ಮಂಗಳವಾರ, ಸೆಪ್ಟೆಂಬರ್ 30, 2008

ವಾಸ್ತು ಹೆಸ­ರಿ­ನಲ್ಲಿ ವೃಕ್ಷ­ಗ­ಳಿಗೆ ವಿಷ!


ವಾಸ್ತು ಹೆಸ­ರಿ­ನಲ್ಲಿ ವೃಕ್ಷ­ಗ­ಳಿಗೆ ವಿಷ!


ಮುಂದಿನ ಮರ ಮನೆ ಮಾಲಿ­ಕ­ನಿಗೆ ಕಿರಿ­ಕಿರಿ. ಏನಾ­ದರೂ ಮಾಡಿ ಆ ಜಾಗ­ದಲ್ಲಿ ಮರವೇ ಇರ­ಲಿಲ್ಲ ಎನ್ನುವ ರೀತಿ ಮಾಡ­ಬೇಕು. ಕಡಿದು ಬೀಳಿ­ಸುವ ಹಾಗಿಲ್ಲ, ಅದು ಅಕ್ರಮ! ಮರದ ಕಾಟ­ದಿಂದ ತಪ್ಪಿ­ಸಿ­ಕೊ­ಳ್ಳಲು ಒಂದು ಕೆಲಸ ಮಾಡ­ಬ­ಹುದು. ಯಾರಿಗೂ ತಿಳಿ­ಯದ ಹಾಗೆ ಮರಕ್ಕೆ ವಿಷ ಉಣಿಸಿ ಕೊಲ್ಲು­ವುದು! ಅಲ್ಲಿಗೆ ಮರದ ಕಿರಿ­ಕಿ­ರಿ­ಯಿಂದ ಬಚಾವ್‌. ಕಾಂಪೌಂ­ಡ್‌ಗೆ ಸ್ವಲ್ಪ ಜಾಸ್ತಿ ಜಾಗ ಸಿಕ್ಕಿದ ಹಾಗಾ­ಯಿತು.
ಇದು ತಮಾ­ಷೆ­ಯಲ್ಲ. ಇದು ಬೆಂಗ­ಳೂ­ರಿ­ನಲ್ಲಿ ನಡೆ­ಯು­ತ್ತಿ­ರುವ ಸತ್ಯ ಸಂಗತಿ. ಒಂದು­ಕಡೆ ರಸ್ತೆ ಅಗ­ಲೀ­ಕ­ರ­ಣದ ಹೆಸ­ರಲ್ಲಿ ಬಿಬಿ­ಎಂಪಿ ಮರ­ಗ­ಳನ್ನು ನೆಲ­ಕ್ಕು­ರು­ಳಿ­ಸು­ತ್ತಿದೆ. ಇನ್ನೊಂದು ಕಡೆ ಮೆಟ್ರೋ ರೈಲಿಗೆ ಮರ­ಗ­ಳನ್ನು ಬಲಿ­ಕೊ­ಡ­ಲಾ­ಗು­ತ್ತಿದೆ. ಇದು ಎಲ್ಲ­ರಿಗೂ ಗೊತ್ತಿ­ರುವ ಸುದ್ದಿ. ಆದರೆ ಯಾರಿಗೂ ಗೊತ್ತಿ­ರದ ಇನ್ನೊಂದು ಸುದ್ದಿಯೇ `ಮ­ರ­ಗ­ಳಿಗೆ ವಿಷ ಉಣಿಸಿ ಕೊಲೆ.’
ಇತ್ತಿ­ಚೆಗೆ ಮಲ್ಲೇ­ಶ್ವರಂ ಬಡಾ­ವ­ಣೆಯ 15ನೇ ಕ್ರಾಸ್‌­ನಲ್ಲಿ ಮರ­ಬಿದ್ದು ಮಹಿ­ಳೆ­ಯೊ­ಬ್ಬರು ಮೃತ­ಪ­ಟ್ಟರು. ಮಳೆ ಗಾಳಿ ಏನೂ ಇರ­ಲಿಲ್ಲ. ಇದ್ದ­ಕ್ಕಿ­ದ್ದಂತೆ ಬಿದ್ದ ಮರದ ಬುಡ­ವನ್ನು ಪರಿ­ಶೀ­ಲಿ­ಸಿ­ದಾಗ ಬಹಿ­ರಂ­ಗ­ಗೊಂಡ ಸುದ್ದಿಯೇ ಮರ­ಗ­ಳಿಗೆ ವಿಷ­ಪ್ರಾ­ಷನ! ಯಾರೋ ಕಿಡಿ­ಗೇ­ಡಿ­ಗಳು ಮರದ ಬುಡಕ್ಕೆ ಮರ್ಕ್ಯುರಿ ಮಿಶ್ರ­ಣ­ವನ್ನು ಸುರಿದು, ಅದರ ಬೇರು­ಗಳು ಸುಟ್ಟು­ಹೋ­ಗು­ವಂತೆ ಮಾಡಿ­ದ್ದರು. ಅವರು ಬುದ್ದಿ­ವಂತ ಕಿಡಿ­ಗೇ­ಡಿ­ಗಳು. ಬುಡದ ಸುತ್ತಲೂ ಸಗಣಿ ಹಾಕಿದ್ದ ಕಾರಣ ವಿಷ ಬುಡ­ದಲ್ಲಿ ಇರು­ವುದು ಯಾರಿಗೂ ತಿಳಿ­ಯ­ಲಿಲ್ಲ.
ಕಾರ­ಣ­ಗಳು ಏನು ಗೊತ್ತೆ?: ಬಹಳ ಕ್ಷುಲ್ಲ­ಕ­ವಾ­ಗಿವೆ. ವಾಸ್ತು ಹೆಸ­ರಿ­ನಲ್ಲಿ ಮರ­ವನ್ನು ಕೊಲ್ಲ­ಲಾ­ಗು­ತ್ತಿದೆ. ಈ ಜೋತಿ­ಷಿ­ಗ­ಳಿಗೂ ಬುದ್ಧಿ ಇಲ್ಲ. ವಾಸ್ತು ದೋಷ­ವಿ­ದ್ದರೆ `ಮನೆ ಬಿಡಿ’ ಎಂದು ಸಲಹೆ ಮಾಡಲಿ. ಅದು ಬಿಟ್ಟು ಮರ ಕಡಿ­ಯಿರಿ ಅಂತ ಯಾಕೆ ಮಾಡ­ಬೇಕು? ಮರದ ಬೇರು­ಗಳು ಮನೆಯ ಕಾಂಪೌಂ­ಡಿನ ಗೋಡೆ­ಯನ್ನು ಹಾಳು­ಗೆ­ಡ­ವು­ತ್ತವೆ ಎಂದೂ ಕೂಡ ಮರಕ್ಕೆ ವಿಷ ಉಣಿ­ಸ­ಲಾ­ಗು­ತ್ತಿದೆ.
ಸೌದೆ­ಗಾಗಿ ಮರದ ಕೊಲೆ: ಇಟ್ಟಿಗೆ ಸುಡು­ವ­ವರು ಬದು­ಕಿ­ರುವ ಮರ­ಗ­ಳನ್ನು ಕೆಡವಿ ಒಣ­ಗಿಸಿ ಸೌದೆ ಮಾಡಿ­ಕೊ­ಳ್ಳು­ತ್ತಾರೆ. ಬರೀ ಇಟ್ಟಿಗೆ ಸುಡು­ವ­ವರು ಮಾತ್ರ­ವಲ್ಲ ದಿನ­ಬ­ಳ­ಕೆಗೆ ಸೌದೆ­ಯನ್ನು ಬೆಳೆ­ಸು­ವ­ವರು ಕೂಡ ಸಣ್ಣ ಪುಟ್ಟ ಮರ­ಗ­ಳನ್ನು ಕಡಿದು ಸೌದೆಗೆ ಬಳ­ಸು­ತ್ತಾರೆ. ಗ್ರಾಮೀಣ ಭಾಗ­ದಲ್ಲಿ ಸೌದೆ­ಯಿಂದ ಅಡುಗೆ ಮಾಡು­ವ­ವರು ಈ ಕೃತ್ಯ­ವನ್ನು ಹೆಚ್ಚು ಮಾಡು­ತ್ತಾರೆ.
ಭಾರ­ತೀಯ ಅರಣ್ಯ ಕಾನೂ­ನಿನ ಪ್ರಕಾರ ಈ ಎಲ್ಲಾ ಕೃತ್ಯ­ಗಳು ಅಕ್ರಮ. ಅರಣ್ಯ ಉತ್ಪ­ನ್ನ­ಗ­ಳಿಗೆ ಧಕ್ಕೆ ಮಾಡು­ವ­ವ­ರಿಗೆ ಶಿಕ್ಷಿ ವಿಧಿ­ಸುವ ಉಪ­ಬಂ­ಧ­ಗಳು ಈ ಕಾನೂ­ನಿ­ನಲ್ಲಿ ಇದೆ. ಆದರೆ ಬೆಂಗೂ­ಳೂ­ರಿನ ಯಾವೊಂದು ಪೊಲೀಸ್‌ ಠಾಣೆ­ಯಲ್ಲೂ ಮರಕ್ಕೆ ವಿಷ­ಪ್ರಾ­ಷ­ನಕ್ಕೆ ಸಂಬಂ­ಧಿ­ಸಿದ ಯಾವೊಂದು ಪ್ರಕ­ರ­ಣವೂ ದಾಖ­ಲಾ­ಗಿಲ್ಲ.
ಇಲಾ­ಖೆ­ಗ­ಳಿಗೆ ಬಾಯಿ ಇಲ್ಲ: ಅರಣ್ಯ ಇಲಾ­ಖೆಯ ಅಧಿ­ಕಾ­ರಿ­ಗ­ಳನ್ನು ಕೇಳಿ­ದರೆ ಈ ವಿಷಯ ಗೊತ್ತೇ ಇಲ್ಲಾ ಎಂಬಂತೆ ನಾಟಕ ಆಡು­ತ್ತಾರೆ. ಬೀಳುವ ಅಪಾ­ಯ­ವಿ­ರುವ ಕೆಲವು ಹಳೆಯ ಮರ­ಗ­ಳನ್ನು ಕಡಿ­ಯ­ಬೇಕು ನಿಜ. ಆದರೆ ಯಾರಿಗೂ ತಿಳಿ­ಯದ ಹಾಗೆ ಯಾವುದೋ ಅನಿ­ಲ­ವನ್ನು ಇಂಜೆಕ್ಟ್‌ ಮಾಡಿ ಕೆಡ­ವ­ಬೇ­ಕಿಲ್ಲ. ಮರ ಉರುಳಿ ಬಿದ್ದಾಗ ಮಾತ್ರ ಮರಕ್ಕೆ ವಿಷಾ­ನಿಲ ಇಂಜೆಕ್ಟ್‌ ಮಾಡ­ಲಾ­ಗಿದೆ ಎಂದು ತಿಳಿ­ಯು­ತ್ತದೆ. ಆದರೆ ಅದಕ್ಕೂ ಮುಂಚೆ ಮರ­ವನ್ನು ಟೆಸ್ಟ್‌ ಮಾಡಿ ಆ ರೀತಿ ಏನಾ­ದರೂ ಮಾಡ­ಲಾ­ಗಿ­ದೆಯೇ ಎಂಬು­ದನ್ನು ಪತ್ತೆ ಮಾಡುವ ಮಾನ­ದಂಡ ಅಧಿ­ಕಾ­ರಿ­ಗಳ ಬಳಿ ಇಲ್ಲ.
ತಪ್ಪಿ­ಸಿ­ಕೊ­ಳ್ಳು­ವುದು ಸುಲಭ: ಮರ ಹಸಿ­ರಾಗಿ ಆರೋ­ಗ್ಯ­ವಾ­ಗಿಯೇ ಇರು­ತ್ತದೆ. ಇದ್ದ­ಕ್ಕಿಂ­ದಂತೇ ಉರುಳಿ ಬಿದ್ದಾಗ ಯಾರ ಮೇಲೂ ಅನು­ಮಾನ ಪಡ­ಲಿ­ಕ್ಕಾ­ಗು­ವು­ದಿಲ್ಲ.ಗೆ­ದ್ದಲು ತಿಂದು ಸತ್ತಿ­ದ್ದಕ್ಕೆ ಯಾರೇನು ಮಾಡ­ಕ್ಕಾ­ಗುತ್ತೆ ಅಂತ ಸುಲ­ಭ­ವಾಗಿ ಅಪ­ರಾ­ಧಿ­ಗಳು ತಪ್ಪಿ­ಸಿ­ಕೊ­ಳ್ಳ­ಬ­ಹುದು.
ಯಾವ ಕಾರ­ಣ­ಕ್ಕಾಗಿ ಮರ ಉರುಳಿ ಬಿದ್ದಿತು, ನಿಜ­ವಾಗಿ ವಿಷ ಉಣಿಸಿ ಮರ­ವನ್ನು ಕೊಲ್ಲ­ಲಾ­ಯಿತೆ ಎಂದು ಪತ್ತೆ ಮಾಡುವ ಮಾನ­ದಂ­ಡದ ಅವ­ಶ್ಯ­ಕತೆ ಬೇಕಾ­ಗಿದೆ. ಇದ­ರಿಂದ ಅಪ­ರಾ­ಧಿ­ಗ­ಳನ್ನು ಪತ್ತೆ­ಮಾ­ಡ­ಬ­ಹುದು.
ಬೆಂಗ­ಳೂ­ರಿ­ನಲ್ಲಿ ಇಂಚು ಜಾಗಕ್ಕೂ ಚಿನ್ನ­ಕ್ಕಿಂತ ಜಾಸ್ತಿ ಬೆಲೆ. ಗೇಣುದ್ದ ಭೂಮಿ ಪುಕ್ಕಟ್ಟೆ ಸಿಗುತ್ತೆ ಅಂದ್ರೆ, ಮರ ಬೀಳಿ­ಸೋದು ಮಾತ್ರ­ವಲ್ಲ, ಮನು­ಷ್ಯರ ಪ್ರಾಣ ತೆಗೆ­ಯೋಕು ಸಿದ್ಧ­ವಿ­ರುವ ಮಂದಿ ಇದ್ದಾರೆ. ಇದೇ ರಿಯಲ್‌ ಎಸ್ಟೇಟ್‌ ಭೂಮ್‌! ಇವರು ಹೇಗಾ­ದರೂ ಕಿತ್ತಾ­ಡಿ­ಕೊಂಡು ಸಾಯಲಿ. ಆದರೆ ಅಮಾ­ಯಕ ಮರ­ಗಳ ಪ್ರಾಣ ತೆಗೆ­ಯೋದು ಯಾವ ನ್ಯಾಯ?

ಕಾಮೆಂಟ್‌ಗಳಿಲ್ಲ: