ಭಾನುವಾರ, ಅಕ್ಟೋಬರ್ 4, 2009

ಮಳೆ ಮಳೆ ಮಳೆ ಮಳೆ



ಮಳೆ ಮಳೆ ಮಳೆ ಮಳೆ


ಆಕಾಶ ಹಸಿರುಗಟ್ಟಿದರೆ ಬೆಂಗಳೂರಿಗರ ಹೃದಯದಲ್ಲಿ ದುಗುಡಗಟ್ಟುತ್ತದೆ. ಇದೇನು ಮುಂಬೈ ನಗರದಲ್ಲಿ ಸುರಿಯುವಂಥ ಮಹಾಮಳೆಯೇನಲ್ಲ. ದೂರದ ದಿಲ್ಲಿಯಲ್ಲಿ ದಿನಗಟ್ಟಲೆ ಬೀಳುವ ಕುಂಭದ್ರೋಣ ಮಳೆಯೂ ಅಲ್ಲ. ನಮ್ಮ ಪಶ್ಚಿಮ ಘಟ್ಟಗಳಲ್ಲಿ ವಾರಗಟ್ಟಲೆ ಬಿಡದೆ ಹೊಡೆಯುವ ವಿಪರೀತ ಮಳೆಯೂ ಅಲ್ಲ.....ಆದರೂ ಕೇವಲ ಒಂದು ಗಂಟೆ ಬೆಂಗಳೂರಿನಲ್ಲಿ ಮಳೆಯಾದರೆ ಇಡೀ ನಗರದ ಚಿತ್ರಣ ಬದಲಾಗುತ್ತದಲ್ಲ ಯಾಕೆ?
ಕಳೆದ ವಾರದ `ದಾಖಲೆ' ಮಳೆಗೆ ಇಡೀ ಬೆಂಗಳೂರು ಬೆಚ್ಚಿ ಬಿದ್ದಿದೆ. ಬುಧವಾರ ಮಧ್ಯರಾತ್ರಿ ಸುರಿದ ಮಳೆಗೆ ಅರ್ಧ ಬೆಂಗಳೂರು ಜಲಾವೃತಗೊಂಡಿದೆ. ತಗ್ಗು ಪ್ರದೇಶದಲ್ಲಿ ವಾಸ ಮಾಡುವ ನಿವಾಸಿಗಳು ರಾತ್ರಿಯಿಡೀ ನಿದ್ದೆಮಾಡದೆ ನೀರನ್ನು ಹೊರದಬ್ಬಿದ್ದಾರೆ. ಒತ್ತುವರಿಯಿಂದ ಕಿರಿದಾದ ನಮ್ಮ ರಾಜಾ ಕಾಲುವೆ ಮಳೆ ನೀರನ್ನು ಕಾದುಕೊಳ್ಳಲು ಸೋತು ಹೋಗಿದೆ. ಅತ್ತ ಬಾಪೂಜಿ ನಗರದ ಮೋರಿ ಉಕ್ಕಿ ಹರಿದು ರಸ್ತೆಗೆಲ್ಲಾ ನೀರು ಕೊಟ್ಟಿದೆ. ಹಲವು ಮನೆಗಳು ಕುಸಿದು ಬಿದ್ದಿವೆ. ಅಪಾರ್ಟಮೆಂಟ್‌ಗಳಿಗೆ ನೀರು ನುಗ್ಗಿದೆ. ವಾಹನಗಳು ನೀರಿನಲ್ಲಿ ಮುಳುಗಿವೆ. ಮರಗಳು ಧರೆಗುರುಳಿವೆ...... ಮಳೆಯಿಂದಾದ ಪರಿಣಾಮಗಳು ಹೀಗೆಯೇ ಮುಂದುವರಿಯುತ್ತವೆ.
ಮಳೆಯ ಪರಿಣಾಮವನ್ನು ಅನುಭವಿಸದ ಯಾವ ಬಡಾವಣೆಯೂ ಇಲ್ಲ. ಅಷ್ಟಕ್ಕೂ ಮಳೆಯಾದ ಪ್ರಮಾಣ 66.೦೮ ಮಿಮಿಯಷ್ಟು. ಈ ಪ್ರಮಾಣ ಬೆಂಗಳೂರಿನಲ್ಲಿ `ದಾಖಲೆಯ ಮಳೆ' ಎನಿಸಿಕೊಂಡರೂ ಉತ್ತರದ ನಗರಗಳಿಗೆ ಹಾಗೂ ಮಲೆನಾಡು ಪ್ರದೇಶಗಳಿಗೆ ಹೋಲಿಸಿದರೆ ಇದು ಬಹಳ ಕಡಿಮೆ. ಕೊಡಗಿನಲ್ಲಿ ವಾರಗಟ್ಟಲೆ ಮಳೆ ಸುರಿದರೂ ಅಲ್ಲಿಗೆ ಯಾವ ದುಷ್ಪರಿಣಾಮ ಆಗದು. ಆದರೆ ಬೆಂಗಳೂರಿಗೆ ಮಾತ್ರ ಮಳೆ ದುಸ್ವಪ್ನವಾಗಿದೆ. ಸರಿಯಾಗಿ ಐದಾರು ಗಂಟೆ ಸತತವಾಗಿ ಮಳೆಯಾದರೆ ಬೆಂಗಳೂರಿನ ಗತಿ ಏನಾಗಬಹುದು? ಅದು ಊಹೆ ನಿಲುಕದು!
ಅವತ್ತಿನ ಸಣ್ಣ ಮಳೆಗೆ ಆ ಹುಡುಗ ವಿಜಯ್‌ ಕೊಚ್ಚಿ ಹೋದ. ಇನ್ನು ಮಲೆನಾಡಿನ ಮಳೆ ಇಲ್ಲಿ ಸುರಿದರೆ ದೇವರೇ ಗತಿ. ಬೆಂಗಳೂರಿನಲ್ಲಿರುವ ವ್ಯವಸ್ಥೆಯನ್ನು ನೋಡಿದರೆ ನಾಳೆ ವಿಧಾನ ಸೌಧದ ಮುಂದೆಯೇ ನೀರುಬಂದರೂ ಆಶ್ಚರ್ಯ ಪಡಬೇಕಾಗಿಲ್ಲ.
ಕಳೆದ ಗುರುವಾರವಂತೂ ಬಿಬಿಎಂಪಿಯ ದೂರುಕೇಂದ್ರಗಳು ದೂರುಗಳಿಂದ ತುಂಬಿ ಹೋಗಿದ್ದವು. ಸ್ವತಃ ಸಚಿವರೇ(ಆರ್‌.ಅಶೋಕ್‌) ದೂರು ಕೇಂದ್ರಗಳಿಗೆ ಬಂದಿದ್ದರು. ಬಿಬಿಎಂಪಿ ಆಯುಕ್ತರು ಜಲಾವೃತಗೊಂಡ ನಗರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಆದರೆ ಆಗಿದ್ದೇನು?
ಮಳೆ ನಿರ್ವಹಣೆಗೆ ನಾವು ಸಜ್ಜಾಗಿಲ್ಲ: ಬೆಂಗಳೂರಿನಲ್ಲಿ ಯಾವುದೂ ಸರಿಯಾಗಿಲ್ಲ. ಅವೈಜ್ಞಾನಿಕ ವ್ಯವಸ್ಥೆಗಳು ಬೆಂಗಳೂರನ್ನು ಕಾಡುತ್ತಿವೆ. ಇಲ್ಲಿಯ ಒಳಚರಂಡಿ ವ್ಯವಸ್ಥೆ ಎರಡು ದಶಕಗಳ ಹಿಂದಿನ ಬೆಂಗಳೂರಿಗೆ ಸರಿಹೊಂದುತ್ತದೆ. ಇವತ್ತಿನ ೃಹತ್‌ ಬೆಂಗಳೂರಿಗೆ ಈ ಒಳಚರಂಡಿ ಆಟೋ ರಸ್ತೆಯಲ್ಲಿ ಲಾರಿ ನುಗ್ಗಿಸಿದಂತೆ! ೃಹತ್‌ ಕಟ್ಟಡಗಳನ್ನು ನಿರ್ಮಾಣ ಮಾಡುವಾಗ ಸಂಬಂಧಪಟ್ಟವರು ಮಳೆ ಬಗ್ಗೆ ಯೋಚಿಸುವುದೇ ಇಲ್ಲ. ಮೊನ್ನೆಯ ಮಳೆಯಲ್ಲಿ ಗೋಡನ್‌ಗಳು, ಅಪಾರ್ಟ್‌ಮೆಂಟ್‌ಗಳಿಗೆ ನೀರು ನುಗ್ಗಿರುವುದನ್ನು ನೋಡಿದರೆ ಮಳೆ ನಿರ್ವಹಣೆಯಲ್ಲಿನ ನಮ್ಮ ಅಜ್ಞಾನ ಮನವರಿಕೆಯಾಗುತ್ತದೆ.
ಭೂಗಳ್ಳರ ಹಾವಳಿ: ಒಂದಿಂಚು ಜಾಗ ಸಿಕ್ಕಿದರೆ ಸಾಕು, ಬೆಳಕು ಹರಿಯುವಷ್ಟರಲ್ಲಿ ೃಹತ್‌ ಕಟ್ಟಡ ಬಂದು ನಿಂತಿರುತ್ತದೆ. ಚರಂಡಿ ಜಾಗ ಸಿಕ್ಕರೂ ಸರಿ, ಸ್ಮಶಾನ ಜಾಗವಾದರೂ ಸರಿ! ಭೂಗಳ್ಳರು ಅಂದರೆ ಯಾರೋ ಕಳ್ಳರಲ್ಲ. ಸಭ್ಯಸ್ಥರು ಎನಿಸಿಕೊಂಡವರೇ ಜಾಗವನ್ನು ಸರ್ಕಾರಿ ಜಾಗವನ್ನು ಇಂಚಿಂಚಿನಂತೆ ವಶಮಾಡಿಕೊಂಡು ಮನೆ ಕಟ್ಟಿಕೊಂಡಿದ್ದಾರೆ. ಭೂ ಕದ್ದಮೇಲೆ ಮಳೆ ಬಗ್ಗೆ ಯೋಚಿಸುವುದೆಲ್ಲಿಂದ ಬಂತು!
ಸ್ಲಂ ಮಾತ್ರವಲ್ಲ: ಜಯನಗರದ ಮನೆಗಳೇ ಮಳೆಗೆ ತತ್ತರಿಸಿವೆ ಅಂದಮೇಲೆ ಎಲ್ಲೋ ತಗ್ಗಾದ ಜಾಗದಲ್ಲಿರುವ ಸ್ಲಂಗಳ ಪಾಡೇನು? ಮೋರಿಗಳ ಪಕ್ಕದಲ್ಲಿ, ರಸ್ತೆಗಳ ಇಕ್ಕೆಲಗಳಲ್ಲಿ ವಾಸಿಸುವ ಜನರಿಗೆ ಮಳೆಯಿಂದಾಗುವ ತೊಂದರೆಯನ್ನು ಕೇಳುವವರು ಯಾರು? ಇನ್ನು ಅದೆಷ್ಟು ಮಕ್ಕಳು ಕೊಚ್ಚಿ ಹೋಗುವುದನ್ನು ನೋಡಬೇಕೋ ಏನೋ!
ವೈಪರಿತ್ಯ ಹವಾಮಾನ: ಇದು ಮುಂಗಾರು ಮಳೆ ಮುಗಿಯುವ ಕಾಲ. ಅಕ್ಟೋಬರ್‌ 2ನೇ ದಿನದಿಂದ ಹಿಂಗಾರು ಮಳೆ ಆರಂಭವಾಗಲಿದೆ. ಕಡೆಯ ಹಂತದಲ್ಲಿ ಮುಂಗಾರು ಮಳೆ ತನ್ನ ಅಬ್ಬರವನ್ನು ತೋರುತ್ತಿದೆ. ಇದು ಅಕಾಲಿಕ ಮಳೆಯೂ ಹೌದು. ರೈತರಿಗೆ ಈ ಮಳೆಯಿಂದ ಅನುಕೂಲವೇನೂ ಇಲ್ಲ.
ಹಿಂದೂ ಮಹಾಸಾಗರ ಹಾಗೂ ಬಂಗಾಳ ಕೊಲ್ಲಿಗಳಲ್ಲಿ ಬೀಸುವ ಮಾರುತಗಳು ಅಲ್ಲೇ ಗಿರಕಿ ಹೊಡೆಯುತ್ತಿರವುದೇ ಈ ಕುಂಭದ್ರೋಣ ಮಳೆಗೆ ಕಾರಣ ಎಂದು ಹಲವಾನ ವರದಿ ಹೇಳಿದೆ. ಇದು ಹೀಗೆಯೇ ಮುಂದುವರಿದರೆ ಮಳೆಯ ಪ್ರಮಾಣ ಇನ್ನೂ ಹೆಚ್ಚುವ ಸಂಭವವಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುವುದರಲ್ಲಿ ನಮ್ಮ ಪಾಲಿಕೆ ಅಧಿಕಾರಿಗಳು ಮಹಾ ಜಾಣರು. ಮುಂದಿನ ದಿನಗಳಲ್ಲಿ ಬೆಂಗಳೂರನ್ನು ಮಳೆಯಿಂದ ರಕ್ಷಿಸಲು ವೈಜ್ಞಾನಿಕವಾದ ಕಾರಣ ಕಂಡುಕೊಳ್ಳಬೇಕು. ಜನರೂ ಕೂಡ ಇದನ್ನು ಅರಿತುಕೊಳ್ಳಬೇಕು. ಎಲ್ಲದಕ್ಕೂ ಬಿಬಿಎಂಪಿ ಕಡೆಯೇ ಕೈ ತೋರಿದರೂ ಕಷ್ಟವೇ. ಒಂದು ಸಣ್ಣ ಮೋರಿ ಹೊಡೆದರೂ ಅದನ್ನು ರಿಪೇರಿ ಮಾಡಲು ವಾರಗಳೇ ಬೇಕು. ಇನ್ನು ಮನೆ ಮುಳುಗುತ್ತಿದೆ ಬನ್ನಿ ಎಂದರೆ ಇವರು ಬರುತ್ತಾರೆಯೇ!

ಪರಿ­ಸರ ನಿವೇ­ಶನ ಅಧ್ಯ­ಯನ


ಭೂಮಿ ಕೊಳ್ಳುವ ಮುನ್ನ
ಪರಿ­ಸರ ನಿವೇ­ಶನ ಅಧ್ಯ­ಯನ


ಬೆಂಗ­ಳೂ­ರಿ­ನಲ್ಲಿ ಒಂದು ನಿವೇ­ಶನ ಕೊಳ್ಳಲು ಅವ­ಶ್ಯ­ಕ­ವಾಗಿ ಪರಿ­ಶೀ­ಲಿ­ಸ­ಬೇ­ಕಾದ ಅಂಶ­ಗಳು ಯಾವುವು?
ಈ ಪ್ರಶ್ನೆಗೆ ಬರುವ ಉತ್ತ­ರ­ಗಳು ಅಪಾರ. ನಿವೇ­ಶನ ಇರುವ ಏರಿಯಾ, ಅದರ ದಾಖ­ಲಾತಿ ಕಾಗದ ಪತ್ರ­ಗಳು, ಪಾವತಿ ಮಾಡ­ಬೇ­ಕಾದ ಕಂದಾಯ ವಿವರ, ಅಳತೆ, ದರ...ಇ­ವಿಷ್ಟು ಅಗ­ತ್ಯ­ವಾಗಿ ಪರಿ­ಶೀ­ಲಿ­ಸಲೇ ಬೇಕಾದ ಅಂಶ­ಗಳು.
ಇವು­ಗಳ ಜೊತೆಗೆ ಇನ್ನು­ಮುಂದೆ ಇನ್ನೊಂದು ಅಂಶ­ವನ್ನು ಪರಿ­ಶೀ­ಲಿ­ಸ­ಬೇ­ಕಾ­ಗು­ತ್ತದೆ. ಅದು `ನಿ­ವೇ­ಶನ ಪರಿ­ಸರ ಅಧ್ಯ­ಯನ'(ಎ­ನ್ವಿ­ರಾ­ನ್‌­ಮೆಂಟ್‌ ಸೈಟ್‌ ಅಸೆ­ಸ್‌­ಮೆಂಟ್‌). ಇಲ್ಲಿಯ ತನಕ ಪರಿ­ಸರ ಪರಿ­ಣಾಮ ಅಧ್ಯ­ಯನ(ಎ­ನ್ವಿ­ರಾ­ನ್‌­ಮೆಂಟ್‌ ಇಂಪ್ಯಾಕ್ಟ್‌ ಅಸೆ­ಸ್‌­ಮೆಂಟ್‌(ಇ­ಐಎ) ಮಾತ್ರ ಇತ್ತು. ಇದೇ­ನಿದು ಪರಿ­ಸರ ನಿವೇ­ಶನ ಅಧ್ಯ­ಯನ ಎಂದು ಆಶ್ಚ­ರ್ಯ­ವಾ­ಗ­ಬ­ಹುದು. ಆದರೆ ಪರಿ­ಸರ ಪರಿ­ಣಾಮ ಅಧ್ಯ­ಯ­ನಕ್ಕೂ ಪರಿ­ಸರ ನಿವೇ­ಶನ ಅಧ್ಯ­ಯ­ನಕ್ಕೂ ಬಹಳ ವ್ಯತ್ಯಾ­ಸ­ವಿದೆ.


ಏನಿದು ನಿವೇ­ಶನ ಅಧ್ಯ­ಯನ: ಪರಿ­ಸರ ನಿವೇ­ಶನ ಅಧ್ಯ­ಯ­ನ­ವನ್ನು ಒಂದೇ ಮಾತಿ­ನಲ್ಲಿ ಹೇಳು­ವು­ದಾ­ದರೆ `ನಿ­ವೇ­ಶ­ನದ ವಾಸ ಯೋಗ್ಯ­ತೆಯ ಪರಿ­ಶೀ­ಲನೆ' ಎನ್ನ­ಬ­ಹುದು. ನಿವೇ­ಶ­ನದ ವಾಸ ಯೋಗ್ಯ­ತೆ­ಯನ್ನು ಅಧ್ಯ­ಯನ ಮಾಡು­ವುದು ಕಡ್ಡಾ­ಯ­ವಾ­ದರೆ ಅದ­ರಿಂದ ಬಹಳ ಉಪ­ಯೋ­ಗ­ವಿದೆ. ಅದ­ರಲ್ಲೂ ಕೈಗಾ­ರಿಕಾ ನಿವೇ­ಶ­ನ­ಗ­ಳಲ್ಲಿ ಈ ಅಧ್ಯ­ಯನ ಕೈಗೊ­ಳ್ಳು­ವು­ದ­ರಿಂದ ಒಳಿತು ಜಾಸ್ತಿ.
ರಾಜ್ಯ­ದಲ್ಲಿ ಹಲವು ಕೈಗಾ­ರಿ­ಕೆ­ಗಳು ಲಾಕೌಟ್‌ ಆಗಿವೆ. ಇದಕ್ಕೆ ಕಾರ­ಣ­ವೇನು ಗೊತ್ತೆ? ಮುಖ್ಯ­ವಾಗಿ ನಿವೇ­ಶ­ನ­ದಲ್ಲಿ ಅಂತ­ರ್ಜಲ ಇಲ್ಲ­ದಿ­ರು­ವುದು.
ಕೇವಲ ಇದೊಂದು ಕಾರ­ಣ­ದಿಂದ ಇಡೀ ಕೈಗಾ­ರಿ­ಕೆ­ಯನ್ನೇ ಮುಚ್ಚಿದ ಬಹ­ಳಷ್ಟು ಉದಾ­ಹ­ರ­ಣೆ­ಗ­ಳಿವೆ. ಆ ಕೈಗಾ­ರಿಕಾ ಪ್ರದೇ­ಶ­ವನ್ನು ಕೊಳ್ಳು­ವು­ದಕ್ಕೆ ಮುಂಚೆ ನಿವೇ­ಶನ ಪರಿ­ಸರ ಅಧ್ಯ­ಯನ ಕೈಗೊಂ­ಡಿ­ದ್ದರೆ ಈ ರೀತಿಯ ಲಾಕೌಟ್‌ ತಪ್ಪಿ­ಸ­ಬ­ಹು­ದಾ­ಗಿತ್ತು.
ಕೆಲವು ನಿವೇ­ಶ­ನ­ಗ­ಳನ್ನು ಮುಂಚೆ ತ್ಯಾಜ್ಯ ವಸ್ತು ನಿರ್ವ­ಹ­ಣೆ­ಗಾಗಿ ಬಳ­ಸ­ಲಾ­ಗು­ತ್ತಿ­ರು­ತ್ತದೆ. ಅಂತಹ ನಿವೇ­ಶ­ನ­ದಲ್ಲಿ ಮನೆ ಅಥವಾ ಕೈಗಾ­ರಿಕೆ ನಿರ್ಮಾಣ ಮಾಡಿ­ದರೆ ರೋಗ ಹರ­ಡುವ ಸಾಧ್ಯತೆ ಇರು­ತ್ತದೆ. ಅಮೆ­ರಿ­ಕಾದ ಚಿಕಾ­ಗೋ­ದಲ್ಲಿ ವಿಷಾ­ನಿಲ ನಿರ್ವ­ಹಣೆ ಮಾಡಿದ ನಿವೇ­ಶ­ನದ ಮೇಲೆ ಶಾಲೆ ನಿರ್ಮಾಣ ಮಾಡಿ ಹಲವು ಶಾಲಾ ಮಕ್ಕಳು ಮೃತ­ಪ­ಟ್ಟಿ­ದ್ದನ್ನು ಇಲ್ಲಿ ಉಲೇಖ ಮಾಡ­ಬ­ಹುದು. ಈ ಪ್ರಕ­ರ­ಣದ ನಂತರ ಅಮೆ­ರಿ­ಕಾ­ದಲ್ಲಿ ನಿವೇ­ಶನ ಪರಿ­ಸರ ಅಧ್ಯ­ಯನ ಕಡ್ಡಾ­ಯ­ವಾ­ಯಿತು.
ಅಲ್ಲದೆ ಕೆಲವು ನಿವೇ­ಶ­ನ­ಗ­ಳಲ್ಲಿ ೃಹತ್‌ ಬೆಂಕಿ ಅಪ­ಘಾತ ಸಂಭ­ವಿ­ಸಿ­ದ್ದರೆ ಆ ನಿವೇ­ಶನ ಸುತ್ತ ಅಂತ­ರ್ಜಲ ಬತ್ತಿ ಹೋಗುವ ಸಾಧ್ಯತೆ ಇರು­ತ್ತದೆ. ಅನಿಲ ಸೋರಿಕೆ ಹಾಗೂ ಸ್ಫೋಟ ಉಂಟಾ­ಗಿ­ರುವ ನಿವೇ­ಶ­ನ­ಗ­ಳಲ್ಲೂ ಅಪಾಯ ಇರು­ತ್ತದೆ. ಆದ್ದ­ರಿಂದ ನಿವೇ­ಶನ ಕೊಳ್ಳು­ವು­ದಕ್ಕೆ ಮುಂಚೆ ಅದರ ವಾಸ ಯೋಗ್ಯ­ತೆ­ಯನ್ನು ಪರಿ­ಶೀ­ಲಿ­ಸಿ­ದರೆ ಅನು­ಕೂಲ.
ಹಲವು ಪಾಶ್ಚಾತ್ಯ ದೇಶ­ಗ­ಳಲ್ಲಿ ಪರಿ­ಸರ ನಿವೇ­ಶನ ಅಧ್ಯ­ಯನ ಕಡ್ಡಾಯ. ಭಾರ­ತ­ದಲ್ಲಿ ಕಡ್ಡಾ­ಯ­ವ­ಲ್ಲ­ದಿ­ದ್ದರೂ ಈ ಪರಿ­ಕ­ಲ್ಪ­ನೆ­ಯನ್ನು ಇತ್ತೀ­ಚೆಗೆ ಬಹಳ ಗಂಭೀ­ರ­ವಾಗಿ ಪರಿ­ಗ­ಣಿ­ಸ­ಲಾ­ಗು­ತ್ತಿದೆ. ಭಾರ­ತ­ದಲ್ಲಿ ಪ್ರಥ­ಮ­ವಾಗಿ ಪರಿ­ಸರ ನಿವೇ­ಶನ ಅಧ್ಯ­ಯ­ನ­ವನ್ನು ಬೆಂಗ­ಳೂ­ರಿ­ನಲ್ಲಿ ಅಳ­ವ­ಡಿ­ಸಿ­ಕೊ­ಳ್ಳ­ಲಾ­ಗು­ತ್ತಿದೆ. ಅದ­ಕ್ಕಾಗಿ ಪರಿ­ಸರ ತಜ್ಞರು ನಿವೇ­ಶನ ಪರಿ­ಸರ ಅಧ್ಯ­ಯನ ಕಡ್ಡಾಯ ಮಾಡ­ಬೇಕು ಎಂದು ಸರ್ಕಾ­ರ­ವನ್ನು ಒತ್ತಾ­ಯಿ­ಸಿ­ದ್ದಾರೆ.
ಅಧ್ಯ­ಯನ ಮಾಡು­ವ­ವರು ಯಾರು?: ಪರಿ­ಸರ ನಿವೇ­ಶನ ಅಧ್ಯ­ಯನ ಇಲ್ಲಿ ಕಡ್ಡಾ­ಯ­ವ­ಲ್ಲದ ಕಾರಣ ಪರಿ­ಶೀ­ಲ­ನೆ­ಗಾಗಿ ಸರ್ಕಾ­ರ­ದಿಂದ ಯಾವುದೇ ವ್ಯವಸ್ಥೆ ಇಲ್ಲ. ಆದರೆ ಬೆಂಗ­ಳೂ­ರಿ­ನಲ್ಲಿ ಖಾಸಗೀ ಕಂಪ­ನಿ­ಯೊಂದು ನಿವೇ­ಶನ ಪರಿ­ಸರ ಅಧ್ಯ­ಯನ ಸೇವೆ ನೀಡು­ತ್ತದೆ.
ಮಡಿ­ವಾಳ ಬಡಾ­ವ­ಣೆ­ಯ­ಲ್ಲಿ­ರುವ `ಎ­ನ್‌­ಜೆನ್‌' ಕಂಪ­ನಿಯು ಪರಿ­ಸರ ನಿವೇ­ಶನ ಅಧ್ಯ­ಯನ ಸೇವೆ ನೀಡು­ತ್ತಿದೆ. ಪೀಣ್ಯ ಕೈಗಾ­ರಿಕಾ ಪ್ರದೇ­ಶ­ದ­ಲ್ಲಿ­ರುವ ಹಲವು ಕೈಗಾ­ರಿಕಾ ನಿವೇ­ಶ­ನ­ಗ­ಳಿಗೆ ಈ ಕಂಪನಿ ಪರಿ­ಸರ ನಿವೇ­ಶನ ಅಧ್ಯ­ಯನ ಮಾಡಿ­ಕೊ­ಟ್ಟಿದೆ.
ಕೇವಲ ಲಾಕೌಟ್‌ ಆದ ಕೈಗಾ­ರಿಕಾ ಪ್ರದೇಶ ಮಾತ್ರ­ವ­ಲ್ಲದೆ ವಾಸದ ಮನೆ­ಗಳ ನಿವೇ­ಶನ, ಅಪಾ­ರ್ಟ್‌­ಮೆಂಟ್‌ ನಿವೇ­ಶ­ನ­ಗ­ಳಲ್ಲೂ ಕೂಡ ಎನ್‌­ಜೆನ್‌ ಅಧ್ಯ­ಯನ ಕೈಗೊ­ಳ್ಳು­ತ್ತದೆ. ಆ ಮೂಲದ ನಿವೇ­ಶ­ನದ ಉಪ­ಯೋ­ಗ­ವನ್ನು ನಿರ್ಧ­ರಿಸಿ ದರ ನಿರ್ಧಾ­ರಕ್ಕೆ ಸಹಾಯ ಮಾಡು­ತ್ತದೆ. ಇಲ್ಲಿ­ಯ­ವ­ರೆಗೆ ಹಲವು ಕೈಗಾ­ರಿಕೆ ನಿವೇ­ಶನ ಅಧ್ಯ­ಯನ ಮಾಡಿ ಮಾರಾಟ ದರ ನಿರ್ಧಾ­ರಕ್ಕೆ ಅನುವು ಮಾಡಿ­ಕೊ­ಟ್ಟಿದೆ.
ಕೈಗಾ­ರಿ­ಕೋ­ದ್ಯಮಿ ಎಸ್‌.ವಿ. ಗೌತಮ್‌ ರಾಜ್‌ ಪೀಣ್ಯ­ದಲ್ಲಿ ಸ್ವತಃ ಕೈಗಾ­ರಿ­ಕೆ­ಯೊಂ­ದನ್ನು ಸ್ಥಾಪಿ­ಸಿ­ದ್ದಾರೆ. ಇವರು ಪರಿ­ಸರ ನಿವೇ­ಶನ ಅಧ್ಯ­ಯ­ನ­ವನ್ನು ಬಲ­ವಾಗಿ ನಂಬು­ತ್ತಾರೆ.
`ರಿ­ಯಲ್‌ ಎಸ್ಟೇಟ್‌ ವೃತ್ತಿ­ಮಾ­ಡುವ ಮಧ್ಯ­ವ­ರ್ತಿ­ಗ­ಳಿ­ಲ್ಲದೆ ಬೆಂಗ­ಳೂ­ರಿ­ನಲ್ಲಿ ಇವತ್ತು ಒಂದಿಂಚೂ ಭೂಮಿ ಕೊಳ್ಳಲು ಸಾಧ್ಯ­ವಿಲ್ಲ. ಯಾವುದೋ ಕಾಗದ ಪತ್ರ ತೋರಿಸಿ ಯಾಮಾ­ರಿ­ಸು­ವರೇ ಜಾಸ್ತಿ. ಇಂತಹ ಸ್ಥಿತಿ­ಯಲ್ಲಿ ಕೈಗಾ­ರಿಕಾ ನಿವೇ­ಶ­ನ­ವನ್ನು ಅಧ್ಯ­ಯನ ಮಾಡಿ­ಸು­ವು­ದ­ರಿಂದ ಆ ಪ್ರದೇಶ ಹಿಂದೆ ಏನಾ­ಗಿತ್ತು. ಯಾವು­ದಕ್ಕೆ ಬಳ­ಸ­ಲಾ­ಗು­ತಿತ್ತು ಎಂಬು­ದನ್ನು ಸುಲ­ಭ­ವಾಗಿ ತಿಳಿ­ದು­ಕೊ­ಳ್ಳ­ಬ­ಹುದು' ಎನ್ನು­ತ್ತಾರೆ ಗೌತ­ಮ್‌­ರಾಜ್‌.
ನಿವೇ­ಶ­ನದ ಉಪ­ಯೋಗ ಸಾಮರ್ಥ್ಯ: ಈ ಅಧ್ಯ­ಯನ ಕೈಗೊ­ಳ್ಳು­ವು­ದ­ರಿಂದ ಬಹಳ ಉಪ­ಯೋ­ಗ­ವಿದೆ. ಭೂಮಿಯ ಉಪ­ಯು­ಕ್ತತೆ ಮತ್ತು ಅನು­ಪ­ಯು­ಕ್ತ­ತೆ­ಯನ್ನು ಅಳೆ­ಯಲು ಈ ಅಧ್ಯ­ಯನ ಸಹಾ­ಯ­ಕ­ವಾ­ಗು­ತ್ತದೆ.
ಬೆಂಗ­ಳೂ­ರಿ­ನಲ್ಲಿ ತ್ಯಾಜ್ಯ ವ್ಯರ್ಥ ನಿರ್ವ­ಹ­ಣೆಗೆ ನಿವೇ­ಶನ ಹುಡು­ಕಾಟ ಯಾವಾ­ಗಲು ನಡೆ­ಯು­ತ್ತಲೇ ಇರು­ತ್ತದೆ. ನಗ­ರದ ಹೊರ ವಲ­ಯ­ದಲ್ಲಿ ಮುಖ್ಯ­ರ­ಸ್ತೆ­ಯಲ್ಲೇ ತಾಜ್ಯ ಸುರಿ­ದಿ­ರು­ವು­ದನ್ನು ಗಮ­ನಿ­ಸ­ಬ­ಹುದು. ಹೆಚ್ಚು ಉಪ­ಯು­ಕ್ತ­ವಾದ ನಿವೇ­ಶ­ನ­ದಲ್ಲಿ ತ್ಯಾಜ್ಯ ಸುರಿ­ಯುವ ಬದಲು ನಿವೇ­ಶ­ನದ ಪರಿ­ಸರ ಅಧ್ಯ­ಯನ ಮಾಡಿ ಹೆಚ್ಚು ಉಪ­ಯುಕ್ತ ಭೂಮಿ­ಯಲ್ಲಿ ತ್ಯಾಜ್ಯ ನಿರ್ವ­ಹಣೆ ಮಾಡು­ವು­ದನ್ನು ತಡೆ­ಯ­ಬ­ಹುದು.
ಈ ಅಧ್ಯ­ಯ­ನದ ಇನ್ನೊಂದು ಉಪ­ಯೋ­ಗ­ವೆಂ­ದರೆ ಪರಿ­ಸರ ರಕ್ಷಣೆ. ಪರಿ­ಸರ ಹಿತ­ವನ್ನೇ ಮುಖ್ಯ­ವಾ­ಗಿ­ಟ್ಟು­ಕೊಂಡೇ ರೂಪಿ­ಸ­ಲಾ­ಗಿ­ರುವ ಪರಿ­ಕ­ಲ್ಪ­ನೆ­ಯನ್ನು ಬೆಂಗ­ಳೂ­ರಿ­ನಲ್ಲಿ(ಕ­ಡೇ­ಪಕ್ಷ) ಕಡ್ಡಾ­ಯ­ಗೊ­ಳಿ­ಸಿ­ದರೆ ರಿಯಲ್‌ ಎಸ್ಟೇಟ್‌ ಹೆಸ­ರಿ­ನಲ್ಲಿ ನಡೆ­ಯು­ತ್ತಿ­ರುವ ಭೂಮಿಯ ಮೇಲಿನ ಹಲ್ಲೆ­ಯನ್ನು ತಡೆ­ಯ­ಬ­ಹುದು.