ಶನಿವಾರ, ಅಕ್ಟೋಬರ್ 4, 2008




























ಸುರಸುಂದರ ಬಿಳಿಸಿಂಹ!

RARE SPECIES ON THIS PLANET





ಮನುಷ್ಯ ಪ್ರಾಣಿಯ ತಲೆಯೊಳಗೆ ಬುದ್ಧಿ ಬಿಟ್ಟರೆ ಇನ್ನೇನೂ ಇಲ್ಲ! ಆದರೆ ತನ್ನನ್ನು ತಾನು ಸುರ ಸುಂದರಾಂಗ ಅಂದುಕೊಂಡಿದ್ದಾನೆ. ಇವ ನವಿಲಿಗಿಂತ ಸುಂದರನೆ? ಕತ್ರಿನಾಳಿಗಿಂತ ಕೋತಿ ಸೊಂಟವೇ ಮೇಲು!
ಅಪರೂಪ ಎನಿಸುವ ಪ್ರಾಣಿ ಜೀವಗಳು ಈ ಭೂ ಮಂಡಲದ ಮೇಲಿವೆ. ಕೆಲ ಪ್ರಾಣಿಗಳನ್ನು ನೋಡಿದರೆ ಮತ್ತೆ ಮತ್ತೆ ನೋಡಬೇಕು ಎನಿಸುತ್ತದೆ. ಈ ಬಿಳಿ ಸಿಂಹಗಳನ್ನು (ಚಿತ್ರ) ನೋಡಿ ಎಷ್ಟು ಸುಂದರವಾಗಿವೆ.
ಬಿಳಿ ಸಿಂಹಗಳು ಇಂಗ್ಲೆಂಡಿನಲ್ಲಿವೆ. ಇವುಗಳಿಗಾಗಿ ಇಡೀ ಜಗತ್ತನ್ನು ಜಾಲಾಡಿದರೆ 130 ಕ್ಕಿಂತ ಜಾಸ್ತಿ ಸಿಗಲಾರವು. ಇವು ಬಹಳ ಅಪರೂಪದ ಪ್ರಾಣಿಗಳು. ಇಂಗ್ಲೆಂಡ್‌ ಇವುಗಳ ರಕ್ಷಣೆಗಾಗಿ ಟೊಂಕಕಟ್ಟಿ ನಿಂತಿದೆ. ಇಂಗ್ಲೆಂಡಿನ ಜನ ಮನುಷ್ಯರಿಗಿಂತ ಹೆಚ್ಚಾಗಿ ಪ್ರೀತಿಸುತ್ತಾರೆ.
ಚಿತ್ರದಲ್ಲಿರುವ ಎರಡು ಬಿಳಿಸಿಂಹಗಳು ಜನವರಿಯಲ್ಲಿ ಜನಿಸಿದವು. ಅವುಗಳಿಗೆ ತಾರಾ ಮತ್ತು ಜಾರಾ ಎಂದು ಹೆಸರಿಸಲಾಯಿತು.



ಇಷ್ಟರಲ್ಲೇ ಇ- ವೇಸ್ಟ್‌ ಲಾ!



ನಮ್ಮ ಕೆಲಸ ಕಿತ್ತುಕೊಳ್ಳಲು ಕಂಪ್ಯೂಟರ್‌ ಬೇಕೆ ಬೇಕು. ಕೆಟ್ಟರೆ ಅದು ಇ- ವೇಸ್ಟ್‌. ಬರೀ ಕಂಪ್ಯೂಟರ್‌ ಮಾತ್ರವಲ್ಲ, ಮೊಬೈಲ್‌: ಇದು ಇದಿಲ್ಲದಿದ್ದರೆ ಜೀವನ ಮುಂದಕ್ಕೇ ಹೋಗುವುದಿಲ್ಲ. ಕರೆನ್ಸಿ ಇಲ್ಲದಿದ್ದರೂ ಪರವಾಗಿಲ್ಲ! ಚೈನಾ ಮೊಬೈಲ್‌ಗಳದ್ದು ಇನ್ನೊಂದು ಕತೆ. ನೋ ರಿಪೇರಿ. ಯೂಸ್‌ ಅಂಡ್‌ ಥ್ರೋ! ಟಿವಿ, ರೆಫ್ರಿಜರೇಟರ್‌, ವಾಷಿಂಗ್‌ಮಷೀನು ಇಂತಹ ವಿದ್ಯುತ್‌ ಉಪಕರಣಗಳು ಮಾನವ ಬದುಕಿನ ಒಂದು ಅಂಗವೇ ಆಗಿಬಿಟ್ಟಿವೆ. ಕಡೆಗೆ ಅವು ಇ-ಕಸ. ಇದನ್ನು ಸಾಗ ಹಾಕುವುದಾದರೂ ಎಲ್ಲಿಗೆ? ಇ- ತ್ಯಾಜ್ಯಕ್ಕೆ ತಿಪ್ಪೆಗುಂಡಿ ಎಲ್ಲಿದೆ?
ಗೃಹೋತ್ಪತ್ತಿ ತ್ಯಾಜ್ಯ ನಿರ್ವಹಣೆಯೇ ಒಂದು ಸವಾಲಾಗಿರುವಾಗ ಮಟ್ರೋ ನಗರಗಳಿಗೆ ಇ- ತ್ಯಾಜ್ಯ ನಿರ್ವಹಣೆ ದೊಡ್ಡ ಸವಾಲಾಗಿದೆ. ಭಾರತದಲ್ಲಿ ವರ್ಷಕ್ಕೆ 3.3 ಲಕ್ಷ ಟನ್‌ ಇ- ತ್ಯಾಜ್ಯ ಉತ್ಪತ್ತಿಯಾಗುತ್ತದೆ. 2011ರ ವೇಳಗೆ ಇದರ ಪ್ರಮಾಣ 4.7 ಲಕ್ಷ ಟನ್‌ ಹೆಚ್ಚಾಗುವುದಾಗಿ ಊಹಿಸಲಾಗಿದೆ. ಶೆ. 50ರಷ್ಟು ಇ-ತ್ಯಾಜ್ಯ ಲೆಕ್ಕಕ್ಕೇ ಸಿಗುತ್ತಿಲ್ಲ.
ಇ- ಕಸ ಬಹಳ ಹಾನಿಕಾರಕವಾದುದು. ಪರಿಸರದ ಅಪಾಯಕರ ಪರಿಣಾಮ ಬೀರುತ್ತದೆ. ವಿದ್ಯುತ್‌ ಉಪಕರಣಗಳನ್ನು ಸಂಸ್ಕರಿಸುವ ಕಾರ್ಮಿಕರಿಗೆ ವಿವಿಧ ಬಗೆಯ ವ್ಯಾಧಿಗಳು ಕಾಣಿಸಿಕೊಳ್ಳಲಿವೆ.
ಇ- ತ್ಯಾಜ್ಯಕ್ಕೆ ಕಾನೂನಿಲ್ಲ: ಗೃಹೋತ್ಪತ್ತಿ ತ್ಯಾಜ್ಯ ನಿರ್ವಹಣೆಗೆ ಕಾನೂನುಗಳಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಸೆಲ್‌ ಮಾತುಕತೆ ( Bessel convention) ಇದೆ. ಭಾರತದಲ್ಲಿ 1986 ಪರಿಸರ (ಸಂರಕ್ಷಣೆ) ಕಾನೂನಿದೆ. 1989ರ ತ್ಯಾಜ್ಯನಿರ್ವಹಣಾ ನಿಯಮಗಳಿವೆ. ಆದರೆ ಇ- ತ್ಯಾಜ್ಯ ನಿರ್ವಹಣೆಗೆ ಕಾನೂನಿಲ್ಲ. ಇ-ತ್ಯಾಜ್ಯ ಪರಿಕಲ್ಪನೆ ಹುಟ್ಟಿಕೊಂಡಿದ್ದೇ ಒಂದು ದಶಕದಿಂದೀಚೆಗೆ.
ಇ-ತ್ಯಾಜ್ಯ ಕಾನೂನಿಗೆ ಇದು ಸಕಾಲ: ಬೆಂಗಳೂರಿನಲ್ಲಿ ಸೆ. 25ರಂದು ನಡೆದ `ಪರಿಸರ ಸ್ನೇಹಿ ಇ- ತ್ಯಾಜ್ಯ ನಿರ್ವಹಣೆ ಮಾರ್ಗಸೂಚಿಗಳು' ಎಂಬ ರಾಷ್ಟ್ರಮಟ್ಟದ ಕಾರ್ಯಗಾರದಲ್ಲಿ ಇ- ತ್ಯಾಜ್ಯ ನಿರ್ವಹಣಗೆ ಜರೂರಾಗಿ ಕಾನೂನಿನ ಅವಶ್ಯಕತೆ ಇದೆ. ಈ ತ್ಯಾಜ್ಯದ ಪರಿಣಾಮ ಪರಿಣಾಮ ಈಗ ಎಲ್ಲರ ಗಮನಕ್ಕೆ ಬರುತ್ತಿದೆ. ಆದ್ದರಿಂದ ಅದರೆ ನಿರ್ವಹಣೆಗೆ ಕಾನೂನು ಜಾರಿಗೊಳಿಸಲು ಇದು ಸಕಾಲ ಎಂಬ ಅಭಿಪ್ರಾಯ ಕೇಳಿಬಂತು.
ಈ ಕಾರ್ಯಗಾರವನ್ನು ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ಕೆಲ ಪರಿಸರ ಎನ್‌ಜಿ ಒಗಳು ಹಾಗೂ ತಯಾರಿಕ ಸಂಘ ಆಶ್ರಯದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿವಿಧ ಇಲಾಖೆಗಳ, ಕಂಪನಿಗಳ, ಎನ್‌ಜಿ ಒಗಳ ತಜ್ಞರುಗಳು ಇ- ತ್ಯಾಜ್ಯದಿಂದ ಉತ್ಪತ್ತಿಯಾಗಿರುವ ಸಮಸ್ಯೆಗಳ ಬಗ್ಗೆ ತಮ್ಮ ವಿಷಯ ಮಂಡಿಸಿದರು. ಎಲ್ಲರೂ ಒಮ್ಮತದಿಂದ ಇ- ತ್ಯಾಜ್ಯ ಸಮಸ್ಯೆ ನಿವಾರಣೆಗೆ ಕಾನೂನು ರೂಪಿಸುವುದು ಅಂತಿಮ ಪರಿಹಾರ ಎಂದು ಒಪ್ಪಿಕೊಂಡರು.
ಇ- ತ್ಯಾಜ್ಯ ಸಂಸ್ಕರಣೆಗೆ ವೈಜ್ಞಾನಿಕ ಕ್ರಮ ಅಗತ್ಯವಾಗಿದ್ದು, ವಿದ್ಯುತ್‌ ಉಪಕರಣಗಳ ಬಳಕೆದಾರರು ಮತ್ತು ಗ್ರಾಹಕರು ಎತ್ತೆಚ್ಚುಕೊಳ್ಳುವ ಅವಶ್ಯಕತೆ ಹೆಚ್ಚಾಗಿದೆ. ಉಪಕರಣಗಳ ಬಳಕೆಯ ಮೇಲೆ ಕೆಲ ನಿಷೇಧ ಹಾಗೂ ಹೊಣೆಗಾರಿಕೆಗಳನ್ನು ಹೇರುವ ಪರಿಪೂರ್ಣ ಕಾನೂನು ರೂಪಿಸುವ ಅವಶ್ಯಕತೆ ಇದೆ ಎಂಬ ತೀರ್ಮಾನ ಕೈಗೊಳ್ಳಲಾಯಿತು.
ನಿರ್ವಹಣಾ ನಿರ್ದೇಶನಗಳು: ಇ- ತ್ಯಾಜ್ಯ ನಿರ್ವಹಣೆಗೆ ಇದೇ ವರ್ಷದ ಮಾರ್ಚ್‌ ತಿಂಗಳಲ್ಲಿ ಕೆಲವು ನಿರ್ದೇಶನಗಳನ್ನು ಒಳಗೊಂಡ ಒಂದು ಕಿರು ಆವೃತ್ತಿಯನ್ನು ಬಿಡುಗಡೆಗೊಳಿಸಲಾಗಿದೆ. ಇದರಲ್ಲಿ ತ್ಯಾಜ್ಯದಿಂದ ಉಂಟಾಗಬಹುದಾದ ಪರಿಣಾಮ ಅವುಗಳ ನಿರ್ವಹಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರಿಸಲಾಗಿದೆ. ಇದು ನಿಯಮಗಳ ಆವೃತ್ತಿ ಆಗಿಲ್ಲದ ಕಾರಣ ಇದರಿಂದ ಇ- ತ್ಯಾಜ್ಯ ನಿರ್ವಹಣೆ ಕಷ್ಟ ಆದ್ದರಿಂದ ಕಟ್ಟುನಿಟ್ಟಿನ ಕಾನೂನಿನ ಅವಶ್ಯಕತೆ ಇದೆ.
ರಪ್ತು ರೋಗ: ಇ- ತ್ಯಾಜ್ಯವನ್ನು ಬೇರೆ ಬೇರೆ ರಾಜ್ಯಗಳಿಗೆ, ದೇಶಗಳಿಗೆ ರಪ್ತು ಮಾಡಲಾಗುತ್ತದೆ. ಇದು ಬಲುದೊಡ್ಡ ರೋಗ. ಅಕ್ರಮವೂ ಆಗಿದೆ. ಬೆಂಗಳೂರಿನ ಹೊರವಲಯದ ಕೆಲ ಕೆರೆಗಳಲ್ಲಿ ಹೊರ ರಾಜ್ಯಗಳು ತಮ್ಮ ತಮ್ಮ ಇ- ತ್ಯಾಜ್ಯವನ್ನು ಅಕ್ರಮವಾಗಿ ಸುರಿದಿರುವುದು ಬೆಳಕಿಗೆ ಬಂದಿದೆ.
ಇದು ಜಾಗತಿಕ ರೋಗವೂ ಹೌದು. ಪಾಶ್ಚಾತ್ಯ ರಾಷ್ಟ್ರಗಳು ಆಫ್ರಿಕನ್‌ ರಾಷ್ಟ್ರಗಳನ್ನು ತಮ್ಮ ತ್ಯಾಜ್ಯ ಬಿಸಾಡುವ ಡಸ್ಟ್‌ಬಿನ್‌ ಅಂದುಕೊಂಡಿವೆ. ಭಾರತವೂ ಕೂಡ ಪಾಶ್ಚಾತ್ಯ ರಾಷ್ಟ್ರಗಳ ಇ-ತ್ಯಾಜ್ಯದ ಒಂದು ಡಸ್ಟ್‌ಬಿನ್‌.
ಈಗೆಲ್ಲಾ ನಗರಗಳು ಎಲೆಕ್ಟ್ರಾನಿಕ್‌ ಸಿಟಿಗಳಾಗುತ್ತಿವೆ. ಗ್ರೀನ್‌ಸಿಟಿ ಯಾರಿಗೂ ಬೇಡ. ಎಲೆಕ್ಟ್ರಾನಿಕ್‌ ಸಿಟಿ ಅಂದಮೇಲೆ ಎಲೆಕ್ಟ್ರಾನಿಕ್‌ ವೇಸ್ಟ್‌ ಇರಲೇಬೇಕು. ವ್ಯಕ್ತಿ ಇದ್ದ ಮೇಲೆ ವ್ಯರ್ಥ ಇರಲ್ವೆ?