮನೆ ಬಾಗಿಲಿಗೆ ಕಸ ಸಂಗ್ರಹಕ ಬರುತ್ತಿಲ್ಲ ಎಂದಾಗಲೂ ನೀವು ಇಂಜಿನಿಯರ್ಗೆ ದೂರು ಸಲ್ಲಿಸಬೇಕು. ಆದರೆ ಒಂದು ಎಚ್ಚರಿಕೆ: ನೀವು ಕರೆ ಮಾಡಬೇಕಿರುವುದು ಇನ್ಫೋಸಿಸ್, ವಿಪ್ರೋ.....ಐಟಿ ಕಂಪನಿಗಳ ಟೆಕ್ಕಿಗಳಿಗಲ್ಲ. ಕಡ್ಡಾಯವಾಗಿ ಬಿಬಿಎಂಪಿ ಎಂಜಿನಿಯರುಗಳಿಗೆ!
ಬಹಳಷ್ಟು ಮಂದಿಗೆ ಗೊತ್ತಿಲ್ಲದೆ ಇರಬಹುದು. ಇಷ್ಟು ದಿವಸ ಬೆಂಗಳೂರಿನಲ್ಲಿ ಪ್ರತಿನಿತ್ಯ ಬೀಳುವ 3000 ಟನ್ ತ್ಯಾಜ್ಯವನ್ನು ನಿರ್ವಹಿಸುತ್ತಿದ್ದವರು ವೈದ್ಯಾಧಿಕಾರಿಗಳು(ಆರೋಗ್ಯ ಇಲಾಖೆ). ಸ್ಟೆಥಸ್ಕೋಪ್ ಹಿಡಿದು ಆರೋಗ್ಯದ ಅರಿವು ಮೂಡಿಸಬೇಕಾದ ವೈದ್ಯರಿಗೆ ಕಸಬರಿಗೆ ಕೊಟ್ಟಿತ್ತು ನಮ್ಮ ೃಹತ್ ಪಾಲಿಕೆ!
ಆರೋಗ್ಯ ಎಂಜಿನಿಯರಿಂಗ್ ವಿಭಾಗ: ಬಿಬಿಎಂಪಿ ಈಗ `ಸಾರ್ವಜನಿಕ ಆರೋಗ್ಯ ಇಂಜಿನಿಯರಿಂಗ್ ವಿಭಾಗ' ಎಂಬ ಹೊಸ ವಿಭಾಗವೊಂದನ್ನು ರಚಿಸಲು ನಿರ್ಧರಿಸಿದ್ದು, ತಾಜ್ಯ ವಿಲೇವಾರಿ ಕರ್ತವ್ಯವನ್ನು ಆರೋಗ್ಯ ಇಲಾಖೆಯ ಬದಲಾಗಿ ಈ ಹೊಸ ಇಂಜಿನಿಯರಿಂಗ್ ಇಲಾಖೆಗೆ ವಹಿಸಲಿದೆ.
ಇಷ್ಟರಲ್ಲೇ ವಿಭಾಗ ರಚನೆಯಾಗಲಿದ್ದು, ರಚನೆಯಾಗುವ ತನಕ ಆಯಾ ಬಿಬಿಎಂಪಿ ವಾರ್ಡಿನ ಎಂಜಿನಿಯರುಗಳು ತ್ಯಾಜ್ಯ ವಿಲೇವಾರಿ ಕಾರ್ಯ ನೋಡಿಕೊಳ್ಳಲಿದ್ದಾರೆ. ಜ. 1ರಿಂದ ಜಾರಿಯಾಗುವಂತೆ ಈಗಾಗಲೆ ವೈದ್ಯಾಧಿಕಾರಿಗಳ ಕಸ ವಿಲೇವಾರಿ ಜವಬ್ದಾರಿಯನ್ನು ನಗರಸಭೆ ವಾರ್ಡಿನ ಎಂಜಿನಿಯರುಗಳಿಗೆ ವಹಿಸಲಾಗಿದೆ.
ಪರಿಸರ ಎಂಜಿನಿಯರುಗಳ ಸಹಕಾರ: ಬಿಬಿಎಂಪಿಯಲ್ಲಿ ಒಟ್ಟು ಆರು ಮಂದಿ ಪರಿಸರ ಎಂಜಿನಿಯರುಗಳಿದ್ದಾರೆ. ಇವರ ಕೆಲಸ: ತಾಜ್ಯ ನಿರ್ವಹಣಗೆ ಸೂಕ್ತ ಜಾಗವನ್ನು ಗುರ್ತಿಸುವುದು, ವಿಲೇವಾರಿ ಸ್ಥಳದಲ್ಲಿ ಉಂಟಾಗುತ್ತಿರುವ ಪರಿಸರ ಹಾನಿ ಪರಿಣಾಮಗಳ ಬಗ್ಗೆ ಅಧ್ಯಯನ ಮಾಡಿ ವರದಿ ಸಲ್ಲಿಸುವುದು ಹಾಗೂ ತ್ಯಾಜದ ಸಾಗಾಣಿಗೆ ಕಾರ್ಯವನ್ನು ನಿರ್ವಹಿಸುವುದು. ಇಷ್ಟೊಂದು ಕಾರ್ಯವನ್ನು ಕೇವಲ ಆರು ಮಂದಿ ಪರಿಸರ ಎಂಜಿನಿಯರುಗಳು ನಿರ್ವಹಿಸುತ್ತಿರುವುದು ದೊಡ್ಡ ತಮಾಷೆ!
ಆದರೆ ಈಗ ನೂತನವಾಗಿ ರಚನೆಯಾಗುತ್ತಿರುವ ವಿಭಾಗದಿಂದ ಇನ್ನಷ್ಟು ಎಂಜಿನಿಯರುಗಳು ಕಸ ನಿರ್ವಹಣೆಗೆ ನೆರವಾಗಲಿದ್ದಾರೆ. ಅಲ್ಲದೆ ನೂತನ ವಿಭಾಗಕ್ಕೆ ಪರಿಸರ ಎಂಜಿನಿಯರುಗಳು ತಾಂತ್ರಿಕ ನೆರವು ನೀಡಲಿದ್ದಾರೆ. ಇವರು ಎರಡು ವರ್ಷಗಳಿಂದ ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಅವರ ಅನುಭವನ್ನು ನೂತನ ಎಂಜಿನಿಯರುಗಳೊಂದಿಗೆ ಹಂಚಿಕೊಳ್ಳಲಿದ್ದಾರೆ.
ಕಡೆಗೂ ಬಿಬಿಎಂಪಿಗೆ ಜ್ಞಾನೋದಯ: ಭಾರತದಲ್ಲಿರುವ ಮೆಟ್ರೋಪಾಲಿಟನ್ ನಗರಗಳಲ್ಲಿ ತಾಂತ್ರಿಕ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಬೆಂಗಳೂರು ಪ್ರಥಮ ಸ್ಥಾನದಲ್ಲಿದ್ದರೆ, ಆಡಳಿತಾತ್ಮಕ ವಿಷಯಗಳಿಗೆ ಸಂಬಂಧಿಸಿದಂತೆ ಕಡೆಯ ಸ್ಥಾನದಲ್ಲಿದೆ. ಇದಕ್ಕೆ ಸಾಕ್ಷಿ ಎಂದರೆ ಕಸ ವಿಲೇವಾರಿ ಜವಬ್ದಾರಿಯನ್ನು ಆರೋಗ್ಯ ಇಲಾಖೆಯ ವೈದ್ಯಾದಿಕಾರಿಗಳ ಸುಪರ್ದಿಗೆ ನೀಡಿರುವುದು. ಬೇರೆ ನಗರಗಳಲ್ಲಿ ಹಾಗಿಲ್ಲ. ಅಲ್ಲಿ ಈಗಾಗಲೆ ಇಂಜಿನಿಯರ್ ವಿಭಾಗ ಕಾರ್ಯ ನಿರ್ವಹಿಸುತ್ತಿದೆ. ಈಗ ಬಿಬಿಎಂಪಿಯೂ ಕೂಡ ಈ ವಿಭಾಗ ರಚಿಸುತ್ತಿರುವುದನ್ನು ನೋಡಿದರೆ ಜ್ಞಾನೋದಯವಾದಂತೆ ಕಾಣುತ್ತದೆ.
ನಿಟ್ಟುಸಿರು ಬಿಟ್ಟ ವೈದ್ಯರು: ಬೆಂಗಳೂರು ಕಸ ನಿರ್ವಹಣೆಯಿಂದ ಬಿಬಿಎಂಪಿ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು ನಿವೃತ್ತಿ ಪಡೆದಿದ್ದಾರೆ. ಈಗ ತಮ್ಮ ಆರೋಗ್ಯ ಸೇವೆಯತ್ತ ತಮ್ಮ ಗಮನ ಹರಿಸಲಿದ್ದಾರೆ. ಬೀರೂವಿನಲ್ಲಿ ಧೂಳು ಹಿಡಿದಿರುವ ಸ್ಟೆಥಸ್ಕೊಪ್ಗೆ ಕೆಲಸ ನೀಡಲಿದ್ದಾರೆ. ಜಾರಿ ಆಗದೇ ಬಿದ್ದುಕೊಂಡಿರುವ ಅಸಂಖ್ಯಾತ ಯೋಜನೆಗಳತ್ತ ಗಮನ ಹರಿಸಲಿದ್ದಾರೆ.
ಕಸ ನಿರ್ವಹಣೆ ವೈದ್ಯಾಧಿಕಾರಿಗಳಿಗೆ ಬಹುದೊಡ್ಡ ತಲೆ ನೋವಾಗಿತ್ತು. ಬಹುಕಾಲದಿಂದ ಬಿಬಿಎಂಪಿಯ ಕ್ರಮವನ್ನು ವಿರೋಧಿಸುತ್ತಾ ಬಂದಿದ್ದರು. ಹಲವು ಭಾರಿ ಪ್ರತಿಭಟನೆಗಳನ್ನೂ ನಡೆಸಿದ್ದರು. ಆದರೆ ಪಾಲಿಕೆ ವೈದ್ಯರ ಆಗ್ರಹವನ್ನು ತೊಟ್ಟಿಯಲ್ಲಿ ಬಿಸಾಡಿತ್ತು. ವೈದ್ಯಾಧಿಕಾರಿಗಳು ಈಗ ನಿರಾಳ. ದೀರ್ಘ ಕಾಲದ ಹೋರಾಟಕ್ಕೆ ಸಿಕ್ಕ ಜಯ ಎಂದು ವೈದ್ಯಾಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ತಾಜ್ಯ ನಿರ್ವಹಣೆ ೃಹತ್ ನಗರಗಳ ಮುಂದಿರುವ ಒಂದು ೃಹತ್ ಸವಾಲು. ಇದು ಅಂತಾರಾಷ್ಟ್ರೀಯ ವಿಷಯ ಕೂಡ. ತಾಜ್ಯ ನಿರ್ವಹಣೆ ಕುರಿತಂತೆ ದೇಶ ದೇಶಗಳ ನಡುವೆ ಒಪ್ಪಂದ ಒಡಂಬಡಿಕೆಗಳಿವೆ. ಭಾರತದಲ್ಲಿ ತಾಜ್ಯ ನಿರ್ವಹಣೆ ಕುರಿತಂತೆ ಹಲವು ಕಾನೂನುಗಳಿವೆ. ನೀತಿ ನಿಯಮಗಳಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತಾಜ್ಯ ಸಾಗಣೆ ಕುರಿತಂತೆ 1989ರ ಬೆಸೆಲ್ ಮಾತುಕತೆ ಪ್ರಮುಖವಾದುದು.
ಇವುಗಳ ನಡುವೆ ಪ್ರಾದೇಶಿಕ ಮಟ್ಟದಲ್ಲಿ ತೆಗೆದುಕೊಳ್ಳುವ ಕ್ರಮಗಳು ತಾಜ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಲ್ಲವು. ಈ ನಿಟ್ಟಿನಲ್ಲಿ ತಾಜ್ಯ ನಿರ್ವಹಣೆಗೆ ಬಿಬಿಎಂಪಿ ತೆಗೆದುಕೊಂಡಿರುವ ಕ್ರಮ ಯಾವ ರೀತಿಯ ಫಲಿತಾಂಶ ತರಲಿದೆ ಎಂದು ಕಾದು ನೋಡಬೇಕಿದೆ.