
ಮಾಯವಾದ ಐತಿಹಾಸಿಕ ಹಸಿರುಕೋಟೆ
ಅದು ಶೇಷಾದ್ರಿ ರಸ್ತೆ. ಮೆಜೆಸ್ಟಿಕ್ಗೆ ಬಹಳ ಹತ್ತಿರವಿದೆ. ಸಮೀಪದಲ್ಲೇ ವಿಧಾನ ಸೌಧ ಇದೆ. ಹೈಕೋರ್ಟ್ ಇದೆ. ಅಲ್ಲೇ ಮಹಾರಾಣಿ ಕಾಲೇಜಿದೆ. ಸರ್ಕಾರಿ ಪಾಲಿಟೆಕ್ನಿಕ್ ಇದೆ. ಅಲ್ಲಿ ಸದಾ ಗಿಜಿ ಗಿಜಿ ಎನ್ನುವ ವಿದ್ಯಾರ್ಥಿಗಳು. ಕೋರ್ಟಿಗೆ ಹೋಗುವ ನ್ಯಾಯವಾದಿಗಳು. ವಿಧಾನ ಸೌಧಕ್ಕೆ ಹೋಗುವ ರಾಜಕಾರಣಿಗಳು.... ಈ ಎಲ್ಲಾ ಕಾರಣಗಳಿಂದ ಅಲ್ಲಿ ಯಾವಾಗಲು ಭಾರಿ ಜನಸಂದಣಿ. ಆಲ್ವೇಸ್ ಟ್ರಾಫಿಕ್ ಜಾಮ್!
ರಸ್ತೆಯ ಇಕ್ಕೆಲಗಳಲ್ಲಿ ಮರಗಳ ಸಾಲು. ಮರದ ನೆರಳಲ್ಲಿ ಬಸ್ ಕಾಯುವ ವಿದ್ಯಾರ್ಥಿಗಳು, ನಾಗರಿಕರು. ಮರದ ಬುಡದಲ್ಲಿ ಕೂತು ಚಪ್ಪಲಿ ಹೊಲೆಯುವವರು. ಸೀಬೆಕಾಯಿ ಮಾರುವವರು...
ಶೇಷಾದ್ರಿ ಟ್ರಾಫಿಕ್ನೊಳಗೆ ನಿಂತಾಗ ಒಂದು ಅದೇನೋ ಒಂಥರಾ ನೆಮ್ಮದಿ. ಭದ್ರಕೋಟೆ ಭದ್ರತೆಯ ಅನುಭವ. ಕಡುಬಿಸಿಲು ಅಲ್ಲಿಗೆ ಬರಲು ಛಾನ್ಸೆ ಇರಲಿಲ್ಲ. ಕಾರಣ ಇಷ್ಟೆ: ಅಲ್ಲಿ ದಟ್ಟಣೆಯ ಮರಗಳ ಸಾಲಿದೆ. ರಸ್ತೆಯ ಎರಡೂ ಕಡೆ ಭಾರಿ ಗಾತ್ರದ ಮರಗಳು ರಸ್ತೆಯನ್ನು ಕೋಟೆಯಂತೆ ಕಾದಿವೆ.
*****
ಈಗ ಆ ನೆಮ್ಮದಿ ಮಂಗಮಾಯ. ಭದ್ರಕೋಟೆ ಬಿದ್ದುಹೋಗಿದೆ. ಶೇಷಾದ್ರಿ ರಸ್ತೆಯ ಚಿತ್ರಣ ಬದಲಾಗಿದೆ. ಅಲ್ಲಿ ಮರಗಳೂ ಇಲ್ಲ. ಮರದ ನೆರಳೂ ಇಲ್ಲ. ಬರೀ ಬೋಳು ಬೋಳು!
ಸದ್ಯ ಶೇಷಾದ್ರಿ ರಸ್ತೆಗೆ ಹೋಗಿ. ತಕ್ಷಣ ಕನ್ಪ್ಸೂಸ್ ಆಗುತ್ತೆ. ದಾರಿ ತಪ್ಪಿದೆನೆ? ಅನ್ನಿಸುತ್ತೆ. ೃಹತ್ ಪಾಲಿಕೆಯ ಬಾಯಿಗೆ ಶೇಷಾದ್ರಿ ರಸ್ತೆಯ `ಐತಿಹಾಸಿಕ ಹಸಿರು ಕೋಟೆ' ತುತ್ತಾಗಿದೆ. ಆದರೆ ಅದು ನಿತ್ಯ ನಡೆದಾಡುವ ಮಂದಿಗೆ ನುಂಗಲಾಗದ ತುತ್ತು!
******
ಇದು ಬರೀ ಶೇಷಾದ್ರಿ ರಸ್ತೆಯ ಕತೆಯಲ್ಲ. ನಗರದ 120 ರಸ್ತೆಗಳ ಕತೆ. ಕಳೆದ ಆರು ತಿಂಗಳಿಂದ ವಿವಿಧ ರಸ್ತೆಗಳು ತನ್ನ ಐತಿಹಾಸಿಕ ಪರಂಪರೆಯನ್ನು ಕಳೆದುಕೊಳ್ಳುತ್ತಿವೆ.
ಬಿಬಿಎಂಪಿ ತನ್ನ ಕಾರ್ಯಾಚರಣೆಯನ್ನು ಬಳ್ಳಾರಿ ರಸ್ತೆಯಿಂದ ಆರಂಭಿಸಿತು. ಅಲ್ಲಿಯ ನೂರಾರು ರಸ್ತೆಗಳು ನೆಲಕ್ಕುರುಳಿದವು. ಕೆಲ ಪರಿಸರ ವಾದಿಗಳು ವಿರೊಧ ವ್ಯಕ್ತಪಡಿಸಿದರು. `ಹಸಿರು ಉಸಿರು' ಎನ್ನುವ ಎನ್ಜಿಒವೊಂದು ಬಿಬಿಎಂಪಿಯ ಮರಕಡಿತ ಕಾರ್ಯಾಚರಣೆಯನ್ನು ವಿರೋಧಿಸಿ ಉಚ್ಛನ್ಯಾಯಾಲಯದ ಮುಂದೆ ರಿಟ್ ಅರ್ಜಿಯನ್ನೂ ಸಲ್ಲಿಸಿತು. ಆದರೆ ಆ ಕೇಸು ಬಿದ್ದು ಹೋಯಿತು.
ಆ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಕಾರ್ಯಾಚರಣೆ ಮತ್ತೆ ಆರಂಭವಾಯಿತು. ಕ್ವೀನ್ಸ್ ರಸ್ತೆಯ ಹತ್ತಾರು ಮರಗಳಿಗೆ ಕೊಡಲಿ ಹಾಕಲಾಯಿತು. ರೇಸ್ಕೋರ್ಸ್ ರೋಡಿನ ಮರ ಕಡಿದು ಆ ಜಾಗದಲ್ಲಿ ಸಿಮೆಂಟ್ ರೋಡು ಮಾಡಿದ್ದಾಯಿತು. ಮೈಸೂರು ರಸ್ತೆಯ ಬಿಎಚ್ಇಎಲ್ ಕಾರ್ಖಾನೆಯ ಸಮೀಪದ ಹಲವು ೃಹತ್ ಮರಗಳಿಗೆ ನೆಲ ತೋರಿಸಿದ್ದಾಯಿತು....
120 ರಸ್ತೆಗಳ ಸಾವಿರಕ್ಕೂ ಹೆಚ್ಚು ಮರಗಳನ್ನು ಕಡಿದಾಗ ಇಡೀ ನಗರ ಬೋಳಾಗಲಿದೆ.
ಗೊತ್ತೇ ಆಗದ ವಿಷಯ: ಸರ್ಕಾರದ ಇಲಾಖೆಗಳು ತೆಗೆದುಕೊಳ್ಳುವ ಕೆಲವೊಂದು ವಿಚಾರಗಳು ಸಾರ್ವಜನಿಕವಾಗಿ ಗೊತ್ತೇ ಆಗುವುದಿಲ್ಲ. ಅದರ ಪರಿಣಾಮ ಮಾತ್ರ ಅರಿವಾಗುತ್ತದೆ. ಬಿಬಿಎಂಪಿ ತೆಗೆದುಕೊಂಡ ರಸ್ತೆ ಅಗಲೀಕರಣದ ವಿಷಯ ಸಾರ್ವಜನಿಕವಾಗಿ ತಿಳಿದಿದ್ದು ಮರಗಳು ನೆಲಕ್ಕೆ ಉರುಳಿದಾಗ. ಇದು ನಾಗರಿಕರಿಗೆ ಮಾಡುವ ಮೋಸವಲ್ಲದೆ ಮತ್ತಿನ್ನೇನು?
ಇಲಾಖೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಾಗ ಅದರ ಸಾಧಕ ಬಾದಕಗಳನ್ನು ಮೊದಲು ಸಾರ್ವಜನಿಕರ ಮುಂದಿಟ್ಟು ಸಾರ್ವಜನಿಕ ಅಭಿಪ್ರಾಯ ನಿರ್ಮಾಣ ಮಾಡಬೇಕು. ಆದರೆ ಈ ಕೆಲಸ ನಡೆಯುತ್ತಿಲ್ಲ. ಅಧಿಕಾರಿಗಳು, ಸ್ವಹಿತ ರಾಜಕಾರಣಿಗಳು, ಸಂಬಂಧಪಟ್ಟ ವಿಷಯ ಜ್ಞಾನವೇ ಇಲ್ಲದ ತಜ್ಞರು. ಜೊತೆಗೆ ಕಾಣದ ಕೈಗಳು! ಇವರು ಆಡಿದ್ದೇ ಮಾತು. ಅದೇ ನಿರ್ಧಾರ. ಅಭಿಪ್ರಾಯ. ಜನಾಭಿಪ್ರಾಯ.
ರಸ್ತೆಯ ಇಕ್ಕೆಲಗಳಲ್ಲಿ ಮರಗಳ ಸಾಲು. ಮರದ ನೆರಳಲ್ಲಿ ಬಸ್ ಕಾಯುವ ವಿದ್ಯಾರ್ಥಿಗಳು, ನಾಗರಿಕರು. ಮರದ ಬುಡದಲ್ಲಿ ಕೂತು ಚಪ್ಪಲಿ ಹೊಲೆಯುವವರು. ಸೀಬೆಕಾಯಿ ಮಾರುವವರು...
ಶೇಷಾದ್ರಿ ಟ್ರಾಫಿಕ್ನೊಳಗೆ ನಿಂತಾಗ ಒಂದು ಅದೇನೋ ಒಂಥರಾ ನೆಮ್ಮದಿ. ಭದ್ರಕೋಟೆ ಭದ್ರತೆಯ ಅನುಭವ. ಕಡುಬಿಸಿಲು ಅಲ್ಲಿಗೆ ಬರಲು ಛಾನ್ಸೆ ಇರಲಿಲ್ಲ. ಕಾರಣ ಇಷ್ಟೆ: ಅಲ್ಲಿ ದಟ್ಟಣೆಯ ಮರಗಳ ಸಾಲಿದೆ. ರಸ್ತೆಯ ಎರಡೂ ಕಡೆ ಭಾರಿ ಗಾತ್ರದ ಮರಗಳು ರಸ್ತೆಯನ್ನು ಕೋಟೆಯಂತೆ ಕಾದಿವೆ.
*****
ಈಗ ಆ ನೆಮ್ಮದಿ ಮಂಗಮಾಯ. ಭದ್ರಕೋಟೆ ಬಿದ್ದುಹೋಗಿದೆ. ಶೇಷಾದ್ರಿ ರಸ್ತೆಯ ಚಿತ್ರಣ ಬದಲಾಗಿದೆ. ಅಲ್ಲಿ ಮರಗಳೂ ಇಲ್ಲ. ಮರದ ನೆರಳೂ ಇಲ್ಲ. ಬರೀ ಬೋಳು ಬೋಳು!
ಸದ್ಯ ಶೇಷಾದ್ರಿ ರಸ್ತೆಗೆ ಹೋಗಿ. ತಕ್ಷಣ ಕನ್ಪ್ಸೂಸ್ ಆಗುತ್ತೆ. ದಾರಿ ತಪ್ಪಿದೆನೆ? ಅನ್ನಿಸುತ್ತೆ. ೃಹತ್ ಪಾಲಿಕೆಯ ಬಾಯಿಗೆ ಶೇಷಾದ್ರಿ ರಸ್ತೆಯ `ಐತಿಹಾಸಿಕ ಹಸಿರು ಕೋಟೆ' ತುತ್ತಾಗಿದೆ. ಆದರೆ ಅದು ನಿತ್ಯ ನಡೆದಾಡುವ ಮಂದಿಗೆ ನುಂಗಲಾಗದ ತುತ್ತು!
******
ಇದು ಬರೀ ಶೇಷಾದ್ರಿ ರಸ್ತೆಯ ಕತೆಯಲ್ಲ. ನಗರದ 120 ರಸ್ತೆಗಳ ಕತೆ. ಕಳೆದ ಆರು ತಿಂಗಳಿಂದ ವಿವಿಧ ರಸ್ತೆಗಳು ತನ್ನ ಐತಿಹಾಸಿಕ ಪರಂಪರೆಯನ್ನು ಕಳೆದುಕೊಳ್ಳುತ್ತಿವೆ.
ಬಿಬಿಎಂಪಿ ತನ್ನ ಕಾರ್ಯಾಚರಣೆಯನ್ನು ಬಳ್ಳಾರಿ ರಸ್ತೆಯಿಂದ ಆರಂಭಿಸಿತು. ಅಲ್ಲಿಯ ನೂರಾರು ರಸ್ತೆಗಳು ನೆಲಕ್ಕುರುಳಿದವು. ಕೆಲ ಪರಿಸರ ವಾದಿಗಳು ವಿರೊಧ ವ್ಯಕ್ತಪಡಿಸಿದರು. `ಹಸಿರು ಉಸಿರು' ಎನ್ನುವ ಎನ್ಜಿಒವೊಂದು ಬಿಬಿಎಂಪಿಯ ಮರಕಡಿತ ಕಾರ್ಯಾಚರಣೆಯನ್ನು ವಿರೋಧಿಸಿ ಉಚ್ಛನ್ಯಾಯಾಲಯದ ಮುಂದೆ ರಿಟ್ ಅರ್ಜಿಯನ್ನೂ ಸಲ್ಲಿಸಿತು. ಆದರೆ ಆ ಕೇಸು ಬಿದ್ದು ಹೋಯಿತು.
ಆ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಕಾರ್ಯಾಚರಣೆ ಮತ್ತೆ ಆರಂಭವಾಯಿತು. ಕ್ವೀನ್ಸ್ ರಸ್ತೆಯ ಹತ್ತಾರು ಮರಗಳಿಗೆ ಕೊಡಲಿ ಹಾಕಲಾಯಿತು. ರೇಸ್ಕೋರ್ಸ್ ರೋಡಿನ ಮರ ಕಡಿದು ಆ ಜಾಗದಲ್ಲಿ ಸಿಮೆಂಟ್ ರೋಡು ಮಾಡಿದ್ದಾಯಿತು. ಮೈಸೂರು ರಸ್ತೆಯ ಬಿಎಚ್ಇಎಲ್ ಕಾರ್ಖಾನೆಯ ಸಮೀಪದ ಹಲವು ೃಹತ್ ಮರಗಳಿಗೆ ನೆಲ ತೋರಿಸಿದ್ದಾಯಿತು....
120 ರಸ್ತೆಗಳ ಸಾವಿರಕ್ಕೂ ಹೆಚ್ಚು ಮರಗಳನ್ನು ಕಡಿದಾಗ ಇಡೀ ನಗರ ಬೋಳಾಗಲಿದೆ.
ಗೊತ್ತೇ ಆಗದ ವಿಷಯ: ಸರ್ಕಾರದ ಇಲಾಖೆಗಳು ತೆಗೆದುಕೊಳ್ಳುವ ಕೆಲವೊಂದು ವಿಚಾರಗಳು ಸಾರ್ವಜನಿಕವಾಗಿ ಗೊತ್ತೇ ಆಗುವುದಿಲ್ಲ. ಅದರ ಪರಿಣಾಮ ಮಾತ್ರ ಅರಿವಾಗುತ್ತದೆ. ಬಿಬಿಎಂಪಿ ತೆಗೆದುಕೊಂಡ ರಸ್ತೆ ಅಗಲೀಕರಣದ ವಿಷಯ ಸಾರ್ವಜನಿಕವಾಗಿ ತಿಳಿದಿದ್ದು ಮರಗಳು ನೆಲಕ್ಕೆ ಉರುಳಿದಾಗ. ಇದು ನಾಗರಿಕರಿಗೆ ಮಾಡುವ ಮೋಸವಲ್ಲದೆ ಮತ್ತಿನ್ನೇನು?
ಇಲಾಖೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಾಗ ಅದರ ಸಾಧಕ ಬಾದಕಗಳನ್ನು ಮೊದಲು ಸಾರ್ವಜನಿಕರ ಮುಂದಿಟ್ಟು ಸಾರ್ವಜನಿಕ ಅಭಿಪ್ರಾಯ ನಿರ್ಮಾಣ ಮಾಡಬೇಕು. ಆದರೆ ಈ ಕೆಲಸ ನಡೆಯುತ್ತಿಲ್ಲ. ಅಧಿಕಾರಿಗಳು, ಸ್ವಹಿತ ರಾಜಕಾರಣಿಗಳು, ಸಂಬಂಧಪಟ್ಟ ವಿಷಯ ಜ್ಞಾನವೇ ಇಲ್ಲದ ತಜ್ಞರು. ಜೊತೆಗೆ ಕಾಣದ ಕೈಗಳು! ಇವರು ಆಡಿದ್ದೇ ಮಾತು. ಅದೇ ನಿರ್ಧಾರ. ಅಭಿಪ್ರಾಯ. ಜನಾಭಿಪ್ರಾಯ.