
ಜೇನು ಗೋಳು!
ಮಧುವನ್ನು ಹೀರಲು ಹೋದ ಜೇನು ಮನೆಗೆ ಹಿಂದಿರುಗಿ ಬರುತ್ತಿಲ್ಲ. ಗೂಡಿನಲ್ಲಿ ಮೊಟ್ಟೆ ಯೊಂದಿಗೆ ಇರುವ ರಾಣಿ ಜೇನು ಮಧುಪಾನದ ಜೊತೆ ಬರುವ ಗೆಳೆಯನ ದಾರಿ ಕಾಯುತ್ತಿದ್ದಾಳೆ. ಗೂಡಿನಲ್ಲಿ ತಿನ್ನಲು ಏನೂ ಇಲ್ಲ. ರಾಣಿ ಜೇನಿನ ಜೊತೆಗಿರುವ ಸಾವಿರ ಸಂಖ್ಯೆಯ ಜೇನು ಸೈನ್ಯಕ್ಕೆ ಹೊಟ್ಟೆ ತಾಳ ಹಾಕುತ್ತಿದೆ......... ಪಾಪ ಸಿಹಿಜೇನು ಕೊಡುವ ಈ ನೋಣಗಳ ಕಷ್ಟ ಹೇಳತೀರದು. ಪರಿಸ್ಥಿತಿ ಹೀಗಿರುವಾಗ ಎಲ್ಲಿಂದಲೋ ಬರುವ ಮಾಯಾವಿ ಮಾರುತ ಜೇನು ನೊಣಗಳ ಜೀವನ ಕಿತ್ತುಕೊಂಡಿದೆ!ಹೌದು, ಉತ್ತರದಿಂದ ದಕ್ಷಿಣದ ವರೆಗೆ, ಪೂರ್ವದಿಂದ ಪಶ್ಚಿಮದ ವರೆಗೆ ಚಾಚಿ ಕೊಂಡಿರುವ ಮೊಬೈ್ ತರಂಗಗಳು ಜೇನುನೊಣಗಳ ಪಾಲಿಗೆ ಮಾಯಾವಿ ಮಾರುತಗಳಾಗಿವೆ.ನೀವು ಮಾಯಾನಗರಿ ಬೆಂಗಳೂರಿನಲ್ಲಿ ಇತ್ತೀಚೆಗೆ ಜೇನುಗೂಡು ಕಂಡಿದ್ದೀರಾ? ಹಾಗೆ ಯೋಚಿಸಿ, ದೊಡ್ಡ ದೊಡ್ಡ ಕಟ್ಟಡಗಳು ಜೇನು ಗೂಡಿನಿಂದ ಮಿಂಚುತ್ತಿದ್ದವು. ಅದರಲ್ಲೂ ಹಳೆಯ ಕಟ್ಟಡಗಳಲ್ಲಿ ಜೇನುಗೂಡು ಸದಾ ಇರುತ್ತಿದ್ದವು. ಹಳೆಯ ಕಟ್ಟಡ ಕಟ್ಟುವ ಶೈಲಿ ಜೇನುಗೂಡಿಗೆ ಆಶ್ರಯ ಕೊಡುತ್ತಿತ್ತು. ಹಳೇ ಕಟ್ಟಡಗಳು ಜೇನಿಗೆ ಹೇಳಿ ಮಾಡಿಸಿದ ಜಾಗ ಆಗಿದ್ದವು. ಆದರೆ ಈಗ ಕಟ್ಟಡಗಳು ಜೇನು ಗೂಡಿಗೆ ಆಶ್ರಯ ಕೊಡುತ್ತಿಲ್ಲ. ಜೇನು ಹುಳ ಈಗಾಗಲೇ ಊರು ಬಿಟ್ಟಿದೆ. ಹೈಕೋರ್ ಕೂಡ ಜೇನಿನ ಆಶ್ರಯ ತಾಣವಾಗಿತ್ತು. ಈಗ ಅಲ್ಲಿ ಹುಡುಕಿದರೂ ಜೇನು ಗೂಡು ಸಿಗುವುದಿಲ್ಲ. ಇದಕ್ಕೆ ಕಾರಣ ಈ ವಿಷಯುಕ್ತ ಮೊಬೈ್ ತರಂಗ. ವಿಧಾನ ಸೌಧದಲ್ಲಿ ಜೇನಿಗೆ ಜಾಗ ಇಲ್ಲ. ಮಂತ್ರಿ ಮಹೋದಯರ ಭದ್ರತೆಯ ದೃಷ್ಟಿಯಿಂದ ಜೇನು ಗೂಡುಗಳನ್ನು ಕಿತ್ತು ಹಾಕಿದ್ದಾರೆ! ಜಯನಗರದ ನ್ಯಾಷನ್ ಕಾಲೇಜು ಜೇನು ನೊಣಗಳಿಗೆ ಸ್ವರ್ಗವಾಗಿತ್ತು. ಯಾವಾಗ ಸ್ಟೂಡೆಂ್ ಕೈಯಲ್ಲಿ ಸೆ್ ಫೋ್ ಬಂದವೋ ಆಗಲೆ ಜೇನಿನ ಸ್ವರ್ಗ ಕಳಚಿ ಬಿತ್ತು. ಮೆಯೋ ಹಾ್, ಯುಟಿಲಿಟಿ ಬಿಲ್ಡಿಂ್, ಮಣಿಪಾ್ ಸೆಂಟ್ ಗಳಂಥಾ ಬಹುಮಹಡಿ ಕಟ್ಟಡಗಳಲ್ಲಿಯೂ ಜೇನು ಗೂಡು ಕಾಣೆಯಾಗಿವೆ.ಹೋಗಲಿ ಜೇನಿಗೆ ಮರಗಳಾದರೂ ಆಶ್ರಯ ಕೊಡುತ್ತವೆಯೇ? ಗೂಡುಕಟ್ಟವಂಥಾ ಮರಗಳಿಗೆ ಈಗಾಗಲೇ ಬಿಬಿಎಂ ಕೊಡಲಿ ಬಿದ್ದಿದೆ. ಶೇಷಾದ್ರಿ ಪುರಂ ರಸ್ತೆಯಲ್ಲಿದ್ದ ಮರಗಳು ಜೇನಿಗೂಡಿಗೆ ಒಳ್ಳೆಯ ಜಾಗವಾಗಿತ್ತು. ಆದರೆ ಆ ರಸ್ತೆಯ ಹಸಿರು ಕೋಟೆ ಈಗ ಮಾಯವಾಗಿದೆ.ಮಾಯಾ ಮಾರುತ: ನಗರಾದಾದ್ಯಂತ ಲಕ್ಷಾಂತರ ಮೊಬೈ್ ಟವ್ಗಳು ಬೀದಿ ಬೀದಿಯಲ್ಲಿ ಕಾಲುಕಾಲಿಗೆ ಸಿಗುತ್ತವೆ. ಸಾವಿರಾರು ಮೊಬೈ್ ಕಂಪನಿಗಳ ಈ ನೆ್ವಕಜೇನು ನೊಣಗಳ ಪಾಲಿಗೆ ದೊಡ್ಡ ಅಪಾಯ ಒಡ್ಡಿದೆ.ರಾಣಿ ಜೇನಿಗೆ ಮೊಟ್ಟೆ ಇಡಲು ಕಷ್ಟವಾಗಿದೆ. ದಿನದಲ್ಲಿ ಆಕೆಗೆ 1500 ಮೊಟ್ಟ ಇಡುವ ಶಕ್ತಿ ಇದೆ. ವರ್ಷಕ್ಕೆ 25000 ಮೊಟ್ಟೆ ಇಡಬಲ್ಲಳು. ಜೀವನ ಪರ್ಯಂತ ಒಂದು ಮಿಲಿಯ್ ಮೊಟ್ಟೆ ಇಡುವ ಶಕ್ತಿ ಹೊಂದಿರುವ ರಾಣಿ ಜೇನಿನ ಆರೋಗ್ಯದ ಮೇಲೆ ಮೊಬೈ್ ತರಂಗ ವಿಷಕಾರಕ ಪರಿಣಾಮ ಬೀರಿ ಅವಳ ಶಕ್ತಿಯನ್ನು ಕುಂದಿಸಿದೆ. ಜೇನು ಮೊಟ್ಟೆಗಳ ಮೇಲು ಈ ತರಂಗಗಳು ವ್ಯತಿರಿಕ್ತ ಪರಿಣಾಮ ಬೀರಿವೆ.ಸಂಶೋಧನೆ: ಪಂಜಾ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ನಡೆಸಿದ ಸಂಶೋಧನೆಯ ಪ್ರಕಾರ ಮೊಬೈ್ ತರಂಗಗಳು ಜೇನು ನೊಣಗಳ ಪಾಲಿಗೆ ಶಾಪವಾಗಿವೆ. ಈ ಗಾಳಿಯಿಂದ ಜೇನು ನೊಣಗಳ ಶಕ್ತಿಯನ್ನು ಕೊಂದು ಹಾಕುತ್ತಿವೆ. ಒಮ್ಮೆ ಈ ಮಾರುತದ ದೃಷ್ಟಿ ಬಿದ್ದರೆ, ಶಕ್ತಿ ಕಳೆದುಕೊಂಡ ಜೇನು ನೊಣ ಕಳೆಹೀನವಾಗುತ್ತದೆ ಎಂಬುದು ಸಂಶೋಧನೆಯಿಂದ ಕಂಡುಬಂದಿದೆ. ಈ ಮೊಬೈ್ ತರಂಗಗಳಲ್ಲಿ ಎಲೆಕ್ಟ್ರೋ ಮಾಗ್ನಟಿಕಅಂಶ ಹೆಚ್ಚಾಗಿರುತ್ತದೆ. ಒಂದು ರೀತಿಯ ವಿದ್ಯು್ ಶಾಕಈ ಶಾಕಜೇನು ಹೊರಬರಲಾಗದೆ ಸಾಯುತ್ತವೆ ಎಂಬುದನ್ನು ಸಂಶೋಧನೆ ಪತ್ತೆ ಮಾಡಿದೆ. ಅಲ್ಲದೆ ಒಂದು ಹಂತದ ಹೊರಗೆ ಜೇನುನೊಣ ಈ ಮ್ಯಾಗ್ನಟಿಕಅಂಶವನ್ನು ಸಹಿಸಿಕೊಳ್ಳಬಲ್ಲದು. ಅದಕ್ಕಿಂತ ಹೆಚ್ಚಾದರೆ ಜೇನು ನೊಣದ ಶಕ್ತಿ ಕುಂದುತ್ತದೆ ಎಂಬುದು ಸಂಶೋಧಕರ ಅಭಿಪ್ರಾಯ.ಜೇನಿಗೆ ಜ್ವರ: ಮೊಬೈ್ ತರಂಗಗಳಿಂದ ಮುಖ್ಯವಾಗಿ ಜೇನು ನೊಣಗಳಲ್ಲಿ ಜ್ವರ ಕಾಣಿಸಿಕೊಳ್ಳುತ್ತಿದೆ. ಒಂದು ಜೇನು ನೊಣಕ್ಕೆ ಜ್ವರ ಬಂದರೆ ತಕ್ಷಣ ಇತರ ಜೇನು ನೊಣಗಳಿಗೆ ಹರಡಿ ಇಡೀ ಗೂಡು ಬೆಂಕಿ ಚೆಂಡಾಗುತ್ತದೆ. ಹೊರಗೆ ಹೋದ ಜೇನು ಸೈನ್ಯ ಜರಯುಕ್ತ ಜೇನು ಗೂಡಿಗೆ ಮರಳುವುದಿಲ್ಲ. ಹೀಗಾಗಿ ಜ್ವರಪೀಡಿತ ಜೇನುಗೂಡು ಬಿದ್ದು ಸಾಯುತ್ತದೆ.ಮುಂದೇನು: ಪರಿಸ್ಥಿತಿ ಇದೇ ರೀತಿ ಮುಂದೆವರೆದರೆ ಜೇನನ್ನು ಇನ್ನುಮುಂದೆ ನಾವು ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೋಡಲು ಸಾಧ್ಯವಿಲ್ಲ. ತಜ್ಞರ ಪ್ರಕಾರ `ಜೇನು ಕಾಲೋನಿ'ಗಳಲ್ಲಿ ನಿರ್ಮಿಸಿ ಮೊಬೈ್ ತರಂಗಗಳು ಒಳಬಾರದ ಫ್ರೂ್ನೊಳಗೆ ಜೇನು ಸಾಗಣೆ ಮಾಡುವ ಪರಿಸ್ಥಿರಿ ನಿರ್ಮಾಣವಾಗಬಹುದು ಎಂಬುದು ಅವರ ಅಭಿಪ್ರಾಯ. ಕಾಲೋನಿ ವ್ಯವಸ್ಥೆ ಈಗಾಗಲೆ ಇದೆ. ಮೊಬೈ್ ರೇಡಿಯೇಶ್ ಫ್ರೂ್ ಕಾಲೋನಿಯನ್ನು ನಿರ್ಮಿಸಬೇಕು ಎಂದು ತಜ್ಞರು ಹೇಳುತ್ತಾರೆ.ಮೊಬೈ್ ಮಾಯಾ ಮಾರುತಗಳು ಜೇನು ನೊಣಗಳ ಬದುಕನ್ನು ಕೊಂದಿವೆ. ಈ ವಿಷಯುಕ್ತ ನೆ್ವಕ ಗುಬ್ಬಚ್ಚಿ, ಪಾರಿವಾಳದಂತಹ ಪಕ್ಷಿಗಳ ಬದುಕಿಗೂ ಧಕ್ಕೆ ಮಾಡಿದೆ. ಈಗ ಸಿಹಿಜೇನು ಕೊಡುವ ಜೇನುಹುಳುವಿನ ಬಾಳಿನ್ನೂ ಹಾಳು ಮಾಡುತ್ತಿದೆ.