ಶುಕ್ರವಾರ, ಅಕ್ಟೋಬರ್ 3, 2008



ಬೆಂಗ­ಳೂ­ರಿ­ನಲ್ಲಿ ರವಿ ಮರೆ­ಯಾ­ದಾಗ….!



ಮೊನ್ನೆರಾಜ­ರಾ­ಜೇ­ಶ್ವರಿ ನಗ­ರ­ದಲ್ಲಿ ಸರಿ­ಸು­ಮಾರು 5 ಗಂಟೆ ಕಾಲ ಕರೆಂಟ್‌ ಇರ­ಲಿಲ್ಲ. ಬೆಳಿಗ್ಗೆ 7 ಗಂಟೆಗೆ ಕರೆಂಟ್‌ ಮಾಯ­ವಾ­ಯಿತು. ಆಗ­ತಾನೆ ಹಾಸಿ­ಗೆ­ಯಿಂದ ಮೇಲೆದ್ದ ಮಂದಿ ಬೆಸ್ಕಾಂ ಅಧಿ­ಕಾ­ರಿ­ಗ­ಳಿಗೆ ಹಿಡಿ­ಶಾಪ ಹಾಕಿ­ದರು.
ಬೆಸ್ಕಾಂ ಕಚೇ­ರಿ­ಯಲ್ಲಿ ಟೆಲಿ­ಫೋ­ನ್‌­ಗಳು ರಿಂಗ­ಣಿ­ಸಿ­ದವು. ಜನರ ಮೇಲೆ ಬೆಸ್ಕಾಂ ಅಧಿ­ಕಾ­ರಿ­ಗಳ ಅವಾಜ್‌…..
`ಏನ್ರೀ! ಪೇಪರ್‌ ನೋಡ­ಲ್ವೆನ್ರೀ. ಯಾವ ಯಾವ ಏರಿ­ಯಾ­ಗ­ಳಲ್ಲಿ ಲೋಡ್‌ ಶೆಡ್ಡಿಂಗ್‌ ಇದೆ ಅಂತ ಎಲ್ಲಾ ರಿಪೋರ್ಟ್‌ ಬಂದಿದೆ. ಮಾತೆ­ತ್ತಿ­ದರೆ ಇಲ್ಲಿಗೆ ಫೋನ್‌ ಮಾಡ್ತೀರಾ. ಕರೆಂಟ್‌ ಏನು ನಮ್ಮ­ಪ್ಪನ ಮನೆ ಆಸ್ತೀನಾ.’ ಫೋನ್‌ ಕುಕ್ಕಿದ ಆತ.
ಇದೊಂದು ಥರಾ ಫುಡ್‌­ಚೈನ್‌ ಇದ್ದ­ಹಾಗೆ. ಒಂದ­ರಿಂದ ಇನ್ನೊಂ­ದಕ್ಕೆ ನಂಟು. ಕರೆಂಟ್‌ ಇಲ್ಲ ಅಂದ್ರೆ ನೀರು ಬರಲ್ಲ. ನೀರಿಲ್ಲ ಅಂದ್ರೆ ಸ್ನಾನ ಇಲ್ಲ. ಸ್ನಾನ ಇಲ್ಲದೆ ಆಫೀ­ಸ್‌ಗೆ ಹೋಗೋ ಹಾಗಿಲ್ಲ. ಕೆಲ­ವರು ಸೆಂಟ್‌ ಹೊಡ­ಕೊಂಡು ಹೋಗ್ತಾರೆ ಬಿಡಿ! ಬೆಳಗೆ ಎದ್ದು ಬಟ್ಟೆ ಎಲ್ಲಾ ಒಗಿ­ಯೋಣ ಎಂದು ಮಲ­ಗಿದ ನಾರಿ­ಮ­ಣಿ­ಯ­ರಿಗೆ ದಿನ­ಪೂರ್ತಿ ಮೂಡ್‌ ಆಫ್‌. ಛಾರ್ಜ್‌ ಮಾಡ­ದ­ವರ ಸೆಲ್‌­ಫೋನ್‌ ಸ್ವಿಚ್ಡ್‌ ಆಫ್‌. ಹಾಲು ಹಣ್ಣು ತಣ್ಣಗೆ ಮಾಡುವ ರೆಫ್ರೀ­ಜ­ರೇ­ಟರ್‌ ಬೆಚ್ಚಗೆ ಕೂತಿದೆ.
ಅಂಗೂ ಹಿಂಗೂ ನ್ಸೂಸ್‌ ಪೇಪರ್‌ ತಿರುವಿ ಹಾಕಿ­ದ­ವರು ಸಮ­ಸ್ಯೆ­ಯಿಂದ ಸೇಫ್‌. ಯಾಕೆಂ­ದರೆ ನಾಳೆ ಕರೆಂಟ್‌ ಇರಲ್ಲ ಅಂತ, ಇರುವ ನೀರನ್ನು ಹಿತ ಮಿತ­ವಾಗಿ ಬಳ­ಸಿ­ಕೊ­ಳ್ಳ­ಬ­ಹುದು. ರೆಫ್ರಿ­ಜ­ರೇ­ಟ­ರ್‌ಗೆ ರಾತ್ರಿ­ಇಡೀ ಚಾರ್ಜ್‌ ಮಾಡಿ­ಕೊ­ಳ್ಳ­ಬ­ಹುದು. ಈ ರೀತಿಯ ಬೇರೆ ಕ್ರಮ ಕೈಗೊ­ಳ್ಳ­ಬ­ಹುದು. ಒಟ್ಟಾರೆ ಕರೆಂಟ್‌ ಇಲ್ಲದೆ ಹೇಗೆ ಜೀವನ ಮಾಡ­ಬ­ಹುದು ಅಂತ ಪ್ಲಾನ್‌ ಮಾಡ­ಬ­ಹುದು.
ಬೆಸ್ಕಾಂ ಅಧಿ­ಕಾ­ರಿ­ಗಳು ಏನಂ­ತಾರೆ?: ಬೆಂಗ­ಳೂರು ವಿದ್ಯುತ್‌ ಸೇವೆ ನಿಗಮ(ಬೆಸ್ಕಾಂ) ಉತ್ತರ ವಿಭಾ­ಗದ ಎಕ್ಸಿ­ಕ್ವೀ­ಟೀವ್‌ ಎಂಜಿ­ನಿ­ಯರ್‌ ಒಬ್ಬರು ಹೇಳೋ ಪ್ರಕಾರ ಬೆಂಗ­ಳೂ­ರಲ್ಲಿ ಲೋಡ್‌ ಶೆಡ್ಡಿಂಗೇ ಇಲ್ಲ­ವಂತೆ. ಆದ್ರೆ ದಿನಾ ಪೂರ್ತಿ ಕರೆಂಟ್‌ ತಗಿ­ತಾ­ರಂತೆ! ಕಾರ­ಣ­ವಿಷ್ಟೆ: ಏನಾ­ದರೂ ಟೆಕ್ನಿ­ಕಲ್‌ ಕಾರಣ ಇದ್ದಾಗ, ಅಂದರೆ ಕಂಬ ಬಿದ್ದು ಹೋದಾಗ, ಲೈನ್‌ ತೊಂದರೆ ಇದ್ದಾಗ, ಶಾರ್ಟ್‌ ಶರ್ಕಿಟ್‌ ಆದಾಗ, ಲೈನ್‌ ವಿಸ್ತ­ರಣೆ ಮಾಡು­ವಾಗ ಲೈನ್‌ ತಗಿ­ಯಲೇ ಬೇಕು. ಇದನ್ನು ಇಲಾಖೆ ಲೋಡ್‌ ಶೆಡ್ಡಿಂಗ್‌ ಅನ್ನೊ­ದಿಲ್ಲ. ತಾಂತ್ರಿಕ ಕಾರ­ಣದ ಫವರ್‌ ಕಟ್‌ ಅಂತಾರೆ. ಇದಕ್ಕೆ ಸಾರ್ವ­ಜ­ನಿ­ಕರ ಸಹ­ಕಾರ ಬೇಕು ಅಂತಾರೆ ಅವರು.
ತೊಂದರೆ ಮುಕ್ತ ಅಪಾರ್ಟ್‌ ಮೆಂಟ್‌: ವಿದ್ಯುತ್‌ ಇಲಾಖೆ ಅಪಾ­ರ್ಟ್‌­ಮೆಂ­ಟ್‌­ಗ­ಳನ್ನು ಬಹು­ಮ­ಹಡಿ ಕಟ್ಟ­ಡ­ಗಳು ಎಂದು ಕರೆ­ಯು­ತ್ತದೆ. ಸಾಮಾನ್ಯ ಕಟ್ಟ­ಡ­ಗ­ಳಿಗೂ ಇವಕ್ಕೂ ಬಹಳ ವ್ಯತ್ಯಾ­ಸ­ವಿದೆ. ಇದ­ರಲ್ಲಿ 500 ಸ್ಕ್ವೇರ್‌ ಮೀಟ­ರ್‌­ಗಿಂತ ಹೆಚ್ಚು ವಿಸ್ತೀರ್ಣ, 25 ಕಿಲೋ ವ್ಯಾಟ್ಸ್‌­ತಿಂತ ಹೆಚ್ಚು ವಿದ್ಯುತ್‌ ಬಳ­ಸುವ ಕಟ್ಟ­ಡ­ಗಳು ಸೇರು­ತ್ತವೆ. ಅದು ಅಪಾ­ರ್ಟ್‌­ಮೆಂಟ್‌ ಆಗಿ­ರ­ಬ­ಹುದು ಅಥವಾ ಯಾವುದೇ ಕಟ್ಟಡ ಆಗಿ­ರ­ಬ­ಹುದು. ಇವು­ಗ­ಳಿಗೆ ನೀಡುವ ವಿದ್ಯುತ್‌ ಸಂಪರ್ಕ ಸಾಮಾನ್ಯ ಮನೆಗೆ ನೀಡುವ ಸಂಪ­ರ್ಕ­ಕ್ಕಿಂತ ಭಿನ್ನ. ಮುಖ್ಯ­ವಾಗಿ ಬಹು­ಮ­ಹಡಿ ಕಟ್ಟ­ಡ­ಗ­ಳಿಗೆ ಕಡ್ಡಾ­ಯ­ವಾಗಿ ಸ್ವತಃ ಟ್ರಾನ್ಸ್‌­ಫಾ­ರ್ಮರ್‌ ಹೊಂದಿ­ರ­ಬೇಕು. ಹೀಗಾಗಿ ಸಾಮಾನ್ಯ ಸಂದ­ರ್ಭ­ಗ­ಳಲ್ಲಿ ಅಲ್ಲಿ ಟೆಕ್ನಿ­ಕಲ್‌ ಕಾರಣ ಉದ್ಬವ ಆಗ­ಲಾ­ರದು. ಅಪಾ­ರ್ಟ್‌­ಮೆಂಟ್‌ ನಿವಾ­ಸಿ­ಗಳು ಫವರ್‌ ಕಟ್‌ ಸಮ­ಸ್ಯೆ­ಯಿಂದ ಸ್ವಲ್ಪ ಸೇಫ್‌. ಶಾರ್ಟ್‌ ಶರ್ಕಿ­ಟ್‌­ನಂ­ತಹ ಮೇಜರ್‌ ಅನಾ­ಹು­ತ­ಗ­ಳಾ­ದಾಗ ಅಲ್ಲೂ ಕೂಡ ಸಮಸ್ಯೆ ಇದ್ದದ್ದೇ.
ಮಾಹಿತಿ ಬೇಕು: ಬೆಂಗ­ಳೂ­ರಂಥ ಊರಲ್ಲಿ ಬದು­ಕಲು ಅನ್ನ, ನೀರು, ಗಾಳಿ ಇವಿಷ್ಟು ಮಾತ್ರ ಇದ್ರೆ ಸಾಕಾ­ಗಲ್ಲ. ಇನ್ನೊಂದು ಮುಖ್ಯ­ವಾದ ಅಂಶ ಅಂದರೆ ಮಾಹಿತಿ. ಮಾಹಿ­ತಿಯ ಅರಿವು ಬೇಕೇ ಬೇಕು. ಈ ಊರ ಜೀವನ ಬಲು ಕಷ್ಟ­ಕರ. ಮುಳ್ಳಿನ ಮೇಲಿನ ಜೀವನ. ಯಾವಾಗ ಅದೇನು ಅಪಾಯ ಬರುತ್ತೆ ಅಂತ ಹೇಳ­ಲಿಕ್ಕೆ ಬರೊಲ್ಲ. ಒಂದು ದಿನ ಕರೆಂಟ್‌ ಇಲ್ಲ ಅಂದರೆ ಏನೇ­ನೆಲ್ಲಾ ಆಗಿ ಹೋಗುತ್ತೆ. ವಿದ್ಯುತ್‌ ಮೇಲಿನ ಅವ­ಲಂ­ಬನೆ ಇಲ್ಲಿ ತಾರಕ ಸ್ಥಿತಿ­ಯ­ಲ್ಲಿದೆ. ಬೇರೊಂದು ಶಕ್ತಿಯ ಮೂಲ ಇವ­ರಿಗೆ ಬೇಕಿಲ್ಲ! ಹಳ್ಳಿ­ಗ­ಳಲ್ಲಿ ದಿನಕ್ಕೆ 12 ಗಂಟೆ ಕರೆಂಟ್‌ ಮಾತ್ರ. ಪಾಪ! ಅವರು ವಿದ್ಯುತ್‌ ಬಗ್ಗೆ ತಲೆ­ಕೆ­ಡಿ­ಸಿ­ಕೊ­ಳ್ಳು­ವು­ದಿಲ್ಲ. ಸೀಮೆ­ಎಣ್ಣೆ ದೀಪ ಹಳ್ಳಿ­ಗ­ಳಲ್ಲಿ ಎಂದೆ­ದಿಗೂ `ನಂ­ದದ ದೀಪ.’
`ಮಾ­ಹಿತಿ ಇಂದು ಜಗ­ತ್ತನ್ನು ಆಳು­ತ್ತಿದೆ.’ ವಿದ್ಯುತ್‌ ಮಾಹಿತಿ ಮಾತ್ರ­ವಲ್ಲ. ಹವಾ­ಮಾನ ವರದಿ, ಕ್ರೈಮ್‌ ರಿಪೋರ್ಟ್‌, ಪ್ರಮುಖ ರಾಜ­ಕೀಯ ಆಗು­ಹೋ­ಗು­ಗಳು ಇವೆ­ಲ್ಲ­ದರ ಮಾಹಿತಿ ಬೇಕು. ಎಲ್ಲೋ ನಡೆ­ಯುವ ಒಂದು ಘಟನೆ ಅಲ್ಲಿಗೆ ಮಾತ್ರ ಸೀಮಿ­ತ­ವಲ್ಲ. ನಾಳೆ ಇಲ್ಲೇ ಸಂಭ­ವಿ­ಸಿ­ಬಿ­ಡ­ಬ­ಹುದು. ಇಲ್ಲಿಯ ಅದೆಷ್ಟೋ ಕಟ್ಟ­ಡ­ಗಳು ಭಯೋ­ತ್ಪಾ­ದಕ ಸ್ಫೋಟನಾ ಪಟ್ಟಿ­ಯ­ಲ್ಲಿವೆ. ಇದೆ­ಲ್ಲ­ದರ ಮಾಹಿತಿ ಇದ್ದರೆ ಒಳ್ಳೆ­ಯದು.

ಕಾಮೆಂಟ್‌ಗಳಿಲ್ಲ: