
ಭೂಮಿ ಕೊಳ್ಳುವ ಮುನ್ನ
ಪರಿಸರ ನಿವೇಶನ ಅಧ್ಯಯನ
ಬೆಂಗಳೂರಿನಲ್ಲಿ ಒಂದು ನಿವೇಶನ ಕೊಳ್ಳಲು ಅವಶ್ಯಕವಾಗಿ ಪರಿಶೀಲಿಸಬೇಕಾದ ಅಂಶಗಳು ಯಾವುವು?
ಈ ಪ್ರಶ್ನೆಗೆ ಬರುವ ಉತ್ತರಗಳು ಅಪಾರ. ನಿವೇಶನ ಇರುವ ಏರಿಯಾ, ಅದರ ದಾಖಲಾತಿ ಕಾಗದ ಪತ್ರಗಳು, ಪಾವತಿ ಮಾಡಬೇಕಾದ ಕಂದಾಯ ವಿವರ, ಅಳತೆ, ದರ...ಇವಿಷ್ಟು ಅಗತ್ಯವಾಗಿ ಪರಿಶೀಲಿಸಲೇ ಬೇಕಾದ ಅಂಶಗಳು.
ಇವುಗಳ ಜೊತೆಗೆ ಇನ್ನುಮುಂದೆ ಇನ್ನೊಂದು ಅಂಶವನ್ನು ಪರಿಶೀಲಿಸಬೇಕಾಗುತ್ತದೆ. ಅದು `ನಿವೇಶನ ಪರಿಸರ ಅಧ್ಯಯನ'(ಎನ್ವಿರಾನ್ಮೆಂಟ್ ಸೈಟ್ ಅಸೆಸ್ಮೆಂಟ್). ಇಲ್ಲಿಯ ತನಕ ಪರಿಸರ ಪರಿಣಾಮ ಅಧ್ಯಯನ(ಎನ್ವಿರಾನ್ಮೆಂಟ್ ಇಂಪ್ಯಾಕ್ಟ್ ಅಸೆಸ್ಮೆಂಟ್(ಇಐಎ) ಮಾತ್ರ ಇತ್ತು. ಇದೇನಿದು ಪರಿಸರ ನಿವೇಶನ ಅಧ್ಯಯನ ಎಂದು ಆಶ್ಚರ್ಯವಾಗಬಹುದು. ಆದರೆ ಪರಿಸರ ಪರಿಣಾಮ ಅಧ್ಯಯನಕ್ಕೂ ಪರಿಸರ ನಿವೇಶನ ಅಧ್ಯಯನಕ್ಕೂ ಬಹಳ ವ್ಯತ್ಯಾಸವಿದೆ.
ಏನಿದು ನಿವೇಶನ ಅಧ್ಯಯನ: ಪರಿಸರ ನಿವೇಶನ ಅಧ್ಯಯನವನ್ನು ಒಂದೇ ಮಾತಿನಲ್ಲಿ ಹೇಳುವುದಾದರೆ `ನಿವೇಶನದ ವಾಸ ಯೋಗ್ಯತೆಯ ಪರಿಶೀಲನೆ' ಎನ್ನಬಹುದು. ನಿವೇಶನದ ವಾಸ ಯೋಗ್ಯತೆಯನ್ನು ಅಧ್ಯಯನ ಮಾಡುವುದು ಕಡ್ಡಾಯವಾದರೆ ಅದರಿಂದ ಬಹಳ ಉಪಯೋಗವಿದೆ. ಅದರಲ್ಲೂ ಕೈಗಾರಿಕಾ ನಿವೇಶನಗಳಲ್ಲಿ ಈ ಅಧ್ಯಯನ ಕೈಗೊಳ್ಳುವುದರಿಂದ ಒಳಿತು ಜಾಸ್ತಿ.
ರಾಜ್ಯದಲ್ಲಿ ಹಲವು ಕೈಗಾರಿಕೆಗಳು ಲಾಕೌಟ್ ಆಗಿವೆ. ಇದಕ್ಕೆ ಕಾರಣವೇನು ಗೊತ್ತೆ? ಮುಖ್ಯವಾಗಿ ನಿವೇಶನದಲ್ಲಿ ಅಂತರ್ಜಲ ಇಲ್ಲದಿರುವುದು.
ಕೇವಲ ಇದೊಂದು ಕಾರಣದಿಂದ ಇಡೀ ಕೈಗಾರಿಕೆಯನ್ನೇ ಮುಚ್ಚಿದ ಬಹಳಷ್ಟು ಉದಾಹರಣೆಗಳಿವೆ. ಆ ಕೈಗಾರಿಕಾ ಪ್ರದೇಶವನ್ನು ಕೊಳ್ಳುವುದಕ್ಕೆ ಮುಂಚೆ ನಿವೇಶನ ಪರಿಸರ ಅಧ್ಯಯನ ಕೈಗೊಂಡಿದ್ದರೆ ಈ ರೀತಿಯ ಲಾಕೌಟ್ ತಪ್ಪಿಸಬಹುದಾಗಿತ್ತು.
ಕೆಲವು ನಿವೇಶನಗಳನ್ನು ಮುಂಚೆ ತ್ಯಾಜ್ಯ ವಸ್ತು ನಿರ್ವಹಣೆಗಾಗಿ ಬಳಸಲಾಗುತ್ತಿರುತ್ತದೆ. ಅಂತಹ ನಿವೇಶನದಲ್ಲಿ ಮನೆ ಅಥವಾ ಕೈಗಾರಿಕೆ ನಿರ್ಮಾಣ ಮಾಡಿದರೆ ರೋಗ ಹರಡುವ ಸಾಧ್ಯತೆ ಇರುತ್ತದೆ. ಅಮೆರಿಕಾದ ಚಿಕಾಗೋದಲ್ಲಿ ವಿಷಾನಿಲ ನಿರ್ವಹಣೆ ಮಾಡಿದ ನಿವೇಶನದ ಮೇಲೆ ಶಾಲೆ ನಿರ್ಮಾಣ ಮಾಡಿ ಹಲವು ಶಾಲಾ ಮಕ್ಕಳು ಮೃತಪಟ್ಟಿದ್ದನ್ನು ಇಲ್ಲಿ ಉಲೇಖ ಮಾಡಬಹುದು. ಈ ಪ್ರಕರಣದ ನಂತರ ಅಮೆರಿಕಾದಲ್ಲಿ ನಿವೇಶನ ಪರಿಸರ ಅಧ್ಯಯನ ಕಡ್ಡಾಯವಾಯಿತು.
ಅಲ್ಲದೆ ಕೆಲವು ನಿವೇಶನಗಳಲ್ಲಿ ೃಹತ್ ಬೆಂಕಿ ಅಪಘಾತ ಸಂಭವಿಸಿದ್ದರೆ ಆ ನಿವೇಶನ ಸುತ್ತ ಅಂತರ್ಜಲ ಬತ್ತಿ ಹೋಗುವ ಸಾಧ್ಯತೆ ಇರುತ್ತದೆ. ಅನಿಲ ಸೋರಿಕೆ ಹಾಗೂ ಸ್ಫೋಟ ಉಂಟಾಗಿರುವ ನಿವೇಶನಗಳಲ್ಲೂ ಅಪಾಯ ಇರುತ್ತದೆ. ಆದ್ದರಿಂದ ನಿವೇಶನ ಕೊಳ್ಳುವುದಕ್ಕೆ ಮುಂಚೆ ಅದರ ವಾಸ ಯೋಗ್ಯತೆಯನ್ನು ಪರಿಶೀಲಿಸಿದರೆ ಅನುಕೂಲ.
ಹಲವು ಪಾಶ್ಚಾತ್ಯ ದೇಶಗಳಲ್ಲಿ ಪರಿಸರ ನಿವೇಶನ ಅಧ್ಯಯನ ಕಡ್ಡಾಯ. ಭಾರತದಲ್ಲಿ ಕಡ್ಡಾಯವಲ್ಲದಿದ್ದರೂ ಈ ಪರಿಕಲ್ಪನೆಯನ್ನು ಇತ್ತೀಚೆಗೆ ಬಹಳ ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ಭಾರತದಲ್ಲಿ ಪ್ರಥಮವಾಗಿ ಪರಿಸರ ನಿವೇಶನ ಅಧ್ಯಯನವನ್ನು ಬೆಂಗಳೂರಿನಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ. ಅದಕ್ಕಾಗಿ ಪರಿಸರ ತಜ್ಞರು ನಿವೇಶನ ಪರಿಸರ ಅಧ್ಯಯನ ಕಡ್ಡಾಯ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅಧ್ಯಯನ ಮಾಡುವವರು ಯಾರು?: ಪರಿಸರ ನಿವೇಶನ ಅಧ್ಯಯನ ಇಲ್ಲಿ ಕಡ್ಡಾಯವಲ್ಲದ ಕಾರಣ ಪರಿಶೀಲನೆಗಾಗಿ ಸರ್ಕಾರದಿಂದ ಯಾವುದೇ ವ್ಯವಸ್ಥೆ ಇಲ್ಲ. ಆದರೆ ಬೆಂಗಳೂರಿನಲ್ಲಿ ಖಾಸಗೀ ಕಂಪನಿಯೊಂದು ನಿವೇಶನ ಪರಿಸರ ಅಧ್ಯಯನ ಸೇವೆ ನೀಡುತ್ತದೆ.
ಮಡಿವಾಳ ಬಡಾವಣೆಯಲ್ಲಿರುವ `ಎನ್ಜೆನ್' ಕಂಪನಿಯು ಪರಿಸರ ನಿವೇಶನ ಅಧ್ಯಯನ ಸೇವೆ ನೀಡುತ್ತಿದೆ. ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಹಲವು ಕೈಗಾರಿಕಾ ನಿವೇಶನಗಳಿಗೆ ಈ ಕಂಪನಿ ಪರಿಸರ ನಿವೇಶನ ಅಧ್ಯಯನ ಮಾಡಿಕೊಟ್ಟಿದೆ.
ಕೇವಲ ಲಾಕೌಟ್ ಆದ ಕೈಗಾರಿಕಾ ಪ್ರದೇಶ ಮಾತ್ರವಲ್ಲದೆ ವಾಸದ ಮನೆಗಳ ನಿವೇಶನ, ಅಪಾರ್ಟ್ಮೆಂಟ್ ನಿವೇಶನಗಳಲ್ಲೂ ಕೂಡ ಎನ್ಜೆನ್ ಅಧ್ಯಯನ ಕೈಗೊಳ್ಳುತ್ತದೆ. ಆ ಮೂಲದ ನಿವೇಶನದ ಉಪಯೋಗವನ್ನು ನಿರ್ಧರಿಸಿ ದರ ನಿರ್ಧಾರಕ್ಕೆ ಸಹಾಯ ಮಾಡುತ್ತದೆ. ಇಲ್ಲಿಯವರೆಗೆ ಹಲವು ಕೈಗಾರಿಕೆ ನಿವೇಶನ ಅಧ್ಯಯನ ಮಾಡಿ ಮಾರಾಟ ದರ ನಿರ್ಧಾರಕ್ಕೆ ಅನುವು ಮಾಡಿಕೊಟ್ಟಿದೆ.
ಕೈಗಾರಿಕೋದ್ಯಮಿ ಎಸ್.ವಿ. ಗೌತಮ್ ರಾಜ್ ಪೀಣ್ಯದಲ್ಲಿ ಸ್ವತಃ ಕೈಗಾರಿಕೆಯೊಂದನ್ನು ಸ್ಥಾಪಿಸಿದ್ದಾರೆ. ಇವರು ಪರಿಸರ ನಿವೇಶನ ಅಧ್ಯಯನವನ್ನು ಬಲವಾಗಿ ನಂಬುತ್ತಾರೆ.
`ರಿಯಲ್ ಎಸ್ಟೇಟ್ ವೃತ್ತಿಮಾಡುವ ಮಧ್ಯವರ್ತಿಗಳಿಲ್ಲದೆ ಬೆಂಗಳೂರಿನಲ್ಲಿ ಇವತ್ತು ಒಂದಿಂಚೂ ಭೂಮಿ ಕೊಳ್ಳಲು ಸಾಧ್ಯವಿಲ್ಲ. ಯಾವುದೋ ಕಾಗದ ಪತ್ರ ತೋರಿಸಿ ಯಾಮಾರಿಸುವರೇ ಜಾಸ್ತಿ. ಇಂತಹ ಸ್ಥಿತಿಯಲ್ಲಿ ಕೈಗಾರಿಕಾ ನಿವೇಶನವನ್ನು ಅಧ್ಯಯನ ಮಾಡಿಸುವುದರಿಂದ ಆ ಪ್ರದೇಶ ಹಿಂದೆ ಏನಾಗಿತ್ತು. ಯಾವುದಕ್ಕೆ ಬಳಸಲಾಗುತಿತ್ತು ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು' ಎನ್ನುತ್ತಾರೆ ಗೌತಮ್ರಾಜ್.
ನಿವೇಶನದ ಉಪಯೋಗ ಸಾಮರ್ಥ್ಯ: ಈ ಅಧ್ಯಯನ ಕೈಗೊಳ್ಳುವುದರಿಂದ ಬಹಳ ಉಪಯೋಗವಿದೆ. ಭೂಮಿಯ ಉಪಯುಕ್ತತೆ ಮತ್ತು ಅನುಪಯುಕ್ತತೆಯನ್ನು ಅಳೆಯಲು ಈ ಅಧ್ಯಯನ ಸಹಾಯಕವಾಗುತ್ತದೆ.
ಬೆಂಗಳೂರಿನಲ್ಲಿ ತ್ಯಾಜ್ಯ ವ್ಯರ್ಥ ನಿರ್ವಹಣೆಗೆ ನಿವೇಶನ ಹುಡುಕಾಟ ಯಾವಾಗಲು ನಡೆಯುತ್ತಲೇ ಇರುತ್ತದೆ. ನಗರದ ಹೊರ ವಲಯದಲ್ಲಿ ಮುಖ್ಯರಸ್ತೆಯಲ್ಲೇ ತಾಜ್ಯ ಸುರಿದಿರುವುದನ್ನು ಗಮನಿಸಬಹುದು. ಹೆಚ್ಚು ಉಪಯುಕ್ತವಾದ ನಿವೇಶನದಲ್ಲಿ ತ್ಯಾಜ್ಯ ಸುರಿಯುವ ಬದಲು ನಿವೇಶನದ ಪರಿಸರ ಅಧ್ಯಯನ ಮಾಡಿ ಹೆಚ್ಚು ಉಪಯುಕ್ತ ಭೂಮಿಯಲ್ಲಿ ತ್ಯಾಜ್ಯ ನಿರ್ವಹಣೆ ಮಾಡುವುದನ್ನು ತಡೆಯಬಹುದು.
ಈ ಅಧ್ಯಯನದ ಇನ್ನೊಂದು ಉಪಯೋಗವೆಂದರೆ ಪರಿಸರ ರಕ್ಷಣೆ. ಪರಿಸರ ಹಿತವನ್ನೇ ಮುಖ್ಯವಾಗಿಟ್ಟುಕೊಂಡೇ ರೂಪಿಸಲಾಗಿರುವ ಪರಿಕಲ್ಪನೆಯನ್ನು ಬೆಂಗಳೂರಿನಲ್ಲಿ(ಕಡೇಪಕ್ಷ) ಕಡ್ಡಾಯಗೊಳಿಸಿದರೆ ರಿಯಲ್ ಎಸ್ಟೇಟ್ ಹೆಸರಿನಲ್ಲಿ ನಡೆಯುತ್ತಿರುವ ಭೂಮಿಯ ಮೇಲಿನ ಹಲ್ಲೆಯನ್ನು ತಡೆಯಬಹುದು.
ಪರಿಸರ ನಿವೇಶನ ಅಧ್ಯಯನ
ಬೆಂಗಳೂರಿನಲ್ಲಿ ಒಂದು ನಿವೇಶನ ಕೊಳ್ಳಲು ಅವಶ್ಯಕವಾಗಿ ಪರಿಶೀಲಿಸಬೇಕಾದ ಅಂಶಗಳು ಯಾವುವು?
ಈ ಪ್ರಶ್ನೆಗೆ ಬರುವ ಉತ್ತರಗಳು ಅಪಾರ. ನಿವೇಶನ ಇರುವ ಏರಿಯಾ, ಅದರ ದಾಖಲಾತಿ ಕಾಗದ ಪತ್ರಗಳು, ಪಾವತಿ ಮಾಡಬೇಕಾದ ಕಂದಾಯ ವಿವರ, ಅಳತೆ, ದರ...ಇವಿಷ್ಟು ಅಗತ್ಯವಾಗಿ ಪರಿಶೀಲಿಸಲೇ ಬೇಕಾದ ಅಂಶಗಳು.
ಇವುಗಳ ಜೊತೆಗೆ ಇನ್ನುಮುಂದೆ ಇನ್ನೊಂದು ಅಂಶವನ್ನು ಪರಿಶೀಲಿಸಬೇಕಾಗುತ್ತದೆ. ಅದು `ನಿವೇಶನ ಪರಿಸರ ಅಧ್ಯಯನ'(ಎನ್ವಿರಾನ್ಮೆಂಟ್ ಸೈಟ್ ಅಸೆಸ್ಮೆಂಟ್). ಇಲ್ಲಿಯ ತನಕ ಪರಿಸರ ಪರಿಣಾಮ ಅಧ್ಯಯನ(ಎನ್ವಿರಾನ್ಮೆಂಟ್ ಇಂಪ್ಯಾಕ್ಟ್ ಅಸೆಸ್ಮೆಂಟ್(ಇಐಎ) ಮಾತ್ರ ಇತ್ತು. ಇದೇನಿದು ಪರಿಸರ ನಿವೇಶನ ಅಧ್ಯಯನ ಎಂದು ಆಶ್ಚರ್ಯವಾಗಬಹುದು. ಆದರೆ ಪರಿಸರ ಪರಿಣಾಮ ಅಧ್ಯಯನಕ್ಕೂ ಪರಿಸರ ನಿವೇಶನ ಅಧ್ಯಯನಕ್ಕೂ ಬಹಳ ವ್ಯತ್ಯಾಸವಿದೆ.
ಏನಿದು ನಿವೇಶನ ಅಧ್ಯಯನ: ಪರಿಸರ ನಿವೇಶನ ಅಧ್ಯಯನವನ್ನು ಒಂದೇ ಮಾತಿನಲ್ಲಿ ಹೇಳುವುದಾದರೆ `ನಿವೇಶನದ ವಾಸ ಯೋಗ್ಯತೆಯ ಪರಿಶೀಲನೆ' ಎನ್ನಬಹುದು. ನಿವೇಶನದ ವಾಸ ಯೋಗ್ಯತೆಯನ್ನು ಅಧ್ಯಯನ ಮಾಡುವುದು ಕಡ್ಡಾಯವಾದರೆ ಅದರಿಂದ ಬಹಳ ಉಪಯೋಗವಿದೆ. ಅದರಲ್ಲೂ ಕೈಗಾರಿಕಾ ನಿವೇಶನಗಳಲ್ಲಿ ಈ ಅಧ್ಯಯನ ಕೈಗೊಳ್ಳುವುದರಿಂದ ಒಳಿತು ಜಾಸ್ತಿ.
ರಾಜ್ಯದಲ್ಲಿ ಹಲವು ಕೈಗಾರಿಕೆಗಳು ಲಾಕೌಟ್ ಆಗಿವೆ. ಇದಕ್ಕೆ ಕಾರಣವೇನು ಗೊತ್ತೆ? ಮುಖ್ಯವಾಗಿ ನಿವೇಶನದಲ್ಲಿ ಅಂತರ್ಜಲ ಇಲ್ಲದಿರುವುದು.
ಕೇವಲ ಇದೊಂದು ಕಾರಣದಿಂದ ಇಡೀ ಕೈಗಾರಿಕೆಯನ್ನೇ ಮುಚ್ಚಿದ ಬಹಳಷ್ಟು ಉದಾಹರಣೆಗಳಿವೆ. ಆ ಕೈಗಾರಿಕಾ ಪ್ರದೇಶವನ್ನು ಕೊಳ್ಳುವುದಕ್ಕೆ ಮುಂಚೆ ನಿವೇಶನ ಪರಿಸರ ಅಧ್ಯಯನ ಕೈಗೊಂಡಿದ್ದರೆ ಈ ರೀತಿಯ ಲಾಕೌಟ್ ತಪ್ಪಿಸಬಹುದಾಗಿತ್ತು.
ಕೆಲವು ನಿವೇಶನಗಳನ್ನು ಮುಂಚೆ ತ್ಯಾಜ್ಯ ವಸ್ತು ನಿರ್ವಹಣೆಗಾಗಿ ಬಳಸಲಾಗುತ್ತಿರುತ್ತದೆ. ಅಂತಹ ನಿವೇಶನದಲ್ಲಿ ಮನೆ ಅಥವಾ ಕೈಗಾರಿಕೆ ನಿರ್ಮಾಣ ಮಾಡಿದರೆ ರೋಗ ಹರಡುವ ಸಾಧ್ಯತೆ ಇರುತ್ತದೆ. ಅಮೆರಿಕಾದ ಚಿಕಾಗೋದಲ್ಲಿ ವಿಷಾನಿಲ ನಿರ್ವಹಣೆ ಮಾಡಿದ ನಿವೇಶನದ ಮೇಲೆ ಶಾಲೆ ನಿರ್ಮಾಣ ಮಾಡಿ ಹಲವು ಶಾಲಾ ಮಕ್ಕಳು ಮೃತಪಟ್ಟಿದ್ದನ್ನು ಇಲ್ಲಿ ಉಲೇಖ ಮಾಡಬಹುದು. ಈ ಪ್ರಕರಣದ ನಂತರ ಅಮೆರಿಕಾದಲ್ಲಿ ನಿವೇಶನ ಪರಿಸರ ಅಧ್ಯಯನ ಕಡ್ಡಾಯವಾಯಿತು.
ಅಲ್ಲದೆ ಕೆಲವು ನಿವೇಶನಗಳಲ್ಲಿ ೃಹತ್ ಬೆಂಕಿ ಅಪಘಾತ ಸಂಭವಿಸಿದ್ದರೆ ಆ ನಿವೇಶನ ಸುತ್ತ ಅಂತರ್ಜಲ ಬತ್ತಿ ಹೋಗುವ ಸಾಧ್ಯತೆ ಇರುತ್ತದೆ. ಅನಿಲ ಸೋರಿಕೆ ಹಾಗೂ ಸ್ಫೋಟ ಉಂಟಾಗಿರುವ ನಿವೇಶನಗಳಲ್ಲೂ ಅಪಾಯ ಇರುತ್ತದೆ. ಆದ್ದರಿಂದ ನಿವೇಶನ ಕೊಳ್ಳುವುದಕ್ಕೆ ಮುಂಚೆ ಅದರ ವಾಸ ಯೋಗ್ಯತೆಯನ್ನು ಪರಿಶೀಲಿಸಿದರೆ ಅನುಕೂಲ.
ಹಲವು ಪಾಶ್ಚಾತ್ಯ ದೇಶಗಳಲ್ಲಿ ಪರಿಸರ ನಿವೇಶನ ಅಧ್ಯಯನ ಕಡ್ಡಾಯ. ಭಾರತದಲ್ಲಿ ಕಡ್ಡಾಯವಲ್ಲದಿದ್ದರೂ ಈ ಪರಿಕಲ್ಪನೆಯನ್ನು ಇತ್ತೀಚೆಗೆ ಬಹಳ ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ಭಾರತದಲ್ಲಿ ಪ್ರಥಮವಾಗಿ ಪರಿಸರ ನಿವೇಶನ ಅಧ್ಯಯನವನ್ನು ಬೆಂಗಳೂರಿನಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ. ಅದಕ್ಕಾಗಿ ಪರಿಸರ ತಜ್ಞರು ನಿವೇಶನ ಪರಿಸರ ಅಧ್ಯಯನ ಕಡ್ಡಾಯ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅಧ್ಯಯನ ಮಾಡುವವರು ಯಾರು?: ಪರಿಸರ ನಿವೇಶನ ಅಧ್ಯಯನ ಇಲ್ಲಿ ಕಡ್ಡಾಯವಲ್ಲದ ಕಾರಣ ಪರಿಶೀಲನೆಗಾಗಿ ಸರ್ಕಾರದಿಂದ ಯಾವುದೇ ವ್ಯವಸ್ಥೆ ಇಲ್ಲ. ಆದರೆ ಬೆಂಗಳೂರಿನಲ್ಲಿ ಖಾಸಗೀ ಕಂಪನಿಯೊಂದು ನಿವೇಶನ ಪರಿಸರ ಅಧ್ಯಯನ ಸೇವೆ ನೀಡುತ್ತದೆ.
ಮಡಿವಾಳ ಬಡಾವಣೆಯಲ್ಲಿರುವ `ಎನ್ಜೆನ್' ಕಂಪನಿಯು ಪರಿಸರ ನಿವೇಶನ ಅಧ್ಯಯನ ಸೇವೆ ನೀಡುತ್ತಿದೆ. ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಹಲವು ಕೈಗಾರಿಕಾ ನಿವೇಶನಗಳಿಗೆ ಈ ಕಂಪನಿ ಪರಿಸರ ನಿವೇಶನ ಅಧ್ಯಯನ ಮಾಡಿಕೊಟ್ಟಿದೆ.
ಕೇವಲ ಲಾಕೌಟ್ ಆದ ಕೈಗಾರಿಕಾ ಪ್ರದೇಶ ಮಾತ್ರವಲ್ಲದೆ ವಾಸದ ಮನೆಗಳ ನಿವೇಶನ, ಅಪಾರ್ಟ್ಮೆಂಟ್ ನಿವೇಶನಗಳಲ್ಲೂ ಕೂಡ ಎನ್ಜೆನ್ ಅಧ್ಯಯನ ಕೈಗೊಳ್ಳುತ್ತದೆ. ಆ ಮೂಲದ ನಿವೇಶನದ ಉಪಯೋಗವನ್ನು ನಿರ್ಧರಿಸಿ ದರ ನಿರ್ಧಾರಕ್ಕೆ ಸಹಾಯ ಮಾಡುತ್ತದೆ. ಇಲ್ಲಿಯವರೆಗೆ ಹಲವು ಕೈಗಾರಿಕೆ ನಿವೇಶನ ಅಧ್ಯಯನ ಮಾಡಿ ಮಾರಾಟ ದರ ನಿರ್ಧಾರಕ್ಕೆ ಅನುವು ಮಾಡಿಕೊಟ್ಟಿದೆ.
ಕೈಗಾರಿಕೋದ್ಯಮಿ ಎಸ್.ವಿ. ಗೌತಮ್ ರಾಜ್ ಪೀಣ್ಯದಲ್ಲಿ ಸ್ವತಃ ಕೈಗಾರಿಕೆಯೊಂದನ್ನು ಸ್ಥಾಪಿಸಿದ್ದಾರೆ. ಇವರು ಪರಿಸರ ನಿವೇಶನ ಅಧ್ಯಯನವನ್ನು ಬಲವಾಗಿ ನಂಬುತ್ತಾರೆ.
`ರಿಯಲ್ ಎಸ್ಟೇಟ್ ವೃತ್ತಿಮಾಡುವ ಮಧ್ಯವರ್ತಿಗಳಿಲ್ಲದೆ ಬೆಂಗಳೂರಿನಲ್ಲಿ ಇವತ್ತು ಒಂದಿಂಚೂ ಭೂಮಿ ಕೊಳ್ಳಲು ಸಾಧ್ಯವಿಲ್ಲ. ಯಾವುದೋ ಕಾಗದ ಪತ್ರ ತೋರಿಸಿ ಯಾಮಾರಿಸುವರೇ ಜಾಸ್ತಿ. ಇಂತಹ ಸ್ಥಿತಿಯಲ್ಲಿ ಕೈಗಾರಿಕಾ ನಿವೇಶನವನ್ನು ಅಧ್ಯಯನ ಮಾಡಿಸುವುದರಿಂದ ಆ ಪ್ರದೇಶ ಹಿಂದೆ ಏನಾಗಿತ್ತು. ಯಾವುದಕ್ಕೆ ಬಳಸಲಾಗುತಿತ್ತು ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು' ಎನ್ನುತ್ತಾರೆ ಗೌತಮ್ರಾಜ್.
ನಿವೇಶನದ ಉಪಯೋಗ ಸಾಮರ್ಥ್ಯ: ಈ ಅಧ್ಯಯನ ಕೈಗೊಳ್ಳುವುದರಿಂದ ಬಹಳ ಉಪಯೋಗವಿದೆ. ಭೂಮಿಯ ಉಪಯುಕ್ತತೆ ಮತ್ತು ಅನುಪಯುಕ್ತತೆಯನ್ನು ಅಳೆಯಲು ಈ ಅಧ್ಯಯನ ಸಹಾಯಕವಾಗುತ್ತದೆ.
ಬೆಂಗಳೂರಿನಲ್ಲಿ ತ್ಯಾಜ್ಯ ವ್ಯರ್ಥ ನಿರ್ವಹಣೆಗೆ ನಿವೇಶನ ಹುಡುಕಾಟ ಯಾವಾಗಲು ನಡೆಯುತ್ತಲೇ ಇರುತ್ತದೆ. ನಗರದ ಹೊರ ವಲಯದಲ್ಲಿ ಮುಖ್ಯರಸ್ತೆಯಲ್ಲೇ ತಾಜ್ಯ ಸುರಿದಿರುವುದನ್ನು ಗಮನಿಸಬಹುದು. ಹೆಚ್ಚು ಉಪಯುಕ್ತವಾದ ನಿವೇಶನದಲ್ಲಿ ತ್ಯಾಜ್ಯ ಸುರಿಯುವ ಬದಲು ನಿವೇಶನದ ಪರಿಸರ ಅಧ್ಯಯನ ಮಾಡಿ ಹೆಚ್ಚು ಉಪಯುಕ್ತ ಭೂಮಿಯಲ್ಲಿ ತ್ಯಾಜ್ಯ ನಿರ್ವಹಣೆ ಮಾಡುವುದನ್ನು ತಡೆಯಬಹುದು.
ಈ ಅಧ್ಯಯನದ ಇನ್ನೊಂದು ಉಪಯೋಗವೆಂದರೆ ಪರಿಸರ ರಕ್ಷಣೆ. ಪರಿಸರ ಹಿತವನ್ನೇ ಮುಖ್ಯವಾಗಿಟ್ಟುಕೊಂಡೇ ರೂಪಿಸಲಾಗಿರುವ ಪರಿಕಲ್ಪನೆಯನ್ನು ಬೆಂಗಳೂರಿನಲ್ಲಿ(ಕಡೇಪಕ್ಷ) ಕಡ್ಡಾಯಗೊಳಿಸಿದರೆ ರಿಯಲ್ ಎಸ್ಟೇಟ್ ಹೆಸರಿನಲ್ಲಿ ನಡೆಯುತ್ತಿರುವ ಭೂಮಿಯ ಮೇಲಿನ ಹಲ್ಲೆಯನ್ನು ತಡೆಯಬಹುದು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ